Skip to main content

ಊರ ಮುಂದಿನ ಹೊಲ


ಊರ ಮುಂದಿನ ಹೊಲಕ
ನಾ ಕುಂಟೀಯ ಹೂಡಿದರ
ಬಳದಾಯ್ತು ಭಾಳ.. ಕಡದಾಯ್ತು ಕಿರುಗುಳ..ಅಂದೋರೇ ಬಹಳ.
ಸಾಗಿದಂಗ ಹೊಡೀ..ಅಂದವರು ವಿರಳ....!!

ಅಂದವರು ಅನ್ನಲಿ.. ಚಂದ...ನ... ನನ್ನಹೊಲ..ಈ ಸೀಮೆಯೊಳಗ
ಇಲ್ಲಾ ನನ್ನಂಥ ಒಕ್ಕಲಾ..ಕರಿಮಣ್ಣಹೊಲಾ...
ಮೇಳಿಯ ಹಿಡಿದು ಗಳೇಯನು
ಹೊಡೆದರ ಮಣ್ಣೀನ ಹದ..
ಮನಸೀಗೆ ಮುದ....!!

ಒಡ್ಡಿಲ್ಲ..ಒಡಬಲಿಲ್ಲ ಸಮ ತಟ್ಟಿನ ಹೊಲ..
ಮಳೆರಾಯ ಸುರಿದರ ನೀರ
ಗಂಗಾಳಕ ಹಾಲು ಸುರಿದಂಗ..
ಇಂಗಿದ ಉಳಿನೀರು ಸಾಗಲು ತಿಳಿ ನೀರು ಕಲಬಚ್ಚಲ ಕಾವಲು ಕೋಟೆ ನನ್ನ ಹೊಲಕ..
ತುಂಬಿದ ನೀರಿಗೆ ತಂಬಿಟ್ಟಿನಂಗ
ಹದಸಿರೀ ಮಣ್ಣ...!!

ಎತ್ತೆರಡು ನತ್ತಿನಂಗ ರಾಮಣ್ಣ ಭೀಮಣ್ಣ...
ಬಿತ್ತಾ ಕ ಬಂಟರು  ಹೊತ್ತುಇಳಿಯುವ ಮುನ್ನ..
ಭೂತಾಯಿ ಮಕ್ಕಳ ಜೀವದ ಕಣ್ಣ...
ಆಸರಿಲ್ಲ ಬ್ಯಾಸರಿಲ್ಲ ನಮ್ಮ ಬಸವಣ್ಣ...!!

ನೆಟ್ಟ ಹೆಜ್ಜೀಯ ಗುಂಟಾ ಕೂರಿಗೆ ಸಾಲ..
ದಿಟ್ಟನಡಿಗಿ ನೋಟಕ ಊರಿಗೆಲ್ಲ
ದಿಗಿಲಾ..
ಸುಗ್ಗೀಯ ಕಾಲಕ  ಹಗ್ಗೆಲ್ಲಾ ಮುಗಿಲಾ..
ಕಾಳಿನ ನಿಟ್ಟು ದ್ಯಾಬ್ಯಾಗ ಮ್ಯಾಗರಮ್ಯಾಲ..!!

ತಲಿಮ್ಯಾರಿ ಮ್ಯಾಲ ಬೇವಿನಮರದ ನೆಳ್ಳ...
ಕಾಲದೇಸೀ ಹರದೈತಿ ಜುಳು ಜುಳು ಹಳ್ಳ...
ಕುಡಸಾಲ ಕೂಡ್ಯಾವ ಹೀರಿ ಅವರೀಯ ಬಳ್ಳ..
ಹಳಹಳೀ ಬಿಡಿಸೈತೀ ನನ್ನ ಹಳ್ಳೀ..
ಊರ ಮುಂದಿನ ಹೊಲ..!!

✍🏽 ಸಿದ್ದು ನೇಸರಗಿ (ಮೂಗಬಸವ ) ಸಿ ಆರ್ ಪಿ ಆನಿಗೋಳ..🙏ಹಳ್ಳಿಯ ಹಾಡು ಆಸ್ವಾದಿಸಿ ಅಭಿಪ್ರಯಿಸಿ ಮಿತ್ರರೇ..🙏💐💐

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...