Skip to main content

ಪ್ರಚಲಿತ ಘಟನೆಗಳು

ಸಿಂಗ್ - ಬಾರೊ ಮಾವ ಏನ ಸಮಾಚಾರ
ಕಿಂಗ್ - ಸಿಂಗ್ ಅಕ್ಷಯ ಪಾತ್ರೆ ಬರಿದಾಗಿದ್ದ ಯಾವಾಗಾದರೂ ಕೇಳಿದಿ ಏನಪಾ
ಸಿಂಗ್ - ಇಲ್ಲ ಈಗೇನಾತ?
ಕಿಂಗ್-  ಭಾರತೀಯ ಜೀವ ವಿಮಾ ನಿಗಮದವ್ರು ಜೀವನ ಅಕ್ಷಯ ಎಂಬ ಪಾಲಸಿಯನ್ನ. ಬಂದ ಮಾಡಾತಾರ
ಸಿಂಗ್ - ಹೊಯ್ಕೋರಿ ಅವನೌನ
ಕಿಂಗ್ - ಎಲ್ಲಿ ಹೊಯ್ಕೋತಿ ನಡಿ ಎಗ್ಗರೈಸ್ ತಿನಸ ನಡಿ
ಸಿಂಗ್ - ಎಗ್ಗರೈಸ್ ಅಂದಕೂಡಲೆ ನೆಂಪ ಆತ ನೋಡ ಸುಧಾಮೂರ್ತಿರವರು ಮಕ್ಕಳಿಗಾಗಿ ಒಂದ ಪುಸ್ತಕ ಬರದಾರಪಾ.
ಕಿಂಗ್- ಅದರ ಹೆಸರೇನ?
ಸಿಂಗ್- ದ ಮ್ಯಾನ ಫ್ರಂ  ದ ಎಗ್ : ಅನಯೂಸುವಲ್ ಟೇಲ್ಸ್ ಅಬೌಟ ದ ಟ್ರಿನಿಟಿ
ಕಿಂಗ್- ಮಸ್ತ ಆತ ಬಿಡು
ಸಿಂಗ್- ಮಾವ ಇನ್ನ ಮ್ಯಾಲ ಮದ್ರಾಸದಿಂದ ಮಲೇಷ್ಯಾಕ ಲಿಂಕ್ ಆಗಾತೈತಿ ಪಾ
ಕಿಂಗ್- ಹೆಂಗ?
ಸಿಂಗ್ - ಅಕ್ರಮ ಮರಳುಗಾರಿಕೆ ತಡೆಯಲು ಮಲೇಷ್ಯಾದಿಂದ ಮರಳನ್ನು ಆಮದು ಮಾಡಿಕೊಳ್ಳಲು ಮದ್ರಾಸ ಹೈಕೋರ್ಟಿನ ಮಧುರೈ ಪೀಠ ಒಪ್ಪಿಗೆ ನೀಡೈತಿ.
ಕಿಂಗ್- ಹಂಗಾರ ಭಾರಸ್ ಭಜನಿ ಜಗ್ಗ ನಕ್ಕನ ಜಗ್ಗ ಜಗ್ಗನಕ್ಕನ ನಾ
ಸಿಂಗ್- ಭಜನಿ ಏನ್ ಭಾರಸ್ತಿ , ಐ ಎನ್ ಎಸ್ ಕಿಲ್ಟನ್ ಅಂದ್ರ ಗೊತ್ತನ ನಿಂಗ?
ಕಿಂಗ್ - ಗೊತ್ತಿಲ್ಲಪಾ
ಸಿಂಗ್ - ಹೇಳ್ತನಿ ಚಿತ್ತಗೊಟ್ಟ ಕೇಳ. ಇದು ದೇಶಿಯವಾಗಿ ನಿರ್ಮಿಸಿದ ಸಬ್ ಮರೀನ್ ನಿರೋಧಕ ರಹಸ್ಯ ಯುದ್ಧನೌಕೆ
ಕಿಂಗ್ - ನಾವು ಫವರ್ ಫುಲ್ ಆದು ಬಿಡ. ಕಿಲ್ಟನ್ ಟನ್ ಗಟ್ಟಲೆ ಸ್ಟ್ರಾಂಗ್ ಇದೆ ಅಂದಂಗಾತು
ಸಿಂಗ್ - ಭಾರತದಾಂವ ಯಾರೊ ಬ್ರಿಟನ್ನಿನ ಅತಿ ಕಿರಿಯ ಶ್ರೀಮಂತನೆಂಬ ಕೀರ್ತಿ ಪಡಕೊಂಡಾನಂತಲೊ
ಕಿಂಗ್- ಹ್ಞುಂ ಅವನ ಹೆಸರು ರುಪರೇಲಿಯಾ
ಸಿಂಗ್ - ಏನು ರೂಪಾಯಿ ಲೆ ಲಿಯಾನ?
