Skip to main content

Posts

Showing posts from May, 2021

ನೆನಪಿನ ಕಡಲು

ಮುಗಿದ ಸಂಜೆಯ ಮುಗಿಲಿನ ಹಳದಿಯಂಚಿನ.... ಕಡಲ ಕೂಡುವ ಕೊನೆಯ ತಳದಿ ಮುಳುಗುವ ರವಿಯ ನಾಭಿಯಲಿ... ತಳೆಯುತಿದೆ ಬಿಳಚು ಹಾದಿ...!! ಹಾದಿಗುಂಟ ತೇಲಿಬರುತಿದೆ.. ಹೆಪ್ಪುಗಟ್ಟಿದ ನಿನ್ನ ನೆನಪುಗಳ ಹೊತ್ತ ಹೆಣದಂಥ ದೋಣಿ... ಕಪ್ಪಡರಿದ ಸಂಜೆ ಬಿಕ್ಕಳಿಸುತಿದೆ ಮಗು ಬಯಸಿದ ಬಂಜೆಯಂತೆ! ಯಾವ ಕಿಡಿಯು ಸೋಕಿಹುದು ಬೆರೆತ ಈ ಹೃದಯಗಳ ಪುಟ್ಟ ಗುಡಿಸಲು..? ಒಲವ ಕೋಟೆಯು ಸಿಡಿದ ರಭಸಕೆ, ಉರಿಯನಾಲಿಗೆ ಚಾಚಿದೆ ಗಗನಕೆ..!! ಸುಟ್ಟಗಾಯದ ದಟ್ಟಕಲೆಗಳು ಮುಗಿಲ ಕೆನ್ನೆಯ ನೆಟ್ಟಿವೆ.. ಭಾವ ಕಣ್ಣೀರ ಬಿಸಿಯ ಬುಗ್ಗೆ ಬಾಯಿನುಗ್ಗಿ ಬಿಕ್ಕಳಿಸಿದೆ...!! ಬೆಚ್ಚನೆಯ ಕನಸುಗಳ ಹುಚ್ಚಿನಾಟವು, ಎದೆಗೆ ಬೆಂಕಿ ಇಡುತಿದೆ.. ಹುಗಿದ ಪ್ರೀತಿ, ಎದೆಯ ಬಿಗಿದು ಭಾವತಂತಿ ಮೀಟುತಿದೆ,ಶೋಕಗೀತೆ ಹಾಡುತಿದೆ..!! ಯಾವ ಸುಳಿಯು ನುಸುಳಿ ಹಣಿಯಿತೋ ಇಂದು ತಿಳಿಯದಾಗಿದೆ... ಬೆನ್ನುಬೆನ್ನಿಗೆ ಅಳುವ ಕೊಡವಿ ಉಕ್ಕಿ ಬಿಕ್ಕಿ ಬರುತಿವೆ ಕಡಲಿನಲೆಗಳು, ಹಕ್ಕಿಗಳು  ಹಾರಿಬಂದಿವೆ ದು:ಖ ಸಂತೈಸಲು...!! ✍🏽 ಸಿದ್ದು ನೇಸರಗಿ. (ಮೂಗಬಸವ) ಸಿ ಆರ್ ಪಿ ಆನಿಗೋಳ.🙏 ಮಿತ್ರರೇ ತಮ್ಮ  ಓದಿನ ಪ್ರೀತಿಗೆ...ಮತ್ತೂಂದು ಕವಿತೆ🙏💐💐

ಮರೆಯಲಾರದ ಮಾಣಿಕ್ಯ

*ಏನ್ ಚಂದ ಕಾಣಸ್ತಿಯಾ ಈಚಲ ಮರದವ್ವ ನಾನು ನೀನು ಸೇರಿ ಬಿಟ್ಟರೆ ಎಂಥಾ ಮಜನವ್ವ ಕಷ್ಟದಾಗಿದ್ದರೂ ನಗಸ್ತಿಯಾ,ಸುಖದಾಗಿದ್ದರೂ ನಗಸ್ತಿಯಾ ಏನ್ ಬಿಟ್ಟರೂ ಬೀಡತೇನ್ ಕಾಣೆ ಈಚಲ ಮರದವ್ವ ಸಾಯೋತನಕಾ ನಿನ್ನ ಅಡಿಯಲ್ಲಿ ಬಾಳ್ತೆವ್ವ ಕಣವ್ವ   ಎಂದು ಗಟಗಟನೇ ಸೋಮರಸವನ್ನು ಒಂದೇ ಸಲ ಗಟಗಟನೇ ಕುಡಿದುಬಿಟ್ಟ ಚಂಚಲಮನಸ್ಸಿನ ಚೆಲುವಣ್ಣ...ಅದಾಗಲೇ ಕುಡಿತದ ದಾಸನಾಗಿ ಬಿಟ್ಟಿದ್ದ ಚೆಲುವಣ್ಣ ತಾನು B.A.B.Ed... M.A ಮಾಡಿದ್ದು ಮರೆತುಬಿಟ್ಡಿದ್ದ..ಸರಕಾರಿ ನೌಕರಿಗೆ ಪ್ರಯತ್ನ ಪಟ್ಟರೂ ಸಿಕ್ಕಿರಲಿಲ್ಲ..ಬೇರೆ ಯಾವ ಕೆಲಸವನ್ನು ಮಾಡಲು ಮನಸ್ಸು ಒಪ್ಪುತ್ತಿರಲಿಲ್ಲ..ಜಮೀನು ಎರಡು ಎಕರೆಯಿದ್ದರೂ ಅದರಲ್ಲಿ ದುಡಿಯುವ ಮನಸ್ಸು ಇರಲಿಲ್ಲ..ಮಳೆಯ ಆಶ್ರಯ ವಾಗಿದ್ದ ಜಮೀನು ಏನೋ ಅವನಿಗೆ ಹೊಲದಲ್ಲಿ ಕೆಲಸ ಮಾಡುವ ಬಗ್ಗೆ ಆಸಕ್ತಿ ತಳೆಯಲಿಲ್ಲ..ಚೆಲುವಣ್ಣ ನ ತಂದೆ ನೀರಾವರಿ ಇಲಾಖೆಯಲ್ಲಿ SDA ಆಗಿ ಕೆಲಸ ನಿರ್ವಹಿಸುತ್ತಿದ್ದರು..ತಾಯಿ ಗೃಹಿಣಿ..ಚೆಲುವಣ್ಣ ನ ತಮ್ಮ ಚಂದ್ರಣ್ಣ..B.E ಮುಗಿಸಿ ಬೆಂಗಳೂರಿನ ಪ್ರತಿಶ್ಠಿತ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ...ಅವನಿಗೊಬ್ಬಳು ತಂಗಿ ಇದ್ದಳು..        ಅವರದು ಹೋಬಳಿ ಮಟ್ಟದ ಊರು..ಆದರೂ ಎರಡೆರಡು ಪ್ರೌಢಶಾಲೆ,ನಾಲ್ಕು ಪ್ರಾಥಮಿಕ ಶಾಲೆ,ನಾಲ್ಕು ಅಂಗನವಾಡಿ ಕೇಂದ್ರ ಗಳು ಹೀಗೆ ಎಲ್ಲ ವ್ಯವಸ್ಥೆ ಯಿಂದ ಕೂಡಿತ್ತು ಆ ಊರು..ತಮ್ಮ ಚಂದ್ರಣ್ಣ ಊರಿನಲ್ಲಿ ನಡೆಯುವ ಶಿವರಾತ್ರಿ ಜಾತ್ರೆಗೆ,ಜಾಗರಣೆಗೆ ತಪ್ಪದೇ ಬಂದು ಹ

