Skip to main content

Posts

Showing posts from October, 2021

ಮಂಜು ಮುಸುಕಿದ ಹಾದಿ @ ವಿದ್ಯಾರೆಡ್ಡಿ

ಶೀಲವಿಲ್ಲದ ಶೀಲಾ, ವಿದ್ಯೆಯಿಲ್ಲದ ಮುಗ್ದೆ ಶೀಲಾ, ಬೆಳ್ಳಗಿರುವುದೆಲ್ಲ ಹಾಲು, ಹೊಳೆಯುವುದೆಲ್ಲಾ ಚಿನ್ನ ಎಂದು ನಂಬಿದ ಶೀಲಾ, ಆಧುನಿಕ ಪ್ರಪಂಚದ ಚಕ್ರವ್ಯೂಹದೊಳಗೆ ಬಂಧಿಯಾದ ಶೀಲಾ....ಶೀಲಾಳ ಕತೆ ಓದುತ್ತಾ ಹೋದಂತೆ ಕಣ್ಣೆವೆಗಳು ಆರ್ದ್ರವಾಗುತ್ತವೆ. ಪ್ರಸ್ತುತ ಲೋಕದ ಕನ್ನಡಿಯಂತೆ ಚಿತ್ರಿತವಾಗಿದೆ ಶ್ರೀಮತಿ ವಿದ್ಯಾರೆಡ್ಡಿಯವರ ಮಂಜು ಮುಸುಕಿದ ಹಾದಿ. ಮಂಜು ಮುಸುಕಿದ ಹಾದಿ ನಮ್ಮೆಲ್ಲರನ್ನೂ ಸುಲಭವಾಗಿ ಓದಿಸಿಕೊಂಡು ಹೋಗುವುದರೊಂದಿಗೆ ಚಿಂತನೆಗೂ ಹಚ್ಚುತ್ತದೆ. ಕಾದಂಬರಿಯ ಪಾತ್ರಗಳು ನಮ್ಮ ಸುತ್ತಲಿನ ವ್ಯಕ್ತಿಗಳಲ್ಲಿಯೇ ಅಂತರ್ಗತವಾಗುತ್ತ ಹೋಗುವುದು ಇದರ ವಿಶೇಷ. ಶ್ರೀಮತಿ ವಿದ್ಯಾರೆಡ್ಡಿಯವರು ಕಾದಂಬರಿಯುದ್ದಕ್ಕೂ ಓದುಗರನ್ನು ಕರೆದುಕೊಂಡು ಹೋಗುತ್ತಾರೆ. ಇಲ್ಲಿ ಓದುಗರಿಗೂ ಹಾಗೂ ನಿರೂಪಕರಿಗೂ ಅರಿವಾಗದಂತೆಯೇ ಒಂದು ರೀತಿ ಆಪ್ತತೆ ಬೆಳೆದು ಬಿಡುತ್ತದೆ. ಕಾದಂಬರಿಯ ಕಥಾವಸ್ತುವಿಗೆ ಬರುವುದಾದರೆ ಇಲ್ಲಿ ಶೀಲಾಳ ಜೀವನವೇ ಪ್ರಮುಖವಾಗಿದ್ದು ಕ್ರೌರ್ಯವು ಹೇಗೆ ಮುಗ್ಧತೆಯನ್ನು ಆವರಿಸಿಕೊಳ್ಳುತ್ತಾ ಹೋಗಿ ಕೊನೆಗೆ ಆಹುತಿಯನ್ನು ಪಡೆಯುತ್ತದೆ ಎಂಬುವುದನ್ನು ಕಾಣಬಹುದಾಗಿದೆ. ನರಸಾಪೂರವೆಂಬ ಹಳ್ಳಿಯ ಕುಟುಂಬವೊಂದರಿಂದ ಆರಂಭವಾಗುವ ಕತೆ ಶೀಲಾಳ ಅಪ್ಪನ ಸಾವಿನೊಂದಿಗೆ ಓಘವನ್ನು ಪಡೆದುಕೊಳ್ಳುತ್ತದೆ. ಸ್ವರ್ಗ ನರಕಗಳು ಬೇರಿಲ್ಲ, ಈಗ ಮಾಡಿರುವುದನ್ನು ಇಲ್ಲಿಯೇ ತೀರಿಸಬೇಕು ಎಂಬ ತತ್ವವನ್ನು ನಾವು ಕತೆಯಲ್ಲಿ ಗಮನಿಸಬಹುದು. ಮುಗ್ಧರ ಸುಲಿ

