ಹೊಳೆಹೊಳೆವ ರವಿಯು
ಪಳಪಳನೆ ಬೆಳಗಿಹನು ಧರೆಯ
ಹಸಿರಸಿರ ತರುಲತೆಯು
ನಳನಳಸಿ ನಗುವಂತೆ
ಹೂಮೊಗ್ಗು ಬಿರಿದಿವೆ
ದುಂಬಿಗಿಂಬಿ ಝೇಂಕರಿಸಿವೆ
ಖಗಮೃಗಗಳು ಸಂತೋಷದಿ
ಹಾಡಿಪಾಡಿ ಸಂಭ್ರಮಿಸಿವೆ
ರಾಗತಾಳ ಸಮ್ಮಿಲನ ಸಂಗೀತ
ಅರುಣ ಕಿರಣ ಇಳೆಗೆ ತಂದ ಸಂಭ್ರಮ
ಮಾವುಬೇವು ತೋರಣ ಕಟ್ಟಿ
ಹಬ್ಬಹರಿದಿನ ಆಚರಿಸಿದ ಕೃಷಿಕ
ದಿನದಿನದ ನಿನ್ನ ಆಗಮನ
ಜೀವಜಂತುಗಳಿಗೆ ಸಂಭ್ರಮ
ಉದಯ ಹೃದಯ ವಿಶಾಲ
ಉಸಿರುಸಿರಲಿ ಬೆರೆತಿಹನು ಜಗವ
ವಿಷ್ಣುಪ್ರಿಯ
(ಪಿ ಎಮ್ ನಿಕ್ಕಮ್ಮನವರ)
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