ಊರ ಮುಂದಿನ ಹೊಲ

ಊರ ಮುಂದಿನ ಹೊಲಕ ನಾ ಕುಂಟೀಯ ಹೂಡಿದರ ಬಳದಾಯ್ತು ಭಾಳ.. ಕಡದಾಯ್ತು ಕಿರುಗುಳ..ಅಂದೋರೇ ಬಹಳ. ಸಾಗಿದಂಗ ಹೊಡೀ..ಅಂದವರು ವಿರಳ....!! ಅಂದವರು ಅನ್ನಲಿ.. ಚಂದ...ನ... ನನ್ನಹೊಲ..ಈ ಸೀಮೆಯೊಳಗ ಇಲ್ಲಾ ನನ್ನಂಥ ಒಕ್ಕಲಾ..ಕರಿಮಣ್ಣಹೊಲಾ... ಮೇಳಿಯ ಹಿಡಿದು ಗಳೇಯನು ಹೊಡೆದರ ಮಣ್ಣೀನ ಹದ.. ಮನಸೀಗೆ ಮುದ....!! ಒಡ್ಡಿಲ್ಲ..ಒಡಬಲಿಲ್ಲ ಸಮ ತಟ್ಟಿನ ಹೊಲ.. ಮಳೆರಾಯ ಸುರಿದರ ನೀರ ಗಂಗಾಳಕ ಹಾಲು ಸುರಿದಂಗ.. ಇಂಗಿದ ಉಳಿನೀರು ಸಾಗಲು ತಿಳಿ ನೀರು ಕಲಬಚ್ಚಲ ಕಾವಲು ಕೋಟೆ ನನ್ನ ಹೊಲಕ.. ತುಂಬಿದ ನೀರಿಗೆ ತಂಬಿಟ್ಟಿನಂಗ ಹದಸಿರೀ ಮಣ್ಣ...!! ಎತ್ತೆರಡು ನತ್ತಿನಂಗ ರಾಮಣ್ಣ ಭೀಮಣ್ಣ... ಬಿತ್ತಾ ಕ ಬಂಟರು  ಹೊತ್ತುಇಳಿಯುವ ಮುನ್ನ.. ಭೂತಾಯಿ ಮಕ್ಕಳ ಜೀವದ ಕಣ್ಣ... ಆಸರಿಲ್ಲ ಬ್ಯಾಸರಿಲ್ಲ ನಮ್ಮ ಬಸವಣ್ಣ...!! ನೆಟ್ಟ ಹೆಜ್ಜೀಯ ಗುಂಟಾ ಕೂರಿಗೆ ಸಾಲ.. ದಿಟ್ಟನಡಿಗಿ ನೋಟಕ ಊರಿಗೆಲ್ಲ ದಿಗಿಲಾ.. ಸುಗ್ಗೀಯ ಕಾಲಕ  ಹಗ್ಗೆಲ್ಲಾ ಮುಗಿಲಾ.. ಕಾಳಿನ ನಿಟ್ಟು ದ್ಯಾಬ್ಯಾಗ ಮ್ಯಾಗರಮ್ಯಾಲ..!! ತಲಿಮ್ಯಾರಿ ಮ್ಯಾಲ ಬೇವಿನಮರದ ನೆಳ್ಳ... ಕಾಲದೇಸೀ ಹರದೈತಿ ಜುಳು ಜುಳು ಹಳ್ಳ... ಕುಡಸಾಲ ಕೂಡ್ಯಾವ ಹೀರಿ ಅವರೀಯ ಬಳ್ಳ.. ಹಳಹಳೀ ಬಿಡಿಸೈತೀ ನನ್ನ ಹಳ್ಳೀ.. ಊರ ಮುಂದಿನ ಹೊಲ..!! ✍🏽 ಸಿದ್ದು ನೇಸರಗಿ (ಮೂಗಬಸವ ) ಸಿ ಆರ್ ಪಿ ಆನಿಗೋಳ..🙏ಹಳ್ಳಿಯ ಹಾಡು ಆಸ್ವಾದಿಸಿ ಅಭಿಪ್ರಯಿಸಿ ಮಿತ್ರರೇ..🙏💐💐

ಪುಣ್ಯವತಿಯ ಪವಾಡ

                    ರೀ ವತ್ಸಲಾರವರೇ ಸರಿಯಾದ  ಸಮಯಕ್ಕೆ ಬಂದಬಿಡಿ..ಈ ಸರತಿ ಮೇಕಪ್ ಚೆನ್ನಾಗಿರಬೇಕು ನೋಡಿ. ಬಂದವರೆಲ್ಲಾ ನನ್ನೇ ನೋಡಬೇಕು. ಒಳ್ಳೆ ಸಿನಮಾ ಹಿರೋಯಿನ್ ತರಹ ಕಾಣಬೇಕು. ಮೊನ್ನೆ ಎಂಗೇಜಮೆಂಟ್ ಲ್ಲಿ ಆ ಶ್ಯಾಮಲಾರವರೆಗೆ ಮಾಡಿದ್ರಲ್ಲಾ ಅದೇ ರೀತಿ ಮಾಡಬೇಕು ಎಂದು ಮೇಕಪ್ ದವಳಿಗೆ ಫೋನ್ ಮಾಡಿ ತಿಳಿಸಿದಳು ದೀವ್. ಇದೆಂತಹ ಹೆಸರೆಂದುಕೊಳ್ಳಬೇಡಿ, ಅವಳ ಮೂಲ ಹೆಸರು ದ್ಯಾವಮ್ಮ. ಸಿಟಿಯೊಳಗೆ ಸ್ವೀಟಾಗಿರೊಲ್ಲ ಎಂದುಕೊಂಡು ದೀವ್ ಆಗಿದ್ದಳು.          ಮೇಕಪ್ ವತ್ಸಲಾರವರು ದೀವ್ ನ ಫೋನು ಬಂದ ನಂತರ ಕಕ್ಕಾಬಿಕ್ಕಿಯಾಗಿದ್ದರು. ಅಲ್ಲಾ ಕಾಗೆನ ಹೋಗಿ ಪಾರಿವಾಳ ಮಾಡು ಅಂದ್ರೆ ಹೇಗ ಮಾಡೋದು? ಈ ದೀವೊ ಮೇಕಪ್ ಚೆನ್ನಾಗಿಲ್ಲಾ ಚೆನ್ನಾಗಿಲ್ಲಾ ಅಂತ ನನ್ನೇ ಆಡಿಕೊಳ್ಳುತ್ತಾಳೆ. ನಾನೋ ಎಂತೆಂಥ ಫಿಲ್ಮ ಆ್ಯಕ್ಟರಗಳಿಗೆ ಮೇಕಪ್ ಮಾಡಿದ್ದೇನೆ. ಅದೂ ಅಲ್ಲದೇ ಮದುವೆನೆ ಆಗದೆ ಇರುವ ಅದೆಷ್ಟೋ ಕನ್ಯೆಗಳ ಕಪ್ಪುಮೋತಿಗಳಿಗೆ ರೋಡಿಗೆ ಟಾರ್ ಬಳಿಯುವ ರೀತಿ ದಪ್ಪ ದಪ್ಪಗ ಮೇಕಪ್ ಬಳಿದು ಕಂಕಣ ಭಾಗ್ಯ ಲಭಿಸುವಂತೆ ಮಾಡಿರುವೆ. ಆ ಪ್ರಶಾಂತ ಇದ್ದನಲ್ಲಾ ಆತ  ನಾನು ಮೇಕಪ್ ಮಾಡಿದ ಹುಡುಗಿಯನ್ನೇ ನೋಡಿ, ಅವಳಿಗೆ ನೀನೇ ದೇವಲೋಕದ ರಂಭೆ, ನೀನೇ ಊರ್ವಶಿ ಎಂದು ಮದುವೆಯಾಗಿದ್ದ, ಯಾವಾಗ ಅವನ ಹೆಂಡ್ತಿ ಮುಖದಿಂದ ಮೇಕಪ್ ಹೋಯಿತೋ ಅವಳ ನಿಜರೂಪ ಕಂಡು ಆತನಿಗೆ ಹಾರ್ಟ್ ಅಟ್ಯಾಕೇ ಆಗೋಯ್ತು. ಅಂತಹ ದಿವ್ಯಶಕ್ತಿಯಿರುವ ಈ ವತ್ಸಲಾನ ಮೇಕಪ್ ಗೇ ಹೆಸರಿಡಲು ಬರು

ಅರುಣನಾಗಮನದಿ( ಉದಯನ ಹೃದಯ)

ಹೊಳೆಹೊಳೆವ ರವಿಯು ಪಳಪಳನೆ ಬೆಳಗಿಹನು ಧರೆಯ ಹಸಿರಸಿರ ತರುಲತೆಯು ನಳನಳಸಿ ನಗುವಂತೆ ಹೂಮೊಗ್ಗು ಬಿರಿದಿವೆ ದುಂಬಿಗಿಂಬಿ ಝೇಂಕರಿಸಿವೆ ಖಗಮೃಗಗಳು ಸಂತೋಷದಿ ಹಾಡಿಪಾಡಿ ಸಂಭ್ರಮಿಸಿವೆ ರಾಗತಾಳ ಸಮ್ಮಿಲನ ಸಂಗೀತ ಅರುಣ ಕಿರಣ ಇಳೆಗೆ ತಂದ ಸಂಭ್ರಮ ಮಾವುಬೇವು ತೋರಣ ಕಟ್ಟಿ ಹಬ್ಬಹರಿದಿನ ಆಚರಿಸಿದ ಕೃಷಿಕ ದಿನದಿನದ ನಿನ್ನ ಆಗಮನ ಜೀವಜಂತುಗಳಿಗೆ ಸಂಭ್ರಮ ಉದಯ ಹೃದಯ ವಿಶಾಲ ಉಸಿರುಸಿರಲಿ ಬೆರೆತಿಹನು ಜಗವ          ವಿಷ್ಣುಪ್ರಿಯ       (ಪಿ ಎಮ್ ನಿಕ್ಕಮ್ಮನವರ)

