Skip to main content

ಬಸವ ಸಂಪದ



ಭವದ ಬಂಧನವ ಹರಿದೊಗೆದು
ದಿವಕೆ ಕುಂದಣನಾಗಿ ಹೊಳೆಯುತಿಹ ಬಸವ..
ಅನುಭಾವದ ಆನಂದದಿ ಜಗ ನಂದನವನ ಮಾಡಿದ ಬಸವ
ಬಸವನೆಂದರೆ ಬಸವನಲ್ಲ ಸುಜ್ಞಾನದ ಪ್ರಸವ!!

ಸರ್ವಶಕ್ತನು ಬಸವ, ಗರ್ವ ಮುಕ್ತನು ಬಸವ, ಭಕ್ತಿ ವರ್ಷವ ಸುರಿದು ಮುಕ್ತಿ ಸ್ಪರ್ಶವ ನೀಡಿದ ಬಸವ, ಯುಗಪುರುಷನು ಬಸವ ಜೀವಪರುಷನು ಬಸವ ಜ್ಞಾನಸಂಗಮನಾದವ ಬಸವ.
ಬಸವನೆಂದರೆ  ಬಸವನಲ್ಲ ದೇವಾಂಶ ಸಂಭವ.!!

ಸರ್ವಾಂಗವನೇ ಲಿಂಗಮಯ  ಮಾಡಿ, ಇಷ್ಟಲಿಂಗದ ಜಂಗಮನು ಬಸವ, ಗುರು-ಲಿಂಗ-ಜಂಗಮ ಸಂಗಮನಾಗಿ ವಚನ ಸಾಹಿತ್ಯ ಲಾಂಛನ ಬಸವ, ಬಸವನೆಂದರೆ ಬಸವ ನಲ್ಲ ಆತ್ಮದೊಳಗಣ ಶಿವ!!

ಕಾಯಕ ಧರ್ಮದ ನಾಯಕ ಬಸವ, ನ್ಯಾಯನೀತಿಗೆ ಪ್ರಭು ಬಸವ, ಕರಣ ಶುದ್ದಿಯ ಸಿದ್ಧ ಸಂಸಾರಿ.. ಧರ್ಮ ಕಾರಣದ ಬ್ರಹ್ಮ ಬಸವ. ಬಸವನೆಂದರೆ ಬಸವ ನಲ್ಲ ನಿತ್ಯ ಕರ್ಮಕ್ಕೆ ವಾಸ್ತವ ಪ್ರಣವ...!!

ಶರಣ ಚರಣದ ತರುಣನು ಬಸವ, ಅರುಣ ಕಿರಣದ ತೇಜಪುಂಜ ಬಸವ, ನಿತ್ಯಸತ್ಯದ ಮಾರ್ಗವ ತೋರಿ, ಚಿದಾನಂದ ದ ಮುದ್ದುನಗೆಯ ಮೌನಿ ಬಸವ. ಬಸವನೆಂದರೆ ಬಸವ ನಲ್ಲ ಯುಗದ ಮಹಾನುಭಾವ!!

ತಾನು ಹಿರಿಯನಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ
ಶರಣಪರಮಾನ್ನ ಬಡಿಸಿದ ಅಣ್ಣ ಬಸವ, ವಿಚಾರಕ್ಕೆ ವೀರ ಆಚಾರಕ್ಕೆ ಅರಸ, ಬಲ ಬಸವ ಹಂಬಲ ಬಸವ, ಬಸವನೆಂದರೆ ಬಸವ ನಲ್ಲ ನಮ್ಮ ಯಶ, ಹಿಂದಿನ ಕಸುವ..!!

   - ಸಿದ್ದು ನೇಸರಗಿ ಮೂಗಬಸವ. ಸಿಆರ್ಪಿ ಆನಿಗೋಳ.. 

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...