ಕಠಾರಿಗಢದ ಚಾರಣ

      ದೂರದಿಂದ ಕಾಣುವ ಕೋಟೆಯ ದೃಶ್ಯ   ವಿಜಯದಶಮಿಯ ದಿನ ವಿಜಯಯಾತ್ರೆಗೆ ಸಿದ್ದಗೊಂಡು ಹೊರಟಿದ್ದಾಯಿತು. ಮುರಗೋಡ ಮಾರ್ಗವಾಗಿ ಅದರ ಈಶಾನ್ಯಕ್ಕೆ ಹೊರಳಿದರೆ ಅಲ್ಲಿಂದ 9 ಕಿ.ಮೀ ನಲ್ಲಿ ಕಾಣಸಿಗುವುದೇ ಸುಬ್ಬಾಪೂರ.‌ಸುಬ್ಬಾಪೂರವು ಹಿಂದೆ ಸುಬ್ರಹ್ಮಣ್ಯಪುರವಾಗಿದ್ದು ಕಾಲಾನಂತರದಲ್ಲಿ ಸುಬ್ಬಾಪೂರಾಗಿ ಉಳಿದಿದೆ. ಸುಮಾರು 500 ಜನಸಂಖ್ಯೆಯಿರುವ ಪುಟ್ಟಗ್ರಾಮ. ಈ ಗ್ರಾಮಕ್ಕೆ ಹೋಗುವಾಗ ಮುಂಚೆಯೇ ರಾಮಾಪೂರವೆಂಬ ಇನ್ನೊಂದು ಗ್ರಾಮ ಸಿಗುವುದು. ಅಲ್ಲಿಂದಲೇ ನಮಗೆ ಸುಬ್ಬಾಪೂರದ ಗಿರಿದುರ್ಗ ಕಾಣತೊಡಗುತ್ತದೆ. ಮದುವೆ ಗಂಡಿಗೆ ತೊಡಿಸಿದ ಭಾಷಿಂಗದಂತೆ ಗುಡ್ಡದ ಮೇಲೆ ನಿಂತ ಐತಿಹಾಸಿಕ ಗಢ ನಮ್ಮನ್ನು ಆಕರ್ಷಿಸುತ್ತದೆ.ಅದನ್ನು ನೋಡಿ ನನಗೆ ಖುಷಿಯ ಜೊತೆಗೆ ಚೂರು ಭಯವೂ ಆಗಿ ನನ್ನ ಗೆಳೆಯನಿಗೆ ಬೈಕ್ ಸ್ಟಾಪ್ ಮಾಡಲು ಹೇಳಿದೆ. "ದೋಸ್ತ ಆ ಗುಡ್ಡಾ ಹತ್ತಾಕ ಆಗತೈತಿಲೋ ನೋಡೋ?" ಎಂದೆ. ಆತನೂ ಮತ್ತೊಮ್ಮೆ ನೋಡಿ "ಲೇ ಬೈಕ ಹೋಗಾಕ ದಾರಿ ಇರತೈತಿ ನಡೀ" ಅಂದ. ನನಗ ಸ್ವಲ್ಪ ಧೈರ್ಯ ಬಂತು. "ಹೌದೋ! ಈ ವಯಸ್ಸಿನ್ಯಾಗ ಈ ಗುಡ್ಡಾ ಹತ್ತಲಿಲ್ಲ ಅಂದ್ರ ಇನ್ನ ಯಾವತ್ತೂ ಹತ್ತಲಿಕ್ಕೆ ಆಗೋದಿಲ್ಲ ನಡೆದಬಿಡು" ಎಂದು ಮತ್ತೆ ಪಯಣ ಮುಂದುವರೆಸಿದವು. ಸುಬ್ಬಾಪೂರಕೆ ಹೋಗಿ ಸ್ಥಳೀಯರಿಗೆ "ಕೋಟೆ ನೋಡ್ಬೇಕಲ್ರಿ" ಅಂತ ಹೇಳಿದ್ವಿ. ಅವರು "ಹಿಂಗ ಹೋಗ್ರಿ ಸರ್..ಎಲ್ಲಿಂದ ಬಂದೇರಿ? ನೀರ ಬಾಟಲ್ ತುಗೊಂಡ ಹೋಗ್ರಿ"