ಸಾನಾಪೂರದ ಸಂಗೀತ ಶಿಲೆಗಳು- ಕತೆ ಭಾಗ ೩ ,

ಹಿಂದಿನ ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಸಾನಾಪೂರದ ಸಂಗೀತ ಶಿಲೆಗಳು ಭಾಗ ೧ ಸಾನಾಪೂರದ ಸಂಗೀತ ಶಿಲೆಗಳು ಭಾಗ ೨ ಭಾಗ ೩ ( ಕೊನೆಯ ಭಾಗ) ಮಾರನೇ ದಿನ ವೆಂಕಟಾಚಲಯ್ಯನವರು ಏನು ಇಷ್ಟು ಹೊತ್ತಾದರೂ ಮೀನಾ ಇನ್ನು ಎದ್ದೆ ಇಲ್ವಲ್ಲಾ ಅಂದುಕೊಂಡು ಅವಳ ರೂಮಿನತ್ತ ಹೋದರೆ ಅವರಿಗೆ ನಿಂತ ನೆಲವೇ ಕುಸಿದುಹೋದಂತಾಯಿತು. ಆ ದೃಶ್ಯ ಕಂಡು ಮೈನಡುಕ ಬಂದಿತು. ಮೀನಾಳ ದೇಹ ಫ್ಯಾನಿಗೆ ನೇತಾಡುತ್ತಿತ್ತು. ಅಯ್ಯೋ ಮಗಳೇ ಎಂದು ಕೂಗಿದ. ಮನೆಯವರೆಲ್ಲರೂ ಬಂದರು. ಅಯ್ಯೋ ಎಂತಹ ಕೆಲಸಾ ಮಾಡ್ಕೊಂಡ ಬಿಟ್ಟವಳೆ ಹುಡುಗಿ ಎನ್ನುತ್ತಾ ಪಾರ್ಥಿವ ಶರೀರವನ್ನು ಕೆಳಗಿಳಿಸಿದರು. ಸುಶಾಂತನಿಗಂತೂ ತನ್ನ ಕಣ್ಣು ತಾನೇ ನಂಬಲಾರದ ಸ್ಥಿತಿ. ಹೀಗೇಕೆ ಮಾಡಿಕೊಂಡೆ ಮೀನಾ ಎಂದು ಕಣ್ಣೀರ ಹಾಕಿದ. ವೆಂಕಟಾಚಲಯ್ಯನವರು ಅಯ್ಯೋ ವಿಧಿಯೇ ನನ್ನ ಗೆಳೆಯ ಸುಬ್ಬುಗೆ ಏನೆಂದು ಉತ್ತರ ಕೊಡಲಿ? ಹೇಗೆ ಮುಖ ತೋರಿಸಲಿ? ಎಂದು ಗೋಳಾಡತೊಡಗಿದರು. ದ್ರಾಕ್ಷಾಯಿಣಿದು ಒಂದೇ ವಟವಟ, ಗುರುತು ಪರಿಚಯ ಇಲ್ಲದವರನ್ನು ಮನೇಲಿ ತಂದಿಟ್ಕೊಬೇಡಾ ಅಂತ ಸಾವಿರ ಸಲ ಬಡಕೊಂಡರೂ ಕೇಳಲಿಲ್ಲ. ಈಗ ಅನುಭವಿಸಿ. ಮನೆಯಲ್ಲ ಇದು ಧರ್ಮಛತ್ರವಾಗಿದೆ ಎಂದು ಸುಶಾಂತನನ್ನೇ ದಿಟ್ಟಿಸಿ ಹಲುಬಿದಳು. ಸುಶಾಂತನನ್ನು ಸಾಕುವುದೂ ಅವಳಿಗೆ ಇಷ್ಟವಿರಲಿಲ್ಲ. ವೆಂಕಟಾಚಲಯ್ಯನವರು ಗೆಳೆಯ ಸುಭಾಷಗೆ ಫೋನಾಯಿಸಿ ಸುದ್ದಿ ತಿಳಿಸಿದರು. ಅರಗಿಳಿಯಂಗೆ ಹಾರಾಡಿಕೊಂಡಿದ್ದ ಮಗಳ ಅಕಾಲಿಕ ನಿಧನದ ಸುದ್ದಿಯನ್ನು ಹೆತ್ತವರಿಗೆ ಅರಗಿಸ

ಸಾನಾಪೂರದ ಸಂಗೀತ ಶಿಲೆಗಳು- ಕತೆ ಭಾಗ ೨

ಭಾಗ ೧ ಓದಲು ಇಲ್ಲಿ ಕ್ಲಿಕ್ಕಿಸಿ ಸಾನಾಪೂರದ ಸಂಗೀತ ಶಿಲೆಗಳು ಭಾಗ ೧ ಭಾಗ ೨    ಸಾಯಂಕಾಲ ಟೀ ಕುಡಿಯುತ್ತಿರಬೇಕಾದರೆ ಸುಶಾಂತ ಅದಾರೋ ಗೆಳೆಯನ ಜೊತೆಗೂಡಿ ಕಾರ್ಡ್ಸ ಆಡುತ್ತಿದ್ದ. ಅದೇನೋ ಅವಸರದಲ್ಲಿದ್ದ ಅವನ ಗೆಳೆಯ ಅರ್ಧಕ್ಕೆ ಆಟ ನಿಲ್ಲಿಸಿ ಎದ್ದು ಹೋದಾಗ ಸುಶಾಂತ ಬಲುಬೇಜಾರು ಮಾಡಿಕೊಂಡಂತೆ ಅನಿಸಿತು. ನಾನು ಆಡಬಹುದಾ? ಎಂದು ಅವನ ಮುಂದೆ ಮೀನಾ ಕುಳಿತಾಗ ಆಶ್ಚರ್ಯದ ಜೊತೆಗೆ ಸಂತಸವುದಿಸಿ ಕಾರ್ಡ್ಸ ನಿಮಗೂ ಬರುತ್ತಾ?  ಅಂತ ಪ್ರಶ್ನಿಸಿದ. ಗೆಳತಿಯರೊಂದಿಗೆ ಹಾಸ್ಟೆಲ್ ನಲ್ಲಿ ಒಂದೆರಡು ಬಾರಿ ಆಡಿದ್ದೆ ಎಂದಳು.ಆಟ ಆಡುತ್ತಾ ಆಡುತ್ತಾ ಆತ್ಮೀಯತೆ ಬೆಳೆಯಿತು. ನಿಮ್ಮ ಸ್ಟಡಿ ಎಲ್ಲಿಗೆ ಬಂತು? ಎಂದ. ಈಗಷ್ಟೇ ಪ್ರಾರಂಭ ಮಾಡಬೇಕು ಎಂದಳು. ಏನ ಸ್ಟಡಿ ಮಾಡ್ತೀರಾ? ಎಂದ. ಹಂಪೆಯ ಪ್ರತಿ ಶಿಲೆಯಲ್ಲಿಯೂ ಒಂದೊಂದು ವಿಶೇಷತೆಯಿದೆಯಲ್ಲ..ನಿನಗೆ ವಿಜಯ ವಿಠ್ಠಲ ದೇವಸ್ಥಾನ ಗೊತ್ತಾ? ಎಂದಳು. ಆತ ನಕ್ಕು ನಾನು ಆಡಿ ಬೆಳೆದಿರುವುದೇ ಹಂಪೆಯಲ್ಲಿ ಎಂದ. ಅಲ್ಲಿ ಸಂಗೀತ ಶಿಲಾಕಂಬಗಳಿವೆಯಲ್ಲಾ..ಅಂತಹ ಶಿಲೆಗಳ ಹುಡುಕಾಟದಲ್ಲಿಯೇ ಬಂದಿರುವೆ ಎಂದಳು. ಅಷ್ಟೇ ತಾನೇ ನಾಳೆಯೇ ಹೋಗಿ ಆ ಸಂಗೀತ ಶಿಲಾಕಂಬಗಳನ್ನೇ ಕಿತ್ತು ತರುವೆ ಎಂದ ಸುಶಾಂತ. ಅವಳಿಗೆ ಗಾಬರಿಯಾಯಿತು. ಮೊದಲೇ ಉಡಾಳ.ಹಾಗೇನಾದರೂ ಮಾಡಿದರೆ ಜೈಲು ಗ್ಯಾರಂಟಿ ಎಂದುಕೊಂಡು; ಸುಶಾಂತ ಪ್ಲೀಸ್ ಅಂತಹ ಸಾಹಸಕ್ಕೇನೂ ಹೋಗಬೇಡಾ..ಈ ಬಂಡೆಗಲ್ಲಿನಲ್ಲಿಯೇ ಹುಡುಕುವೆ ಎಂದಳು. ಈ ಕಲ್ಲುಗಳಲ್ಲಿ ಸಂಗೀತ ಶಿಲೆಗಳನ

