Skip to main content

Posts

Showing posts from June, 2021

ಅದೃಷ್ಟವಂತ @ ಆನಂದ ಮಾಲಗಿತ್ತಿಮಠ ಕತೆ

               ಶ್ರೀರಂಗಪುರದ ರಂಗೇಗೌಡರೆಂದರೆ ಊರವರಿಗೆಲ್ಲ ಅದೇನೋ ಭಯ ಮತ್ತು ಭಕ್ತಿ. ಊರು ಪ್ರಾರಂಭವಾಗುವುದೇ ಗೌಡರ ಮನೆಯಿಂದ. ತುಂಬ ಹಳೆ ಕಾಲದ ಮನೆಯದು. ಹೊರಗಡೆ ನಿಂತು ನೋಡಿದರೆ ಅರಮನೆಯೆನೋ ಎಂದನಿಸುವಷ್ಟು ವಿಶಾಲತೆ. ಒಳಗಡೆ ಒಳ್ಳೆ ಗಟ್ಟಿ ಸಾಗವಾನಿಯ ಗಜಗಾತ್ರದ ಕಂಬಗಳು, ಅವುಗಳ ಮೈಮೇಲೆ‌ ಅಂದವಾದ ಎಳೆಬಳ್ಳಿಯ, ನಗೆನವಿಲುಗಳ, ಪುಷ್ಪಗುಚ್ಛದ ಕುಸುರಿ ಕೆತ್ತನೆ ಕಣ್ಮನ ಸೆಳೆಯುವಂತಿತ್ತು. ಗೋಡೆಗೆ ನೇತುಹಾಕಿದ ಬಂದೂಕುಗಳು ಗೌಡರ ಗತ್ತಿಗೆ ಸಾಕ್ಷಿಯಾಗಿದ್ದವು. ಮನೆಯ ಸುತ್ತಲೂ ತೆಂಗಿನ ಮರಗಳು ಫಲಬಿಟ್ಟು ತೂಗಾಡುತ್ತಿದ್ದವು. ಎಡಭಾಗದಲ್ಲಿ ಗೌಡ್ತಿಯು ಅಕ್ಕರೆಯಿಂದ ಬೆಳೆಸಿದ ಹೂದೋಟದ ತುಂಬ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತ ಸ್ವರ್ಗಸೌಂದರ್ಯವನ್ನು ಧರೆಗಿಳಿಸಿದ್ದವು. ಹಂಚಿನ ಮಾಳಿಗೆಯ ಅಡಿಯಲ್ಲಿ ಪಾರಿವಾಳಗಳು, ಹಸಿರು ಗಿಣಿಗಳು, ಹತ್ತಾರು ಗುಬ್ಬಚ್ಚಿಗಳು ತಮ್ಮ ತಮ್ಮ ಪುಟಾಣಿ ಸಂಸಾರವನ್ನು ಹೂಡಿಕೊಂಡು ನೆಮ್ಮದಿಯಾಗಿದ್ದವು. ಮನೆಯ ಬಲ ಭಾಗದಲ್ಲಿ ರಾಮ ಮತ್ತು ಲಕ್ಷ್ಮಣರದು ಒಂದು ಜೋಡಿ ಅವುಗಳ ಪಕ್ಕದಲ್ಲಿಯೇ ಭೀಮ ಮತ್ತು ಅರ್ಜುನರೆಂಬ ಬಲಿಷ್ಟವಾದ ಅಷ್ಟೇ ಸುಂದರವಾದ ನಾಲ್ಕೆತ್ತುಗಳಿಗಾಗಿ ನಿರ್ಮಿಸಿದ ಶೆಡ್ಡು,‌ ಗೌರಿ, ಕಾವೇರಿ, ಲಕ್ಷ್ಮೀಯೆಂಬ ಹಸುಗಳನ್ನು ಕಟ್ಟುವ ಕೊಟ್ಟಿಗೆ, ಎಲ್ಲರ ದಾಹ ತಣಿಸಲೆಂದೇ ಗೌಡರ ತಂದೆಯವರು ಕೊರೆಸಿದ ಬಾವಿ, ಅದರ ಪಕ್ಕದಲ್ಲಿಯೇ ಬೃಹತ್ತಾಗಿ ಮೈತುಂಬಿಕೊಂಡು ಬೆಳೆದು ನಿಂತಿಹ ಬೇವಿನ ಮರ.ಅದು

ಅಳತೆಯ ಸಾಧನಗಳು

೧. ದಿಕ್ಸೂಚಿ ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.  ೨. ರೇಡಾರ್ ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ. ೩. ಮೈಕ್ರೊಫೋನ್  ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು. ೪. ಮೆಘಾಪೋನ್  ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ. ೫. ಟೆಲಿಫೋನ್  ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.  ೬. ಲ್ಯಾಕ್ಟೋಮೀಟರ್  ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.  ೭. ಓಡೋಮೀಟರ್  ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.  ೮. ಮೈಕ್ರೋಮೀಟರ್  ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ. ೯. ಮೈಕ್ರೋಸ್ಕೋಪ್  ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು. ೧೦. ಹೈಗ್ರೋಮೀಟರ್  ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ. ೧೧. ಹೈಡ್ರೋಮೀಟರ್  ಉಪಯೋಗ:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.  ೧೨. ಹೈಡ್ರೋಫೋನ್  ಉಪಯೋಗ:- ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ. ೧೩. ಹೈಡ್ರೋಸ್ಕೋಪ್  ಉಪಯೋಗ:- ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ  ೧೪. ಥಮೋ೯ಮೀಟರ್  ಉಪಯೋಗ:- ಉಷ್ಣತೆಯನ್ನು  ಅಳೆಯಲು ೧೫. ಅಲ್ಟಿಮೀಟರ್  ಉಪಯೋಗ:- ಎತ್ತರ ಅಳೆಯಲು ಬಳಸುತ್ತ

