Skip to main content

ಮಣ್ಣ ಕಣಕಣದಲಿದೆ ಮದ್ದು


ಹಿತ್ತಲ ಗಿಡ ಮದ್ದಲ್ಲ
ಎಂದು ಪರಿಭಾವಿಸಿ
ಪಾಶ್ಚ್ಯತ್ಯ ಔಷಧಿಗಳ ದಾಸನಾಗಿ
ಬೆಳ್ಳಗಿರವುದೆಲ್ಲ ಹಾಲೆಂದು ನಂಬಿ ಮೋಸಹೋಗಿಹೆ

ನಿನ್ನ ಅಂತಃಸತ್ವವನು ಮರೆತು
ಆರ್ಷಧರ್ಮದ ಋಷಿಮುನಿಗಳನು 
ಮೂಢರೆಂದು  ಬಗೆದು
ನಿನಗೆ ನೀನೆ ಮೋಸಮಾಡಿಕೊಂಡಿರುವೆ

ಆಯುರ್ವೇದದ ಮೂಲ
ನಮ್ಮ ಈ ಭರತ ನೆಲ
ಮಣ್ಣ ಕಣಕಣದಲಿ ಇದೆ ಮದ್ದು
ಎದೆಗುಂದದೆ ನಿಲ್ಲು ಎದ್ದು

ದಾಳಿ ನೂರಾದರೂ
ಬಾಳಿ ಬದುಕುತಿಹೆವು ನಾವು
ವೈರಿಯಿರಲಿ ವೈರಾಣುವಿರಲಿ
ಆತ್ಮಸ್ಥೈರ್ಯ ಜೊತೆಗಿರಲಿ

ಆಯುರ್ವೇದವ ಅಪ್ಪಿಕೋ
ಆರ್ಷಧರ್ಮವ ಆಶ್ರಯಿಸಿಕೋ
ಆಯುಷ್ಯವ ವೃದ್ಧಿಸಿಕೋ
ಆತ್ಮ ವಿಶ್ವಾಸವ ನೆಚ್ಚಿಕೋ

        ವಿಷ್ಣುಪ್ರಿಯ 
   (ಪಿ ಎಮ್ ನಿಕ್ಕಮ್ಮನವರ)

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...