ಗಜಲ್ @ ಆನಂದ ಮಾಲಗಿತ್ತಿಮಠ

ಅವರಿಂದಿವರಿಗೆ ಇವರಿಂದವರಿಗೆ ನಡುವೆ ನಮಗೇನಿದೆ ಯಾರಿಂದ್ಯಾರಿಗೆ ಎಲ್ಲಿಂದೆಲ್ಲಿಗೆ ಸ್ವಾತಂತ್ರ್ಯವೇ ನಮಗೇನಿದೆ ಕೊಟ್ಟಿಹುದೇನೋ ಪಡೆದಿಹುದೇನೋ  ಮಾಯೆಯೊ ಹಳ್ಳಿಯಿಂದಿಲ್ಲಿಗೂ ನಾಯಕರಾದರೂ ಪ್ರಭುವೇ ನಮಗೇನಿದೆ ಬಾವುಟ ಹಿಡಿದಿಹ ಬಾಲವ ಬಡಿದಿಹ ಬಂಟರಿಗೇನೊ  ನೆಲದ ಒಡೆತನ ಬದಲಾದರೂ ಕರ್ಮವೇ ನಮಗೇನಿದೆ ಸೂಜಿಗೂ ತೆರಿಗೆಯಿತ್ತು ಸೂರಿಲ್ಲದೆ ತಿರುಗ್ಯಾರು ಉಳ್ಳವರೇ ಉತ್ಸವ ಮಾಡ್ಯಾರು ಶಂಭುವೇ ನಮಗೇನಿದೆ ಮತದಾರರಾದವರು ಅಥರ್ವನ ಕೇಳ್ಯಾರು ಸ್ವಾತಂತ್ರ್ಯದ ಸವಿಯಲಿ ಪಾಲು  ದೈವವೇ ನಮಗೇನಿದೆ  ಇದನ್ನೂ ಓದಿ ಸುಮ್ಮನಿರಲಾರದೇ ಬರಿ ಧರ್ಮವೆಂದೆ ಅಷ್ಟೇ