ಸಾನಾಪೂರದ ಸಂಗೀತ ಶಿಲೆಗಳು- ಕತೆ ಭಾಗ ೧

ಏ ಮೀನಾ ಎಲ್ಲಿದ್ದಿಯಾ? ನಿನ್ನೆಯಿಂದ ಫೋನ್ ಮಾಡಿದರೂ ಬರೀ ನಾಟ್ ರಿಚೇಬಲ್ ಬರ್ತಾಯಿದೆ ಎಂದಳು ವಾಣಿ. ಲೇ ಸ್ಸಾರಿ ಕಣೆ ಅದೇನಾಯ್ತೆಂದರೆ ನಿನ್ನೆ ಜರ್ನಿಯಲ್ಲಿದ್ದೆ ಹೀಗಾಗಿ ನೆಟವರ್ಕ ಸಿಕ್ಕಿಲ್ಲಾ ಎಂದಳು ಮೀನಾ. ಎಲ್ಲೇ ಹೋಗಿದ್ಯಾ? ಏನಿದು ಸರಪ್ರೈಸು? ಆಶ್ಚರ್ಯದಿಂದ ಕೇಳಿದಳು ವಾಣಿ. ಏನಿಲ್ಲಪ್ಪಾ ಅದೇ ಸ್ಟಡಿ ಟೂರಿಗಂತ ಸಾನಾಪುರಕೆ ಬಂದಿದ್ದೆ ಹೀಗಾಗಿ ಯಾರಿಗೂ ಹೇಳೋದಿಕ್ಕೆ ಆಗಲಿಲ್ಲ ಎಂದಳು ಮೀನಾ. ಹೀಗೆ ಗೆಳತಿಯರಿಬ್ಬರೂ ಮಾತನಾಡುತ್ತಾ ಇರಬೇಕಾದರೆ ದ್ರಾಕ್ಷಾಯಿಣಿ ಬಂದು ಊಟಕ್ಕ ಬಾ ಮೀನಾ ಎಂದು ಕರೆದು ಹೋದಳು. ನೀವೂ ಬಿಡುವಿದ್ರೆ ಬನ್ನಿ ಹಾಗೇ ಹಂಪಿ ಹೊಸಕೋಟೆ ಡ್ಯಾಮ್ ಎಲ್ಲಾ ನೋಡಿಕೊಂಡು ಹೋಗುವಂತ್ರಿ ಎಂದು ಮೀನಾ ಫೋನಿನಲ್ಲಿ ವಾಣಿಯ ಮೂಲಕ ತನ್ನ ಗೆಳತಿಯರಿಗೆ ಆಹ್ವಾನ ನೀಡಿ ಕರೆ ಕಟ್ ಮಾಡಿದಳು.          ಸುಭಾಷ ಹಾಗೂ ನಿರ್ಮಲಾರವರ ಒಬ್ಬಳೇ ಮಗಳೇ ಮೀನಾ. ಸುಭಾಷರವರು ಬೆಳಗಾವಿಯ ಹೃದಯ ಭಾಗದಲ್ಲಿ ಐಷಾರಾಮಿ ಹೊಟೇಲ್ ಹೊಂದಿದ್ದು  ಶ್ರೀಮಂತಿಕೆಗೆ ಏನೂ ಕೊರತೆಯಿರಲಿಲ್ಲ. ಮೀನಾಳನ್ನು ಡಾಕ್ಟರ್ ಮಾಡಬೇಕೆಂದುಕೊಂಡವರು ಕೊನೆಗೆ ಮಗಳ ಬಲವಂತಕ್ಕೆ ಮಣಿದು ತಮ್ಮ ನಿರ್ಧಾರವನ್ನು ಕೈಬಿಡಬೇಕಾಗಿ ಬಂದು ಅವಳ ಇಷ್ಟದಂತೆ ಜೀಯೋಲಾಜಿಸ್ಟ್ ಆಗಲು ಅನುಮತಿಸಿದ್ದರು. ಅದಾವುದೋ ಪ್ರಾಜೆಕ್ಟ್ ಗೋಸ್ಕರ್ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಸಾನಾಪುರಕೆ ಹೋಗಬೇಕಾಗಿ ಬಂದಾಗ ಸುಭಾಷರವರಿಗೆ ನೆನಪಾಗಿದ್ದು ಸಾನಾಪುರದಲ್ಲಿರುವ ತಮ್ಮ

ವ್ಯಕ್ತಿತ್ವದ ಮುಕುಟ ವಜ್ರೇಶ -ಕತೆ

ಜೀವನದಲ್ಲಿ ದಿಕ್ಕೆ ತೋಚದಾದಾಗ,ಬದುಕಲ್ಲಿ ಕಷ್ಟಗಳಾ ಸುರಿಮಳೆ ಸುರಿದಾಗಾ,ಬದುಕಲ್ಲಿ ಬಿರುಗಳಿ,ಸುಂಟರಗಾಳಿ ಗಳೆದ್ದಾಗ ಬಂದ ಗೆಳೆಯ ನೀನು..ಬಂದು ನಮ್ಮ‌ ಬದುಕು ಬೆಳಗಿದ ಗೆಳೆಯ ನೀನು...ಆವತ್ತು ದ್ವೀತಿಯ  ಪಿ.ಯು.ಸಿ.ಯಲ್ಲಿ ಕಡಿಮೆ ಅಂಕಗಳು ಬಂದಾಗ ಮನೆಯಲ್ಲಿ ನೀನು‌ ಇನ್ನು ಕಲಿತಿದ್ದು ಸಾಕು...ಯಾವುದಾದರೂ ಒಂದು ಕೆಲಸಕ್ಕೆ ಸೇರಿ ಮನೆ ನಡೆಸು...ನಿಮ್ಮಪ್ಪ ಎಷ್ಡು ಅಂತ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡ್ಬೇಕು ಅಂತ ಹೇಳಿದಾಗ ನೀನೆ ಅಲ್ಲವೇ ನಮ್ಮ ಮನೆಗೆ ಬಂದು,ಅವನು ಡಿಗ್ರಿ ಓದಲಿ..ಮುಂದೆ ಬಿ.ಎಡ್ ಮಾಡಲಿ‌ ಅಂತ ಸಲಹೆ ಕೊಟ್ಟು ಜೊತೆಗೆ ನಮಗೆ ಯಾವುದಾದರೂ ತೊಂದರೆ ಬಂದರೂ ಸಹಾಯಕ್ಕೆಂದು ನಿಂತವನು ನೀನೆ ಅಲ್ಲವೇ...ಈಗ ನಾನು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಲು,ನೂರಾರು ಮಕ್ಕಳ ಬಾಳು ಬೆಳಗಲು ಕಾರಣವಾದ ಮಹಾನ್ ಜ್ಯೋತಿ ನೀನಲ್ಲವೇ ಗೆಳೆಯ..ಈಗ ಒಂದು ಹೊಸದಾಗಿ ಮನೆ ಕಟ್ಡಿದ್ದೇನೆ...ಮುಂದಿನ ವಾರ ಗೃಹ ಪ್ರವೇಶವಿದೆ..ಕಾರಣ ನೀನು,ನಿನ್ನ ಮಡದಿ,ಮಾತೆ,ಮಗಳು ಎಲ್ಲರೂ ಬರಬೇಕು..ಬಂದು ಈ ಗೆಳೆಯನಿಗೆ ಆಶೀರ್ವದಿಸಿ ಬೇಕೆಂದು ಕೇಳಿಕೊಳ್ಳುವೆ ಎಂದು ಚಂದ್ರಮೌಳಿ ತನ್ನ ಆಪ್ತಮಿತ್ರ ವಜ್ರೇಶ ನಿಗೆ ತಿಳಿಸಿದ...ಆಗಲಿ ಸ್ನೇಹಿತ ಅಂತಾ ವಜ್ರೇಶನೂ ಸಮ್ಮತಿಸಿದನು....    ಹೌದು ನಮ್ಮ ಈ ಕಥೆಯ ನಾಯಕನೇ ವಜ್ರೇಶ..ವಜ್ರದಷ್ಟೆ ಕಠೋರ..ಆದರೆ ಮನಸ್ಸು ಮಲ್ಲಿಗೆಯಷ್ಟೆ ಮೃದು...ನೇರವಾಗಿ ಇದ್ದುದನ್ನು ಇದ್ದ ಹಾಗೆ ಹೇಳುವ ಸ್ವಭಾವದವನು...ಹೀ

