Skip to main content

Posts

Showing posts from July, 2021

ವ್ಯೂಹ

ಮಹೇಶ ಹಾಗೂ ಮಹತಿ ಆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿ ಇಂದಿಗೆ ಸರಿಸುಮಾರು ಐದು ವರ್ಷವಾಗಿರಬೇಕು. ಅಂದು ಉಟ್ಟ ಬಟ್ಟೆಯಲ್ಲಿಯೇ ಜೀವನದಲಿ ಮುಂದೇನು? ಎಂದು ಚಿಂತಿಸುತ್ತ ಬಂದವರಿಗೆ ಬೈಲಹೊಂಗಲದ ಗಣೇಶ ಗಲ್ಲಿಯ ಮನೆಯು ಆಶ್ರಯ ನೀಡಿತ್ತು. ಪ್ರಾರಂಭದಲ್ಲಿ ಮನೆಯ ಓನರ್ ಇವರಿಗೆ ಬಾಡಿಗೆ ಕೊಡಲು ಹಿಂದೆ ಮುಂದೆ ನೋಡಿದಾಗ ಮಹತಿಯ ಕೊರಳಲ್ಲಿಯ ಮಾಂಗಲ್ಯ ಸರವನ್ನು ಕಂಡು ಒಪ್ಪಿಕೊಂಡಿದ್ದ. ಮೊದಲೇ ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಇಬ್ರೂ ತೊಯ್ದು ತೊಪ್ಪೆಯಾಗಿ ಬಂದಿದ್ದರು. ಅವರ ಬದುಕಿನ ತಿಳಿನೀಲದಲಿ ಕಾರ್ಮೋಡಗಳಾಗಮಿಸಿ ಕಷ್ಟಗಳ ಸೋನೆಯೇ ಸುರಿದು ತೊಯ್ಯಿಸಿಕೊಂಡವರಿಗೆ ಈ ನೀರ ಮಳೆ ಯಾವ ಲೆಕ್ಕ ಎಂದೆನಿಸದೇ ಇರಲಿಲ್ಲ.          ಗಲ್ಲಿಗೆ ಬಂದ ಹೊಸದರಲ್ಲಿ ಎಲ್ಲರೂ ಅಪರಿಚಿತರೇ. ಕೆಲವರು ಮಹತಿಯನ್ನು ತಾನಾಗಿಯೇ ಮೇಲ್ಬಿದ್ದು ಮಾತನಾಡಿಸಿ, ಇವರೇನು ಶಾಸ್ತ್ರೋಕ್ತವಾಗಿ ಮದುವೆಯಾದವರೋ ಅಥವಾ ಓಡಿ ಬಂದವರೋ ಎಂಬುವುದನ್ನು ತಿಳಿಯಲು ಹವಣಿಸಿದವರೇ ಹೆಚ್ಚು. ಕಂಡವರ ವಿಷಯವೆಂದರೆ ಕೆಲವರಿಗೆ ಉಪ್ಪಿನಕಾಯಿ ಚಪ್ಪರಿಸಿದಂತೆ,ಅದಿಲ್ಲದೆ ಊಟವಾದರೂ ಹೇಗೆ ರುಚಿಸಿತು? ಮಹತಿಯು ಕೆಲವೇ ದಿನಗಳಲ್ಲಿ ತನ್ನ ಸಹಜ ಸ್ನೇಹಪರ ನಡುವಳಿಕೆಯಿಂದ ನೆರೆಹೊರೆಯವರಿಗೆ ಆಪ್ತಳಾಗಿ ಬಿಟ್ಟಳು. ತುಟಿಯಂಚಿನಲಿ ಬಾಡಿಹೋದ ನಗುವೆಂಬ ಕುಸುಮ ಮತ್ತೆ ಅರಳಿ, ಕುಚೇಲನ ಜೀವನವಾದರೂ ಸೈ, ಅಲ್ಲಿ ತುಸು ನೆಮ್ಮದಿ  ಆಗ ತಾನೆ ಉದಯಿಸುತ್ತಿತ್ತು.        ಋತುಗಳೊಂದಿಗೆ ಮನುಷ್ಯರ

ಕವಿಗಳು ಮತ್ತು ಬಿರುದುಗಳು

ಕವಿಗಳು ಮತ್ತು ಬಿರುದುಗಳು * ಉಪಮಾಲೋಲ, ನಾಗಲೋಲ ಎಂದು ಯಾವ ಕವಿಯನ್ನು ಕರೆಯುತ್ತಾರೆ?*  ಉತ್ತರ : ಲಕ್ಷ್ಮೀಶ  * ಷಟ್ಪದಿಯ ಬ್ರಹ್ಮ ________________ . ಉತ್ತರ : ರಾಘವಾಂಕ * ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಪೂರ್ಣ ಹೆಸರೇನು? ಉತ್ತರ : ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ * ಟಿ. ಪಿ. ಕೈಲಾಸಂ ರವರಿಗೆ ಇರುವ ಬಿರುದು ಯಾವುದು? ಉತ್ತರ : ಕನಾ೯ಟಕ ಪ್ರಹಸನ ಪಿತಾಮಹ * ಕನ್ನಡದ ಶೇಕ್ಸ್ ಪಿಯರ್ ಯಾರು? ಉತ್ತರ : ಕಂದಗಲ್ ಹನುಮಂತರಾವ್ * ಹರಿದಾಸ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ.* ಉತ್ತರ : ಶ್ರೀ ಪಾದರಾಯರು * ಸಿ. ಬಿ. ಮಲ್ಲಪ್ಪ ರವರಿಗೆ ಇರುವ ಬಿರುದು ಯಾವುದು? ಉತ್ತರ : ಅಭಿನವ ಭಕ್ತಿ ಶಿರೋಮಣಿ * ಕನ್ನಡದ ನಾಡೋಜ ಎಂದು ಯಾವ ಕವಿಗೆ ಇರುವ ಬಿರುದಾಗಿದೆ?* ಉತ್ತರ : ಮುಳಿಯ ತಿಮ್ಮಪ್ಪಯ್ಯ * ಕನ್ನಡದ ಮಾತಾ೯ಂಡ, ಕನ್ನಡದ ವಡ್ಸ್೯ ವಥ್೯ ಎಂದು ಯಾರನ್ನು ಕರೆಯುತ್ತಾರೆ.* ಉತ್ತರ :  ಕುವೆಂಪು * ಕುಮಾರವ್ಯಾಸನಿಗೆ ಮತ್ತು ನಾಗಚಂದ್ರನಿಗೆ ಇರುವ ಬಿರುದುಗಳು ಯಾವುವು.* ಉತ್ತರ : ರೂಪಕ ಸಾಮ್ರಾಜ್ಯದ ಚಕ್ರವರ್ತಿ ಕುಮಾರವ್ಯಾಸ ನಿಗೆ ಇರುವ ಬಿರುದು ಮತ್ತು ನಾಗಚಂದ್ರನಿಗೆ ಅಭಿನವ ಪಂಪ.