ಗಜಲ್@ ಆನಂದ ಮಾಲಗಿತ್ತಿಮಠ

ಸುಮ್ಮನಿರಲಾರದೆ ಬರಿ ಧರ್ಮವೆಂದೇ ಅಷ್ಟೇ ನಾನೇನೂ ಮಾಡಿರಲಿಲ್ಲ ಕೋಮುವಾದಿ ಎಂಬ ಬಿರುದು ಕೊಟ್ಟರಂದೇ ನಾನೇನೂ ಮಾಡಿರಲಿಲ್ಲ ತ್ರಾಸಿನಲಿ ಬರಿ ಪ್ರಾಸಗಳ ಜೋಡಿಸಿ, ಅಕ್ಷರಗಳ ಮಾಲೆ ಹೆಣೆದಿದ್ದೆ ಅಷ್ಟೇ ಕವಿಯೆಂದು ಕರೆದು ಪ್ರಶಸ್ತಿ ನೀಡಿಯೇ ಬಿಟ್ಟರಂದೇ ನಾನೇನೂ ಬರೆದಿರಲಿಲ್ಲ ಖಾದಿಯ ತೊಟ್ಟು ಓಣಿಯ ನಾಲ್ಕಾರು ಕದನಗಳನು ಬಗೆಹರಿಸಿದ್ದೆ ಅಷ್ಟೇ ರಾಜಕಾರಣಿಯೆಂದು ಜನ ಜೈಕಾರ ಹಾಕಿದರಂದೇ ನಾನೇನೂ ಮಾಡಿರಲಿಲ್ಲ ಪರದೆಯ ಮುಂದೆ ನಿಲ್ಲಿಸಿದಾಗ ಬರಿ ಬಾಯಿ ಬಡಿದೆ ಮೂಗನಂತೆ ಅಷ್ಟೇ ನಟಚಕ್ರವರ್ತಿಯೆಂದು ಪುತ್ಥಳಿಯನೇ ಮಾಡಿಟ್ಟರಂದೇ ನಾನೇನೂ ನಟಿಸಿರಲಿಲ್ಲ ಎದೆ ಎದೆ ಬಡಿದುಕೊಂಡು 'ಆನಂದ' ವಿರದೆ  ಹಸಿವು ಎಂದು ಕೂಗಿದೆ ಅಷ್ಟೇ ಅನ್ನದ ಬಟ್ಟಲ ಕಸಿದು  ಸಾಯಿ ಮಗನೇ ಅಂದರಂದೇ ನಾನೇನೂ ಬದುಕಲಿಲ್ಲ ಈ ಗಜಲ್ ನ್ನೂ ಓದಿ ನನಗೂ ದೇವರಿಗೂ ನಡುವೆ ಗೋಡೆ ಕಟ್ಟಿದಿರಿ, ಗುಡಿಯ ಹೆಸರಿನಲ್ಲಿ ಸಾಕಿ

ಗಜಲ್ @ ಆನಂದ ಮಾಲಗಿತ್ತಿಮಠ

ಸುಮ್ಮನೇ ಸಿಡುಕಬೇಡ ಮನದ ದಳಗಳು ಇನ್ನೂ ಮಿಡಿಯಾಗಿವೆ ತಪ್ಪುಗಳ ಎತ್ತಿ ತೋರಬೇಡ ಕೈ ಬೆರಳುಗಳು ಇನ್ನೂ ಮಿಡಿಯಾಗಿವೆ ಕಲ್ಪನೆಯ ಗುಹೆಯೊಳಗೆ ಕುಳಿತು ಬದುಕು ಬರಿಯ ಕತ್ತಲೆನಬೇಡ ಒಳಬಣ್ಣಗಳನು ಬೆತ್ತಲೆಗೊಳಿಸಲು ಕಿರಣಗಳು ಇನ್ನೂ ಮಿಡಿಯಾಗಿವೆ ದುರುಳರ ಕಾಮನೆಗಳ ಹಾಯಿದೋಣಿ ಮರುಳಾಗಿ ತೇಲುತಿರಲು ಅನ್ಯಾಯವೆನಬೇಡ ಮುಳುಗಿಸುವ ಅಲೆಗಳು ಇನ್ನೂ ಮಿಡಿಯಾಗಿವೆ ಮದಿರೆಯ ಅಮಲಿಗಿಂತ ಧರ್ಮದ ಅಮಲು ರುಚಿಯಾಗಿಹುದು ಸಾಕಿ ತಿಳಿಯದೆ ಇರಬೇಡ ನಿನಗೆ ತಿಳಿಸುವ ಜಿಹ್ವೆಗಳು ಇನ್ನೂ ಮಿಡಿಯಾಗಿವೆ. ಗಾಳಿಯ ಗೊಂಬೆಗಳ ಲೋಕದಲ್ಲಿ  ಚುಚ್ಚುವ ಸೂಜಿಗೇನು ಕಾಯಕ   ಮುರಿದೆಸೆದುಬಿಡು 'ಆನಂದ' ‌ಎಲ್ಲರ ಬಾಳುಗಳು ಇನ್ನೂ ಮಿಡಿಯಾಗಿವೆ ಈ ಗಜಲ್ ನ್ನೂ ಓದಿ ನನ್ನ ಮನೆಯ ಹಿತ್ತಲದ ಹೂವು ತತ್ತರಿಸಿ ಹೋಯಿತು