Skip to main content

ಗಜಲ್ @ ಆನಂದ ಮಾಲಗಿತ್ತಿಮಠ

ಅವರಿಂದಿವರಿಗೆ ಇವರಿಂದವರಿಗೆ ನಡುವೆ ನಮಗೇನಿದೆ
ಯಾರಿಂದ್ಯಾರಿಗೆ ಎಲ್ಲಿಂದೆಲ್ಲಿಗೆ ಸ್ವಾತಂತ್ರ್ಯವೇ ನಮಗೇನಿದೆ

ಕೊಟ್ಟಿಹುದೇನೋ ಪಡೆದಿಹುದೇನೋ  ಮಾಯೆಯೊ
ಹಳ್ಳಿಯಿಂದಿಲ್ಲಿಗೂ ನಾಯಕರಾದರೂ ಪ್ರಭುವೇ ನಮಗೇನಿದೆ

ಬಾವುಟ ಹಿಡಿದಿಹ ಬಾಲವ ಬಡಿದಿಹ ಬಂಟರಿಗೇನೊ 
ನೆಲದ ಒಡೆತನ ಬದಲಾದರೂ ಕರ್ಮವೇ ನಮಗೇನಿದೆ

ಸೂಜಿಗೂ ತೆರಿಗೆಯಿತ್ತು ಸೂರಿಲ್ಲದೆ ತಿರುಗ್ಯಾರು
ಉಳ್ಳವರೇ ಉತ್ಸವ ಮಾಡ್ಯಾರು ಶಂಭುವೇ ನಮಗೇನಿದೆ

ಮತದಾರರಾದವರು ಅಥರ್ವನ ಕೇಳ್ಯಾರು
ಸ್ವಾತಂತ್ರ್ಯದ ಸವಿಯಲಿ ಪಾಲು  ದೈವವೇ ನಮಗೇನಿದೆ 

ಇದನ್ನೂ ಓದಿ

Comments

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...