ಬದುಕು ಬದನೇಕಾಯಿ @ ಆನಂದ ಮಾಲಗಿತ್ತಿಮಠ ಕತೆ

  ರೀ...ಬದನೆಕಾಯಿ ನೋಡಿ ತಂದರೋ? ಏನ ಹಂಗ ತಂದರೋ? ಹೆಂಡತಿ ನಾ ಮಾಡಿದ ಸಂತಿಯನ್ನು ಚೀಲದಿಂದ ಎತ್ತಿಡುತ್ತಾ ಕೇಳಿದಳು. ನಾನು 'ನೋಡಿಯೇ ತಂದೇವ್ನಿ ಕಣೆ..ಎಷ್ಟು ಚೆಂದ ಇದ್ದಳು' ಅಂದೆ. ಆ ಕಡೆಯಿಂದ ಏನ್ರೀ ನೋಡಿ ತಂದರಿ, ಬರಿ ಹುಳುಕೇ ಅದಾವಲ್ಲರಿ. ಅದು ಹೆಂಗ ನೋಡಿದ್ರಿ? ಅದೇನ ನೋಡಿದ್ರಿ? ನಾನು  ತಗ್ಗಿದ  ಧ್ವನಿಯಲ್ಲಿಯೇ.. 'ಬದನೆಕಾಯಿ ಮಾರುವವಳನ್ನ...' ಅಂದೆ.        'ಐಯ್ಯ ನಿಮ್ಮ ಸೀತಾಳಿ ಸಿಡುಬಿನ ಕಲೆ ಮುಖಕ ನಾನು ಸಿಕ್ಕಿದ್ದೆ ಪುಣ್ಯ ಅನ್ಕೋರಿ..ಅದೂ ಮದುವ್ಯಾಗ ಆ ಲುಂಗಿ ಬುಡ್ಡಾನ ಕರಕೊಂಡು ಬಂದು ನಂದ ಆದ ಐತಿ, ನಂದ ಈದ ಐತಿ ಅಂತ ಸುಳ್ಳಾ ಸೊಟ್ಟ ಹೇಳಿ ನನ್ನ ಮಳ್ಳ ಮಾಡಿ ಮದುವಿ ಮಾಡ್ಕೊಂಡ್ರಿ. ಇಲ್ಲಿ ಬಂದ ನೋಡಿರ ಏನ ಐತಿ? ಬಸಪ್ಪನ ಬದನಿಕಾಯಿ ಎಂದು ಏಕೆ 47 ತುಗೊಂಡು ಗುಂಡ  ಹಾರ್ಸೋರಂಗ ಒಂದ ಸಮನೆ ಬೈಯತೊಡಗಿದಳು.  ಇನ್ನ ಇಲ್ಲಿರೋದು ಆರೋಗ್ಯಕ್ಕೆ ಹಾನಿಕಾರಕ ಎಂದು ಭಾವಿಸಿ ಹೊರಗ ಬಂದೆ.           ಛೆ! ಇವನೌನ ಈ ಹೆಂಡ್ತಿ ಅನ್ನೋ ಐಟಮ್ ಹಿಂಗ ಏನ? ಸ್ವಲ್ಪ ಖಾರ ಜಾಸ್ತಿನೇ. ಹೋದ ಜನಮದಾಗ ಕಪ್ಪೆ ಆದವರೆಲ್ಲಾ ಮುಂದಿನ ಜನ್ಮದಾಗ ಹೆಂಡ್ತಿ ಆಗಿ ವಟಗುಡಸ್ತಾರಂತ ಕಾಣ್ಸುತ್ತೆ. ಸಂಜಿತನಕ ದುಡ್ಯಾಕ ಹೋಗಿರ್ತೇವಿ. ಮನಿಗೆ ಬಂದು ಹಾಯಾಗಿ ಮಲಕೊಂಡು ಫೇಸಬುಕನಲ್ಲಿರೋ ಹಳೇ ಗರ್ಲ್ ಫ್ರೆಂಡ್ಸನೆಲ್ಲಾ ಸರ್ಚ ಮಾಡಿ ಹಾಯ್! ಎಂದು ಹೇಳಬೇಕು ಅನ್ನುವಷ್ಟರಲ್ಲಿಯೇ ಏನಾದರೊಂದು ಮ್ಯಾಟರು ತುಗೊ