ಕಿಂಗ್ - ಅಲ್ಲೊ ಮಾರಾಯಾ ರುಪರೇಲಿಯಾ.ರಿಯಲ್ ಎಸ್ಟೇಟ್ ಕಮೀಷನ್ ಬ್ಯುಸಿನೆಸ ಮಾಡ್ತಿದಾನಂತ
ಸಿಂಗ್ - ಲಕ್ಷ್ಮೀ ಪುತ್ರ ಬಿಡು.
ಕಿಂಗ್- ಮ್ಯಾನ್ಮಾರನಲ್ಲಿ ಯಾವುದೊ ಕಂಪನಿ ಎಣ್ಣಿ ಮಾರಾಕ ಹೋಗೈತಂತಲ
ಸಿಂಗ್- ಎಂತಹ ಎಣ್ಣೆ ? ನಡಿಯೊ ಮಾರಾಯಾ ಎಣ್ಣಿ ಹೊಡಸ ನಡಿ.
ಕಿಂಗ್ - ಮಾರಾಯಾ ಅಂಥ ಎಣ್ಣೆ ಅಲ್ಲ. ಗಾಡಿಗೆ ಹಾಕೊ ತೈಲ
ಸಿಂಗ್- ಹಿಂಗನ. ಯಾವ ಕಂಪನಿ ಅದ?
ಕಿಂಗ್- ಹಿಂದೂಸ್ತಾನ ಪೆಟ್ರೋಲಿಯಂ ಕಂಪನಿ
ಸಿಂಗ್-  ಸಾರೆ ಜಹಾಂಸೆ ಅಚ್ಚಾ . ಹಿಂದೂಸ್ತಾನ ಎಣ್ಣೆ ಬಚ್ಚಾ .
ಕಿಂಗ್ - ಮಸ್ತ ಹಾಡ ಕಟ್ಟತಿ ಬಿಡ
ಸಿಂಗ್ - ಅದೆಲ್ಲಾ ಇರವಾತು ಇಂದ್ರಾನಗರದೊಳಗ ಯಾವುದೊ ಮನಿ ಬಿದ್ದೈತಿ ಅಂತಲೊ
ಕಿಂಗ್ - ಹ್ಞುಂ ಆ ನಿಂಗನ ಮನಿಪಾ ಅದು. ಅಲ್ಲಿ ಭಾರತ ಮತ್ತು ರಷ್ಯಾ ತ್ರಿವಳಿ ಸಮರಾಭ್ಯಾಸ ನಡಿಸಿದು. ಅದರ ಹೆಸರ ಇಂದ್ರಾ ಅಂತ ಇಟ್ಟಿದ್ರು ತಿಳಿತೆನ.
ಸಿಂಗ್ - ಪಕ್ಕಾ ತಿಳಿತ ನೋಡ ಈಗ
ಕಿಂಗ್ - ಇಲ್ಲಿ ನೋಡೊ ಮೊಬೈಲ್ ದಾಗ ಹೆಂಗ ಹೆಣ್ಮಕ್ಕಳ ಕುಸ್ತಿ ಹಿಡದ್ದಾರು.
ಸಿಂಗ್ - ಮಳ್ಳ ಹಳೆ ಮಳ್ಳ ಇದು ಕುಸ್ತಿ ಅಲ್ಲ ಡಬ್ಲು ಡಬ್ಲು ಇ ಅಂತಾರ ಇದಕ. ಇದರೊಳಗ ಸ್ಪರ್ಧಾ ಮಾಡಲಿಕ ಭಾರತದ ಕವಿತಾದೇವಿ ಹೆಸರ ಕೊಟ್ಟಾರ.ಇದರೊಳಗ ಸ್ಪರ್ಧಾ ಮಾಡೊ ಮೊದಲ ಮಹಿಳೆ ಇವಳ ಪಾ
ಕಿಂಗ್ - ಮೊದಲ ಒನಕೆ ಓಬವ್ವ ಕಿತ್ತೂರ ಚೆನ್ನವ್ವನ ನಾಡ ಇದ.ಇಂತಹ ನಾಡನ್ಯಾಗ ಹೆಣ್ಣುಲಿಗಳು ಗರ್ಜಿಸಲೆಬೇಕು.
ಸಿಂಗ್ - ಮಾರಾಯಾ ಹೆಣ್ಣುಲಿ ಅಂದಕೂಡಲೆ ನೆಂಪ ಆತ ನೋಡ.ನನ್ನ  ಹೆಂಡತಿ ಚಟ್ನಿ ಮಾಡಾಕ ತೆಂಗಿನಕಾಯಿ ತರಾಕ ಕಳಸಿದ್ಲು. ಈಗ ಹಂಗ ಹೋದರ ನನ್ನ ಚಟ್ನಿ ಮಾಡ್ತಾಳ. ನಾ ಬರ್ತೆನ ಮಾವ . ನಮ್ಮ ನಮ್ಮ ನಮಸ್ಕಾರ

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...