ಶಿಕ್ಷಕನ ಸತ್ವಪರೀಕ್ಷೆ ಕತೆ

ಇಲ್ನೋಡೋ ರಾಮಣ್ಣಾ..ಕನಿಷ್ಟ ಜ್ಞಾನನೂ ಇಲ್ಲದೆ ಇರುವ ಸರ್ಕಾರಿ ಮೆಷ್ಟ್ರುಗಳು ಎಂಬ ಸುದ್ದಿ ಪ್ರಕಟವಾಗಿದೆ. ಓದಿದ್ಯಾ? ಎಂದು ಕಾಕಾ ಅಂಗಡಿಯಲ್ಲಿ ಟೀ ಕುಡಿಯುತ್ತ ಕುಳಿತಿದ್ದ  ಶ್ರೀನಿವಾಸ ಅಂದಿನ ಸುದ್ದಿ ಪತ್ರಿಕೆ ಓದುತ್ತ ಪ್ರಶ್ನಿಸಿದ. ಆ ಸುದ್ಧಿಯೇ ರಕ್ತಬೀಜಾಸುರನಂತೆ ಮರುಹುಟ್ಟು ಪಡೆದು ಪಡೆದು ತಮ್ಮೂರಿನ ಮೇಷ್ಟ್ರಗಳು ಬಂಡವಾಳವನ್ನೇ ಕಂತು ಕಂತಾಗಿ ಕುಳಿತವರ ಬಾಯಿಯಿಂದ ಕಕ್ಕಿಸತೊಡಗಿತ್ತು. ಅದಕ್ಕೆ ಹೇಳೋದು ಸರ್ಕಾರಿ ಶಾಲೆಗೆ ಸೇರಿಸೋದು ಬ್ಯಾಡ ಅಂತ. ಇಂತಹವರ ಕೈಯಾಗ ಕಲತ ನಮ್ಮ ಹುಡುಗ್ರು ಹೇಗ ಉದ್ದಾರ ಆಗಬೇಕು? ಅಂತ ಒಬ್ಬ ಕೇಳಿದ. ಹೌದೌದು..ಇಷ್ಟೆಲ್ಲ ಖಾಸಗಿ ಶಾಲೆಗಳು, ಅವುಗಳಲ್ಲಿ ನೊಣಗಳಂತೆ ಬುಚಾಡಿಸುವ ಮಕ್ಕಳು  ಅವರೆಲ್ಲಾ ಮೂರ್ಖರೇನು? ಸರ್ಕಾರಿ ಶಾಲೆಯಲ್ಲಿ ಇಂತಹ ಅಯೋಗ್ಯ ಮೇಷ್ಟ್ರುಗಳಿದ್ದಾರಂತೆಯೆ ಖಾಸಗಿ ಶಾಲೆಗಳ ಅಬ್ಬರ ಜೋರಾಗಿರುವುದು ಅಂತ ಮಗದೊಬ್ಬನ ಅನಿಸಿಕೆ. ಒಟ್ಟಿನಲ್ಲಿ ಸರ್ಕಾರಿ ಶಾಲೆಯ ಹಣೆಬರಹ ಗಲ್ಲಿಗಲ್ಲಿಯಲ್ಲಿಯೂ ನಿರ್ಧಾರವಾಗುವಂತೆ ಮಾಡಿತ್ತು ಅಂದು ಪ್ರಕಟವಾದ ಸುದ್ದಿ. ***** ಹಿರಿಯೂರಿನ ಸರ್ಕಾರಿ ಶಾಲೆಗೆ ಯಾರೋ ಮೇಲಧಿಕಾರಿಗಳು ಇತ್ತೀಚಿಗೆ ಭೇಟಿ ನೀಡಿದ್ದರು. ಶಾಲಾ ತಪಾಸಣಾ ಕಾರ್ಯ ಕೈಗೊಂಡಾಗ ಮೇಷ್ಟ್ರುಗಳಿಗೆ ವಿಷಯ ಜ್ಞಾನದ ಕೊರತೆಯಿರುವುದನ್ನು ಕಂಡು ಹಿಗ್ಗಾಮುಗ್ಗಾ ಜಾಡಿಸಿದ್ದರು. ಮೇಷ್ಟ್ರೇ ನೀವು ಬರುವುದು ಶಾಲೆ ಕಲಿಸೋದಕ್ಕಾ ಅಥವಾ ದನ ಮೇಯಿಸೋದಕ್ಕಾ ? ಅಂತ ಖಾರವಾಗಿ ಪ್ರಶ್ನಿಸಿದ್ದರು