ಮಣ್ಣ ಕಣಕಣದಲಿದೆ ಮದ್ದು

ಹಿತ್ತಲ ಗಿಡ ಮದ್ದಲ್ಲ ಎಂದು ಪರಿಭಾವಿಸಿ ಪಾಶ್ಚ್ಯತ್ಯ ಔಷಧಿಗಳ ದಾಸನಾಗಿ ಬೆಳ್ಳಗಿರವುದೆಲ್ಲ ಹಾಲೆಂದು ನಂಬಿ ಮೋಸಹೋಗಿಹೆ ನಿನ್ನ ಅಂತಃಸತ್ವವನು ಮರೆತು ಆರ್ಷಧರ್ಮದ ಋಷಿಮುನಿಗಳನು  ಮೂಢರೆಂದು  ಬಗೆದು ನಿನಗೆ ನೀನೆ ಮೋಸಮಾಡಿಕೊಂಡಿರುವೆ ಆಯುರ್ವೇದದ ಮೂಲ ನಮ್ಮ ಈ ಭರತ ನೆಲ ಮಣ್ಣ ಕಣಕಣದಲಿ ಇದೆ ಮದ್ದು ಎದೆಗುಂದದೆ ನಿಲ್ಲು ಎದ್ದು ದಾಳಿ ನೂರಾದರೂ ಬಾಳಿ ಬದುಕುತಿಹೆವು ನಾವು ವೈರಿಯಿರಲಿ ವೈರಾಣುವಿರಲಿ ಆತ್ಮಸ್ಥೈರ್ಯ ಜೊತೆಗಿರಲಿ ಆಯುರ್ವೇದವ ಅಪ್ಪಿಕೋ ಆರ್ಷಧರ್ಮವ ಆಶ್ರಯಿಸಿಕೋ ಆಯುಷ್ಯವ ವೃದ್ಧಿಸಿಕೋ ಆತ್ಮ ವಿಶ್ವಾಸವ ನೆಚ್ಚಿಕೋ         ವಿಷ್ಣುಪ್ರಿಯ     (ಪಿ ಎಮ್ ನಿಕ್ಕಮ್ಮನವರ)

ಗಂಡಾಬಾಂಡ್ ಹಾಸ್ಯಕತೆ

 ಒಳ್ಳೆ ಕೆಂಪ ಮಣ್ಣಾಗಿಂದ ಕಿತ್ತ ಮೂಲಂಗಿ ಹಂಗ ಮುಖಾ ಮಾಡ್ಕೊಂಡು ಹಿಂಗ್ಯಾಕ ಕುಂತಿಯೋ ಬಾಳೇಶ ಅಂತ ಕೇಳಿದೆ. ಆತ ಬಾರೋಪಾ ನಿನಗೇನ ಮದುವಿ ಮಕ್ಕಳಾ ಎಲ್ಲಾ ಆತು. ನನಗ ಮದುವಿದ ಚಿಂತಿ ಆಗೈತಿ ಅಂದ. ಮಗನ ಮಂಗ್ಯಾನಂಗ ಜಿಗದಾಡಿಕೊಂತ ಅರಾಮ ಇರು, ಮದುವಿ ತುಗೊಂಡ ಏನ ಮಾಡತಿ? ಅಲ್ಲವೊ ಮದುವಿ ಅಂದರ ಏನರ ಗೊತ್ತೈತಿ ನಿನಗ? ಪ್ರಶ್ನಿಸಿದೆ. ಆತ ಇಲ್ಲಾ ಅಂತ ಗೋಣ ಅಲ್ಲಾಡಿಸಿದ. ನೋಡಪಾ ಮದುವಿ ಅಂದರ ನಾವೇ ನಮ್ಮ ಕೈಯಾರೆ ಗಿಡ ಹಚ್ಚಿ ಅದಕ್ಕ ಕಷ್ಟಾಪಟ್ಟು ಬೆವರ ಸುರಿಸಿ ನೀರ ಹಾಕಿ ಬೆಳೆಸಿ, ಮುಂದೆ ರೆಂಬೆಕೊಂಬೆಗಳು ಬಲಿತ ನಂತರ ಚುಲೋ ಹಗ್ಗಾ ತುಗೊಂಡು ಉರಲ ಹಾಕೊಂಡಂಗ ಅಂದೆ. ಆತ ಅಂಯ್ಯ ಅಂದ.         ಆದರೂ ಮಂದಿ ಮದುವಿ ಎಂದೋ? ಮದುವಿ ಎಂದೋ? ಅಂತ ಒಂದ್ಸವನ ನನ್ನ ಜೀವಾ ತಿನ್ನಾತಾರು ಅಂದ. ಹೊಟ್ಟೆಕಿಚ್ಚು ಬಡ್ಡಿಮಕ್ಕಳಿಗೆ ನಿನ್ನ ಖುಷಿ ಕಂಡರ ಅವರಿಗೆ ಹೊಟ್ಟೆಕಿಚ್ಚು ಅಂದೆ. ಲೋ ಅದೇನರ ಆಗುವಲ್ದು ಒಂದ ಮದುವಿ ಮಾಡಸೋ ಅಂತ ದುಂಬಾಲ ಬಿದ್ದ. ಏ ಮಳ್ಳ ಮದುವಿ ಅಂದರ ಸಾಮಾನ್ಯ ಅಂತ ತಿಳದಿ? ಈಗಂತೂ ಹುಡುಗ್ಯಾರ ಸಿಕ್ಕಾಪಟ್ಟೆ ಡಿಮ್ಯಾಂಡ ಮಾಡಾತಾರು. ಮದುವಿಯಾಗಬೇಕಾದ್ರೆ ಹುಡುಗನಿಗೆ ಗವರ್ನಮೆಂಟ್ ಜಾಬ್ ಇರಬೇಕು. ಆಸ್ತಿ ಪಾಸ್ತಿ ಇರಬೇಕು, ಅತ್ತಿ ಮಾವ ಇರಬಾರದು ಎಟ್ಟಸೆಟ್ರಾ ಎಟಸೆಟ್ರಾ ಅಂದೆ. ಆತ ಈ ಮ್ಯಾಲಿನ ಯಾವೂ ನನ್ನ ಹತ್ರ ಇಲ್ಲಾ..ಆದರ ಕೊನೆಗೆ ಹೇಳಿದ್ಯಲ್ಲ ಅದು ಐತಿ ಅನ್ಕೊಂತನ ಅಂಗಿ ಬಿಚ್ಚತೊಡಗಿದ. ನಾನು ಛಿ! ಅಸಹ್ಯ ಏನ ಮಾಡಾತಿ

Freedom of speech and its restrictions

Freedom of speech and its restrictions Freedom of speech and expression is an essential requirement for the functioning of a democratic polity.recognising this article 19(1)( a) of our constitution has guaranteed freedom of speech and expression to every citizen of India.under article 19(1) a) every citizen of India is free to express his views, beliefs and convictions freely without any fear. The mode of expression maybe through speech, writing, printing, picturising , acting,and singing or in any other communicable form. It may be noted that reasonable limits or restrictions can be imposed on the exercise of the right to freedom of speech and expression under article 19(2) in the interest s of or on the grounds of 1)Security of the state; Expression of speech which tend to incite or encourage the people to commit violent crimes like murder would be a reasonable ground for the imposition of restrictions on the right to freedom of speech and expression on the ground of secu

ಮರಳಿ ಬಾರದಿ ಸಮಯ

ನಗುವುದಾದರೆ ನಕ್ಕುಬಿಡು ಅಳುವುದಾದರೆ ಅತ್ತುಬಿಡು ಸುಃಖ ದುಃಖವಾ ಹಂಚಿಕೋ ಮರೆಯದಿರು ಮರಳಿ ಬಾರದಿ ಸಮಯ|| || ಹಂಚಿಬಿಡು ನಿನ್ನ ನಿಸ್ವಾರ್ಥ ಪ್ರೀತಿಯಾ ವ್ಯಕ್ತಪಡಿಸು ಮನದಾಳದ ಭಾವನೆಗಳನ್ನ ತೋರಿಸು ಭಕ್ತಿಯ ಪರಾಕಾಷ್ಠೆಯನ್ನು ಮರೆಯದಿರು ಮರಳಿ ಬಾರದಿ ಸಮಯ|| || ದೀರ್ಘಕಾಲದ ದ್ವೇಷವಾ ಮರೆತುಬಿಡು ಸುದೀರ್ಘಕಾಲದಿ ಪ್ರೇಮದ ಬೀಜವಾ ಬಿತ್ತಿಬಿಡು ನೋವು ನಲಿವಿನ ಪಯಣ ಸಾಗಲಿ ನಿರಂತರ ಮರೆಯದಿರು ಮರಳಿ ಬಾರದಿ ಸಮಯ|| || ತಂದೆ ತಾಯಿಯ ಸೇವೆಯ ಮರೆಯದಿರು ಗುರು ಹಿರಿಯರ ಆಶೀರ್ವಾದ ಸ್ವಿಕರಿಸು ಸದಾ ಬಂಧು ಬಳಗ ಗೆಳೆಯರಾದಿಯಾಗಿ ಸಂಬಂಧವಾ ಉಳಿಸಿ ಬೆಳೆಸು ಮರೆಯದಿರು ಮರಳಿ ಬಾರದಿ ಸಮಯ|| || ಸಿರಿ ಬಂದಾಗ ಹತ್ತು ಜನರಿಗೆ ಹಂಚಿತಿನ್ನು ಸುಗ್ಗಿಯ ಕಾಲದಿ ಭೂತಾಯಿಯ ನೆನೆದು ಧನ್ಯನಾಗು ಹೂವು ಮುಳ್ಳಿನಾ ಬದುಕಿನಲಿ ತನು-ಮನ-ಧನ ಸಮರ್ಪಿಸು  ಮರೆಯದಿರು ಮರಳಿ ಬಾರದಿ ಸಮಯ|| ||                                                                                      - ಸಂದೀಪ ಕುಲಕರ್ಣಿ

