Skip to main content

ಬಸವ ಸಂಪದ



ಭವದ ಬಂಧನವ ಹರಿದೊಗೆದು
ದಿವಕೆ ಕುಂದಣನಾಗಿ ಹೊಳೆಯುತಿಹ ಬಸವ..
ಅನುಭಾವದ ಆನಂದದಿ ಜಗ ನಂದನವನ ಮಾಡಿದ ಬಸವ
ಬಸವನೆಂದರೆ ಬಸವನಲ್ಲ ಸುಜ್ಞಾನದ ಪ್ರಸವ!!

ಸರ್ವಶಕ್ತನು ಬಸವ, ಗರ್ವ ಮುಕ್ತನು ಬಸವ, ಭಕ್ತಿ ವರ್ಷವ ಸುರಿದು ಮುಕ್ತಿ ಸ್ಪರ್ಶವ ನೀಡಿದ ಬಸವ, ಯುಗಪುರುಷನು ಬಸವ ಜೀವಪರುಷನು ಬಸವ ಜ್ಞಾನಸಂಗಮನಾದವ ಬಸವ.
ಬಸವನೆಂದರೆ  ಬಸವನಲ್ಲ ದೇವಾಂಶ ಸಂಭವ.!!

ಸರ್ವಾಂಗವನೇ ಲಿಂಗಮಯ  ಮಾಡಿ, ಇಷ್ಟಲಿಂಗದ ಜಂಗಮನು ಬಸವ, ಗುರು-ಲಿಂಗ-ಜಂಗಮ ಸಂಗಮನಾಗಿ ವಚನ ಸಾಹಿತ್ಯ ಲಾಂಛನ ಬಸವ, ಬಸವನೆಂದರೆ ಬಸವ ನಲ್ಲ ಆತ್ಮದೊಳಗಣ ಶಿವ!!

ಕಾಯಕ ಧರ್ಮದ ನಾಯಕ ಬಸವ, ನ್ಯಾಯನೀತಿಗೆ ಪ್ರಭು ಬಸವ, ಕರಣ ಶುದ್ದಿಯ ಸಿದ್ಧ ಸಂಸಾರಿ.. ಧರ್ಮ ಕಾರಣದ ಬ್ರಹ್ಮ ಬಸವ. ಬಸವನೆಂದರೆ ಬಸವ ನಲ್ಲ ನಿತ್ಯ ಕರ್ಮಕ್ಕೆ ವಾಸ್ತವ ಪ್ರಣವ...!!

ಶರಣ ಚರಣದ ತರುಣನು ಬಸವ, ಅರುಣ ಕಿರಣದ ತೇಜಪುಂಜ ಬಸವ, ನಿತ್ಯಸತ್ಯದ ಮಾರ್ಗವ ತೋರಿ, ಚಿದಾನಂದ ದ ಮುದ್ದುನಗೆಯ ಮೌನಿ ಬಸವ. ಬಸವನೆಂದರೆ ಬಸವ ನಲ್ಲ ಯುಗದ ಮಹಾನುಭಾವ!!

ತಾನು ಹಿರಿಯನಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ
ಶರಣಪರಮಾನ್ನ ಬಡಿಸಿದ ಅಣ್ಣ ಬಸವ, ವಿಚಾರಕ್ಕೆ ವೀರ ಆಚಾರಕ್ಕೆ ಅರಸ, ಬಲ ಬಸವ ಹಂಬಲ ಬಸವ, ಬಸವನೆಂದರೆ ಬಸವ ನಲ್ಲ ನಮ್ಮ ಯಶ, ಹಿಂದಿನ ಕಸುವ..!!

   - ಸಿದ್ದು ನೇಸರಗಿ ಮೂಗಬಸವ. ಸಿಆರ್ಪಿ ಆನಿಗೋಳ.. 

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