Skip to main content

ಅರುಣನಾಗಮನದಿ( ಉದಯನ ಹೃದಯ)

ಹೊಳೆಹೊಳೆವ ರವಿಯು
ಪಳಪಳನೆ ಬೆಳಗಿಹನು ಧರೆಯ
ಹಸಿರಸಿರ ತರುಲತೆಯು
ನಳನಳಸಿ ನಗುವಂತೆ

ಹೂಮೊಗ್ಗು ಬಿರಿದಿವೆ
ದುಂಬಿಗಿಂಬಿ ಝೇಂಕರಿಸಿವೆ
ಖಗಮೃಗಗಳು ಸಂತೋಷದಿ
ಹಾಡಿಪಾಡಿ ಸಂಭ್ರಮಿಸಿವೆ

ರಾಗತಾಳ ಸಮ್ಮಿಲನ ಸಂಗೀತ
ಅರುಣ ಕಿರಣ ಇಳೆಗೆ ತಂದ ಸಂಭ್ರಮ
ಮಾವುಬೇವು ತೋರಣ ಕಟ್ಟಿ
ಹಬ್ಬಹರಿದಿನ ಆಚರಿಸಿದ ಕೃಷಿಕ

ದಿನದಿನದ ನಿನ್ನ ಆಗಮನ
ಜೀವಜಂತುಗಳಿಗೆ ಸಂಭ್ರಮ
ಉದಯ ಹೃದಯ ವಿಶಾಲ
ಉಸಿರುಸಿರಲಿ ಬೆರೆತಿಹನು ಜಗವ

         ವಿಷ್ಣುಪ್ರಿಯ 
     (ಪಿ ಎಮ್ ನಿಕ್ಕಮ್ಮನವರ)

Comments

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...