Right To Freedom(Liberty) Articles 19-22

  Right To Freedom(Liberty) Articles 19-22 Article 19 of our constitution, as amended,guarantees six basic and valuable freedoms to the citizens of India. They are Freedom of speech and expression Freedom of assemble peacefully and without arms Freedom to form associations and unions Freedom to move freely throughout the territory of India Freedom to reside and settle in any part of the territory of India Freedom to practice any profession or to carry on any occupation,trade or business It may be noted that,originally there were seven freedoms.One of the freedoms,viz ‘Freedom to acquire,hold and dispose of property’ was omitted by the 44 th Constitution Act 1978. So today there was only six freedoms. Besides these six freedoms, Article 20,21 and 22 of our constitution guarantees Protection in respect of conviction for offences Protection of life and personal liberty Protection against arrest and detention this is all about right to freedom, So If

ಪ್ರಚಲಿತ ಘಟನೆಗಳು

ಪ್ರಚಲಿತ ಘಟನೆಗಳು ಭೂಮಿಗೆ ಕಾಣದ ಚಂದ್ರನ ಭಾಗದಲ್ಲಿ ಭೂಕುಸಿತ ಉಂಟಾಗಿದೆಯೆಂದು ಅಮೇರಿಕಾದ ನಾಸಾ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಲೂನಾರರ ರೆಕಗ್ನೈಸನ್ಸ ಆರ್ಬಿಟಲ್ ಕ್ಯಾಮೆರಾ ಬಳಸಿ ಈ ವಿದ್ಯಮಾನವನ್ನು ಪತ್ತೆ ಹಚ್ಚಿದ್ದಾರೆ. ಸುಪ್ರಿಂ ಕೋರ್ಟ್ ನ ಕಲಾಪಗಳನ್ನು ನೇರ ಪ್ರಸಾರ ಮಾಡುವ ಪ್ರಸ್ತಾಪ ಜಾರಿ ಕುರಿತು ತಾವು ಗಂಭೀರವಾಗಿ ಪರಿಶೀಲಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ತಿಳಿಸಿದ್ದಾರೆ. ಇದೇ ವೇಳೆ ಕೋರ್ಟ ತೀರ್ಪುಗಳನ್ನು ಪತ್ರಕರ್ತರು ಮತ್ತು ಜನಸಾಮಾನ್ಯರಿಗೆ ಸರಳವಾಗಿ ತಿಳಿಸುವ ಇಂಡಿಕೇಟಿವ ನೋಟ್ಸ ಎಂಬ ಹೊಸ ವ್ಯವಸ್ಥೆಗೂ ಚಾಲನೆ ನೀಡಿದರು. ಕೊರೋನಾ ಸಂಭವನೀಯ ಮೂರನೇ ಅಲೆ ಎದುರಿಸಲು ನಾರಾಯಣ ಹೆಲ್ತ್ ನ ಮುಖ್ಯಸ್ಥರಾದ ಡಾ ದೇವಿಪ್ರಸಾದ ಶೆಟ್ಟಿಯವರನ್ನು ಟಾಸ್ಕಪೋರ್ಸನ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ ರೋಮ್ ದೇಶದ ಮೊದಲ ಮಹಿಳಾ ಗುಪ್ತಚರ ಸಂಸ್ಥೆಯ ಅಧ್ಯಕ್ಷರಾಗಿ ಎಲಿಜಬೆತ್ ಬೆಲೂನಿ ಆಯ್ಕೆಯಾಗಿದ್ದಾರೆ ಡ್ಯೂಕ್ ಆಫ್ ಎಡಿನ್ಬರ್ಗ ಎಂದೆ ಕರೆಯಿಸಿಕೊಳ್ಳುತ್ತಿದ್ದ, ಇತ್ತೀಚಿಗೆ ನಿಧನರಾದ ಬ್ರಿಟನ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ ಅವರ ಸ್ಮರಣಾರ್ಥವಾಗಿ 4 ಅಂಚೆಚೀಟಿ ಗಳನ್ನು ಬ್ರಿಟನ್ ಸರ್ಕಾರ ಬಿಡುಗಡೆಗೊಳಿಸಿತು ಕರ್ನಾಟಕದ ಮೊದಲ ಮಹಿಳಾ ಶಿಲ್ಪಿಯೆಂದು ಹೆಸರುವಾಸಿಯಾದ ಕನಕಾಮೂರ್ತಿಯವರು ನಿಧನರಾದರು. ಟೈಮ್ಸ್ ಮಾಧ್ಯಮ ಸಮೂಹದ ಅಧ್ಯಕ್ಷೆ ಇಂದೂ ಜೈನ್ ನಿಧನರಾದರು ರಾಜ್ಯದ ಅರಬ್ಬೀ

ಭಾರತ ರತ್ನ ಪ್ರಶಸ್ತಿ ವಿಜೇತರು

ಭಾರತ ರತ್ನ ಪ್ರಶಸ್ತಿ ವಿಜೇತರು 1) 1954- ಎಸ್ ರಾಧಾಕೃಷ್ಣನ್ -ಆಂಧ್ರಪ್ರದೇಶ 2) 1954- ಸಿ.ರಾಜಗೋಪಾಲಚಾರಿ – ತಮಿಳುನಾಡು 3) 1954- ಡಾ.ಸಿ.ವ್ಹಿ.ರಾಮನ್ – ತಮಿಳುನಾಡು 4) 1955- ಭಗವಾನದಾಸ – ಉತ್ತರ ಪ್ರದೇಶ 5) 1955- ಸರ್.ಎಮ್.ವಿಶ್ವೇಶ್ವರಯ್ಯ – ಕರ್ನಾಟಕ 6) 1955- ಜವಾಹರಲಾಲ್ ನೆಹರು – ಉತ್ತರ ಪ್ರದೇಶ 7) 1957- ಪಂ.ಗೋ.ವಲ್ಲಭಿ ಪಂಥ – ಉತ್ತರ ಪ್ರದೇಶ 8) 1958- ಧೊಂಡೊ ಕೇಶವ ಕರ್ವೆ – ಮಹಾರಾಷ್ಟ್ರ 9)     1961- ಬಿಧಾನ್‌ ಚಂದ್ರ ರಾಯ್‌ – ಪಶ್ಚಿಮ ಬಂಗಾಳ 10) 1961- ಪುರುಷೋತ್ತಮದಾಸ ಟಂಡನ್ – ಉತ್ತರ ಪ್ರದೇಶ 11) 1962- ಡಾ.ರಾಜೇಂದ್ರ ಪ್ರಸಾದ್ – ಬಿಹಾರ 12) 1963- ಜಾಕೀರ್ ಹುಸೇನ್ – ಉತ್ತರ ಪ್ರದೇಶ 13) 1963- ಡಾ.ಪಾಂಡುರಂಗ ವಾಮನ ಕಾಣೆ – ಮಹಾರಾಷ್ಟ್ರ 14) 1966- ಲಾಲ್ ಬಹಾದ್ದೂರ ಶಾಸ್ತ್ರೀ – ಉತ್ತರ ಪ್ರದೇಶ 15) 1971- ಇಂದಿರಾಗಾಂಧಿ – ಉತ್ತರ ಪ್ರದೇಶ 16) 1975- ವ್ಹಿ.ವ್ಹಿ.ಗಿರಿ – ಒಡಿಶಾ 17) 1976- ಕೆ.ಕಾಮರಾಜ್ – ತಮಿಳುನಾಡು 18) 1980- ಮಧರ್ ಥೆರಿಸಾ -ಪಶ್ಚಿಮ ಬಂಗಾಳ (ಉತ್ತರ ಮ್ಯಾಸಿಡೋನಿಯಾ) 19) 1983- ವಿನೋಬಾ ಭಾವೆ – ಮಹಾರಾಷ್ಟ್ರ 20) 1987- ಖಾನ್ ಅಬ್ದಲ್ ಗಫಾರಖಾನ್ – ಪಾಕಿಸ್ತಾನ 21) 1988- ಎಂ.ಜಿ.ರಾಮಚಂದ್ರನ್ – ತಮಿಳುನಾಡು 22) 1990- ಡಾ.ಅಂಬೇಡ್ಕರ್ – ಮಹಾರಾಷ್ಟ್ರ 23) 1990- ನೆಲ್ಸನ್ ಮಂಡೇಲಾ – ದಕ್ಷಿಣ ಆಫ್ರಿಕಾ 24) 1991- ಮೊರಾರ್ಜಿ ದೇಸಾಯಿಯ – ಗುಜರಾತ್ 25) 1

