Skip to main content

ಮಣ್ಣ ಕಣಕಣದಲಿದೆ ಮದ್ದು


ಹಿತ್ತಲ ಗಿಡ ಮದ್ದಲ್ಲ
ಎಂದು ಪರಿಭಾವಿಸಿ
ಪಾಶ್ಚ್ಯತ್ಯ ಔಷಧಿಗಳ ದಾಸನಾಗಿ
ಬೆಳ್ಳಗಿರವುದೆಲ್ಲ ಹಾಲೆಂದು ನಂಬಿ ಮೋಸಹೋಗಿಹೆ

ನಿನ್ನ ಅಂತಃಸತ್ವವನು ಮರೆತು
ಆರ್ಷಧರ್ಮದ ಋಷಿಮುನಿಗಳನು 
ಮೂಢರೆಂದು  ಬಗೆದು
ನಿನಗೆ ನೀನೆ ಮೋಸಮಾಡಿಕೊಂಡಿರುವೆ

ಆಯುರ್ವೇದದ ಮೂಲ
ನಮ್ಮ ಈ ಭರತ ನೆಲ
ಮಣ್ಣ ಕಣಕಣದಲಿ ಇದೆ ಮದ್ದು
ಎದೆಗುಂದದೆ ನಿಲ್ಲು ಎದ್ದು

ದಾಳಿ ನೂರಾದರೂ
ಬಾಳಿ ಬದುಕುತಿಹೆವು ನಾವು
ವೈರಿಯಿರಲಿ ವೈರಾಣುವಿರಲಿ
ಆತ್ಮಸ್ಥೈರ್ಯ ಜೊತೆಗಿರಲಿ

ಆಯುರ್ವೇದವ ಅಪ್ಪಿಕೋ
ಆರ್ಷಧರ್ಮವ ಆಶ್ರಯಿಸಿಕೋ
ಆಯುಷ್ಯವ ವೃದ್ಧಿಸಿಕೋ
ಆತ್ಮ ವಿಶ್ವಾಸವ ನೆಚ್ಚಿಕೋ

        ವಿಷ್ಣುಪ್ರಿಯ 
   (ಪಿ ಎಮ್ ನಿಕ್ಕಮ್ಮನವರ)

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...