ಬಸವ ಸಂಪದ

ಭವದ ಬಂಧನವ ಹರಿದೊಗೆದು ದಿವಕೆ ಕುಂದಣನಾಗಿ ಹೊಳೆಯುತಿಹ ಬಸವ.. ಅನುಭಾವದ ಆನಂದದಿ ಜಗ ನಂದನವನ ಮಾಡಿದ ಬಸವ ಬಸವನೆಂದರೆ ಬಸವನಲ್ಲ ಸುಜ್ಞಾನದ ಪ್ರಸವ!! ಸರ್ವಶಕ್ತನು ಬಸವ, ಗರ್ವ ಮುಕ್ತನು ಬಸವ, ಭಕ್ತಿ ವರ್ಷವ ಸುರಿದು ಮುಕ್ತಿ ಸ್ಪರ್ಶವ ನೀಡಿದ ಬಸವ, ಯುಗಪುರುಷನು ಬಸವ ಜೀವಪರುಷನು ಬಸವ ಜ್ಞಾನಸಂಗಮನಾದವ ಬಸವ. ಬಸವನೆಂದರೆ  ಬಸವನಲ್ಲ ದೇವಾಂಶ ಸಂಭವ.!! ಸರ್ವಾಂಗವನೇ ಲಿಂಗಮಯ  ಮಾಡಿ, ಇಷ್ಟಲಿಂಗದ ಜಂಗಮನು ಬಸವ, ಗುರು-ಲಿಂಗ-ಜಂಗಮ ಸಂಗಮನಾಗಿ ವಚನ ಸಾಹಿತ್ಯ ಲಾಂಛನ ಬಸವ, ಬಸವನೆಂದರೆ ಬಸವ ನಲ್ಲ ಆತ್ಮದೊಳಗಣ ಶಿವ!! ಕಾಯಕ ಧರ್ಮದ ನಾಯಕ ಬಸವ, ನ್ಯಾಯನೀತಿಗೆ ಪ್ರಭು ಬಸವ, ಕರಣ ಶುದ್ದಿಯ ಸಿದ್ಧ ಸಂಸಾರಿ.. ಧರ್ಮ ಕಾರಣದ ಬ್ರಹ್ಮ ಬಸವ. ಬಸವನೆಂದರೆ ಬಸವ ನಲ್ಲ ನಿತ್ಯ ಕರ್ಮಕ್ಕೆ ವಾಸ್ತವ ಪ್ರಣವ...!! ಶರಣ ಚರಣದ ತರುಣನು ಬಸವ, ಅರುಣ ಕಿರಣದ ತೇಜಪುಂಜ ಬಸವ, ನಿತ್ಯಸತ್ಯದ ಮಾರ್ಗವ ತೋರಿ, ಚಿದಾನಂದ ದ ಮುದ್ದುನಗೆಯ ಮೌನಿ ಬಸವ. ಬಸವನೆಂದರೆ ಬಸವ ನಲ್ಲ ಯುಗದ ಮಹಾನುಭಾವ!! ತಾನು ಹಿರಿಯನಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಶರಣಪರಮಾನ್ನ ಬಡಿಸಿದ ಅಣ್ಣ ಬಸವ, ವಿಚಾರಕ್ಕೆ ವೀರ ಆಚಾರಕ್ಕೆ ಅರಸ, ಬಲ ಬಸವ ಹಂಬಲ ಬಸವ, ಬಸವನೆಂದರೆ ಬಸವ ನಲ್ಲ ನಮ್ಮ ಯಶ, ಹಿಂದಿನ ಕಸುವ..!!    - ಸಿದ್ದು ನೇಸರಗಿ ಮೂಗಬಸವ. ಸಿಆರ್ಪಿ ಆನಿಗೋಳ.. 

ವಿಶ್ವಗುರು ಬಸವ

ಬಸವನೆಂಬ ಜಗಜ್ಯೋತಿಯು ವೀರಶೈವನೋ ಪಂಚಮಸಾಲಿಯವನೋ ಮಾನವತೆಯ ತಿರುಳ ಸಾರಲು ಭೂವಿಗವತರಿಸಿದ ಮಹಾಮಾನವನೋ ಜಾತಿಬೇಧವ ಮಿರಿ ನಿಂತ ಮಾನವತಾವದಿಯವನು ಅವನಿಗು ಜಾತಿಯ ಪಟ್ಟ ಕಟ್ಟಿ ಬಂಧನದಲಿರಸ ಹೊರಟ  ಮಹಾಮುರ್ಖರಲ್ಲವೆ ನಾವು ಜಾತಿಧರ್ಮವ ಮೀರಿ ನಿಂತ ಮಹಾಮಹಿಮ ನೀನು ನಿನ್ನ ಹೆಸರಿನಲ್ಲಿ ಜಾತಿಧರ್ಮ ಮೇಲುಕೀಳು ಮಾಡುತಿರುವರು ನಾವು ವಿಶ್ವ ವಂದಿತ ಮನಕುಲದುದ್ದಾರಕ ಸಮಾನತೆಯ ಹರಿಕಾರ ವಚನದಲಿಟ್ಟ ಸಮಾಜದ ಸಾರ ಜಗದ ಜ್ಯೋತಿ ಬಸವನೆಂಬ ಶೂರ           ವಿಷ್ಣುಪ್ರಿಯ       ( ಪಿ ಎಮ್ ನಿಕ್ಕಮ್ಮನವರ)

ಕವಿಗಳು ಹಾಗೂ ಅವರ ಕೃತಿಗಳು

ಕವಿಗಳು ಹಾಗೂ ಅವರ ಕೃತಿಗಳು ಗುಣವರ್ಮ - ಹರಿವಂಶ, ಶೂದ್ರಕ ಆದಿಪಂಪ - ವಿಕ್ರಮಾರ್ಜುನ ವಿಜಯ, ಆದಿಪುರಾಣ ಪೊನ್ನ - ಭುವನೈಕರಾಮಾಭ್ಯುದಯ, ಶಾಂತಿಪುರಾಣ ನಾಗವರ್ಮ ೧- ಕರ್ನಾಟಕ ಕಾದಂಬರಿ ರನ್ನ - ಸಾಹಸಭೀಮ ವಿಜಯಂ, ಅಜಿತನಾಥ ಪುರಾಣಂ ದುರ್ಗಸಿಂಹ - ಪಂಚತಂತ್ರ ಚಂದ್ರರಾಜ - ಮದನತಿಲಕ ಶ್ರೀಧರಾಚಾರ್ಯ - ಚಂದ್ರಪ್ರಭಚರಿತೆ ಶಾಂತಿನಾಥ - ಸುಕುಮಾರ ಚತಿತೆ ನಾಗಚಂದ್ರ - ಮಲ್ಲಿನಾಥ ಪುರಾಣ, ರಾಮಚಂದ್ರಚರಿತ ಪುರಾಣ ಕರ್ಣಪಾರ್ಯ - ನೇಮಿನಾಥ ಪುರಾಣ ಹರಿಹರ - ಗಿರಿಜಾ ಕಲ್ಯಾಣ ನೇಮಿಚಂದ್ರ - ಲೀಲಾವತಿ, ನೇಮಿನಾಥ ಪುರಾಣ ರುದ್ರಭಟ- ಜಗನ್ನಾಥ ವಿಜಯಂ, ಚಂದ್ರಪ್ರಭ ಪುರಾಣ ಅಚ್ಚಣ್ಣ - ವರ್ಧಮಾನ ಪುರಾಣ ಬಂದುವರ್ಮ - ಹರಿವಂಶಾಭ್ಯುದಯ ದೇವಕವಿ - ಕುಸುಮಾವಳಿ, ಪಾರ್ಶ್ವನಾಥ ಪುರಾಣ ಜನ್ನ - ಅನಂತನಾಥ ಪುರಾಣ ಸೋಮನಾಥ - ಶೃಂಗಾರ ಸಾರ ಗುಣವರ್ಮ ೨ - ಪುಷ್ಪದಂತ ಪುರಾಣ, ಶಾಂತೀಶ್ವರ ಪುರಾಣ ಅಂಡಯ್ಯ - ಕಬ್ಬಿಗರ ಕಾವ ಮಹಾಬಲಕವಿ - ನೇಮಿನಾಥ ಪುರಾಣ ಚೌಂಡರಸ - ಅಭಿನವದಶಕುಮಾರ ಚರಿತೆ, ನಳಚರಿತ್ರೆ ನಾಗರಾಜ - ಪುಣ್ಯಾಸ್ರವ ವೃತ್ತವಿಲಾಸ - ಧರ್ಮಪರೀಕ್ಷೆ, ಶಾಸ್ತ್ರಸಾರ ಮಧುರ - ಧರ್ಮನಾಥ ಪುರಾಣ  ಆಯತವರ್ಮ‌- ಕನ್ನಡ ರತ್ನ ಕರಂಡಕ ಚಂದ್ರಕವಿ - ವಿರೂಪಾಕ್ಷಸ್ಥಾನ ಸುರಂಗಕವಿ - ತ್ರಿಷಷ್ಠಿಪುರಾತನ ಚರಿತ್ರೆ ಷಡಕ್ಷರದೇವ - ರಾಜಶೇಖರ ವಿಳಾಸ ತಿರುಮಲಾರ್ಯ - ಚಿಕ್ಕದೇವರಾಜ ವಿಜಯ ಚಿಕುಪಾಧ್ಯಾಯ - ದಿವ್ಯಸೂರಿ ಚರಿತ್ರೆ ಲಿಂಗಣ್ಣ - ಕೆಳದಿ ನೃಪವಿಜಯ ದೇವಚಂದ್ರ - ರಾಮ

ನಕಾರಾತ್ಮಕತೆ ನಾಶಕ್ಕೆ ದಾರಿ

ಅಮಿತನಿಗೆ ಅಂದೇಕೋ ಕಳವಳ, ಹತಾಶೆ , ಬೇಸರ,ಜಿಗುಪ್ಸೆ ಬೆಳಿಗ್ಗೆ ಹಾಸ್ಪಿಟಲ್ ಗೆ  ಹೋಗಿ ಕೋವಿಡ್ ಟೇಸ್ಟ ಮಾಡಲಿಕ್ಕೆ ಸ್ವ್ಯಾಬ್ ಕೊಟ್ಟು ಬಂದಾಗಿನಿಂದ  ಎದೆಯಲ್ಲಿ ಎನೋ ಒಂಥರಾ ದುಗುಡ ಮೈಯ್ಯಲ್ಲಾ ಬಿಸಿಯಾದಂತ ಅನುಭವ ಗಂಟಲಲ್ಲಿ ತುರಿಕೆಯಾದಂತ ಅನುಭವ . ರಿಜಲ್ಟ ಏನು ಬರತ್ತದೇಯೋ ಎಂಬ ಚಿಂತೆ.       ನೇರವಾಗಿ ತನ್ನ ಕೋಣೆಗೆ ಹೋಗಿ ಬಾಗಿಲನ್ನು ಲಾಕ್ ಮಾಡಿಕೊಂಡು ಯೋಚಿಸುತ್ತಾ ಕುಳಿತ . ಏನಾದರು ರಿಜಲ್ಟ ಕೋವಿಡ್ ಪಾಸಿಟಿವ್ ಎಂದು ಬಂದರೆ ? ಅಯ್ಯೋ ವಿಧಿಯೇ ಇನ್ನು ಸಾವು ಮನೆ ಬಾಗಿಲಿಗೆ ಬಂದಿತೇ? ಜನಾ ನನ್ನ ಹೇಗೆ ನಡೆಸಿಕೊಂಡಾರು ? ಎಂಬ ಭಯ ಆತಂಕ ಮನೆ ಮಾಡಿತು.ಕರೋನಾ ರೋಗದಿಂದ ಸತ್ತವರ ಶವ ಸಂಸ್ಕಾರ ಮಾಡುವುದನ್ನು       ಟಿ ವಿ ಯಲ್ಲಿ ದಿನವೀಡಿ ತೋರಿಸುದನ್ನು ನೋಡಿದ್ದ ಆತನಿಗೆ ನನ್ನನ್ನು ಅದೇ ರೀತಿ ಸತ್ತ ಪ್ರಾಣಿಗಳನ್ನು ಚಿಮ್ಮವಂತೆ ಚಿಮ್ಮುತ್ತಾರಲ್ಲ ಎಂದು ಯೋಚಿಸಿದ. ಮತ್ತು ಮೊನ್ನೆ ಯಾರೋ ಒಬ್ಬ ತಾತ ಸತ್ತನಲ್ಲ ಆತ ಹೆಣ ಒಯ್ಯಲು ಯಾರೂ ಬರಲಿಲ್ಲ ಯಾರೋ ಮೂರು ಜನ ತಮ್ಮ ಬೈಕ್ ನಲ್ಲಿ ಒಯ್ದು ದಫನ ಮಾಡಿದ್ದು ಟಿ ವಿ ಯಲ್ಲಿ ನೋಡಿದ್ದು ನೆನಪಾಗಿ ಬಿಕ್ಕಿ ಬಿಕ್ಕಿ ಅತ್ತ .ಒಂದು ಆಲೋಚನೆ ಹೊಳೆಯಿತು. ಹೇಗೂ ನಾನು ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿದ್ದು ಯಾರಿಗೂ ಗೊತ್ತಿಲ್ಲ. ಗೊತ್ತಾಗುವ ಪೂರ್ವದಲ್ಲಿಯೇ  ಆತ್ಮಹತ್ಯೆ ಮಾಡಿಕೊಂಡರೆ ಹೇಗೆ ಎಂದುಕೊಂಡ. ಮನಸ್ಸಿಗೆ ಅದೇ ಸರಿ ಎನಿಸಿತು. ತನ್ನವರೆಲ್ಲ ಇದ್ದು ಅನಾಥ ಶವವಾಗಿ ಸಂಸ್ಕಾರ

ಬಿಸಿಲ್ಗುದುರೆ ಈ ಬದುಕು

ಹೆಸರು ರಾಮಾಪೂರ. ಒಂದಾನೊಂದು ಕಾಲದಲ್ಲಿ ರಾಮಾಪೂರದ ಬಸಸ್ಟ್ಯಾಂಡ ಇದೆಯಲ್ಲ ಅಲ್ಲೊಂದು ಪುಟಾಣಿ ಗುಡಿಸಲಿತ್ತು. ಪಕ್ಷಿಗಳು ಗೂಡು ಕಟ್ಟಿಕೊಳ್ಳುವುದನ್ನ ನೋಡಿದ್ದೀರಾ? ಅದೇ ತರಹ ಇಬ್ಬರು ಗಂಡಾ ಹೆಂಡತಿ ಬಲು ಕಷ್ಟಪಟ್ಟು ಆ ಗೂಡು ಕಟ್ಟಿಕೊಂಡಿದ್ದರು. ಅದರೊಳಗೆಯೆ ಅವರ ಸಂಸಾರ. ಆ ಬಡ ಸಂಸಾರದೊಳಗಿದ್ದ  ಹೆಂಗಸಿನ ಹೊಂಗನಸುಗಳಿಗೇನೂ ಬರವಿರಲಿಲ್ಲ. ಗಂಡ ಹೆಂಡಿರಿಬ್ಬರೂ ದಿನವೂ ಕೂಲಿ ಹೋಗಬೇಕು, ದುಡಕೊಂಡ ಬರಬೇಕು, ಹೊಟ್ಟೆಗೆ ಹಿಟ್ಟ ಕಾಣಬೇಕು ಇಷ್ಟಾಗಿದ್ದರೆ ಚೆಂದಿತ್ತು ಅನಿಸುತ್ತದೆ. ಆದರೆ ಆಗಿದ್ದೇನು? ಗಂಡ ದುಡಕೊಂಡೇನೋ ಬರತಿದ್ದ. ಆದರೆ ದುಡಿದಿದ್ದೆಲ್ಲಾ ಕುಡಕೊಂಡು ಬರತಿದ್ದ. ಪಾಪ ಹೆಂಡತಿ ಎಷ್ಟಂತ ಸಹಿಸ್ಯಾಳು. ರೀ..ಯಾಕ್ರೀ ಹೀಗ ಮಾಡ್ತೀರಿ? ನೀವ ದುಡಿಯದಿದ್ದರೂ ಪರವಾಗಿಲ್ಲಾ; ಹಿಂಗ ದಿನಾ ಕುಡಕೊಂಡ ಬಂದ ನನ್ನ ಜೀವಕ ನಿಗ್ರಾ ಮಾಡಬ್ಯಾಡ್ರೀ; ಬೇಕಾದ್ರ ನಿಮ್ಮ ಕಾಲ ಬೀಳತೆನು ಅಂತ ಅಂಗಲಾಚಿ, ಕಣ್ಣೀರ ಹಾಕಾವ್ಳು. ಆದರ ಗಂಡನಿಗೆ ಹೆಂಡತಿ ಆಡೋ ಯಾವ ಮಾತೂ ನಾಟುತ್ತಿರಲಿಲ್ಲ. ಬದಲಾಗಿ ಏನು..ನೀ ದುಡದ ನನಗ ಹಾಕಾಕಿ? ಅಂದರ ನನಗ ದುಡದ ಹಾಕೋ ಯೋಗ್ಯತೆಯಿಲ್ಲ ಅಂತ ಸುತ್ತಿ ಬಳಸಿ ಹೇಳಾಕ ಬರತಿಯೇನ ಬೋಸುಡೆ ಅಂತ ಜಾಡಿ ಜಾಡಿಸಿ ಹೊಟ್ಟೆ, ಎದಿಯನ್ನದ ಒದ್ಯಾಂವ, ಕೈಗೆ ಏನ ಸಿಗತೈತಿ ಅದನ್ನ ತುಗೊಂಡು ಹೇರಾಂವ. ಒಟ್ಟಿನಲ್ಲಿ ಅವಳು ದಿನಾ ರಕ್ತ ಹಾಯಿಸಗೊಳ್ಳೊದು ತಪ್ಪುತ್ತಿರಲಿಲ್ಲ. ಇದು ಒಂದಿನದ ಸಾವಾಗಿರಲಿಲ್ಲ ದಿನಾ ಹಿಂಗ ನಡೆಯೋದ