Skip to main content

ಮರಳಿ ಬಾರದಿ ಸಮಯ


ನಗುವುದಾದರೆ ನಕ್ಕುಬಿಡು
ಅಳುವುದಾದರೆ ಅತ್ತುಬಿಡು
ಸುಃಖ ದುಃಖವಾ ಹಂಚಿಕೋ
ಮರೆಯದಿರು ಮರಳಿ ಬಾರದಿ ಸಮಯ|| ||

ಹಂಚಿಬಿಡು ನಿನ್ನ ನಿಸ್ವಾರ್ಥ ಪ್ರೀತಿಯಾ
ವ್ಯಕ್ತಪಡಿಸು ಮನದಾಳದ ಭಾವನೆಗಳನ್ನ
ತೋರಿಸು ಭಕ್ತಿಯ ಪರಾಕಾಷ್ಠೆಯನ್ನು
ಮರೆಯದಿರು ಮರಳಿ ಬಾರದಿ ಸಮಯ|| ||

ದೀರ್ಘಕಾಲದ ದ್ವೇಷವಾ ಮರೆತುಬಿಡು
ಸುದೀರ್ಘಕಾಲದಿ ಪ್ರೇಮದ ಬೀಜವಾ ಬಿತ್ತಿಬಿಡು
ನೋವು ನಲಿವಿನ ಪಯಣ ಸಾಗಲಿ ನಿರಂತರ
ಮರೆಯದಿರು ಮರಳಿ ಬಾರದಿ ಸಮಯ|| ||

ತಂದೆ ತಾಯಿಯ ಸೇವೆಯ ಮರೆಯದಿರು
ಗುರು ಹಿರಿಯರ ಆಶೀರ್ವಾದ ಸ್ವಿಕರಿಸು ಸದಾ
ಬಂಧು ಬಳಗ ಗೆಳೆಯರಾದಿಯಾಗಿ ಸಂಬಂಧವಾ ಉಳಿಸಿ ಬೆಳೆಸು
ಮರೆಯದಿರು ಮರಳಿ ಬಾರದಿ ಸಮಯ|| ||

ಸಿರಿ ಬಂದಾಗ ಹತ್ತು ಜನರಿಗೆ ಹಂಚಿತಿನ್ನು
ಸುಗ್ಗಿಯ ಕಾಲದಿ ಭೂತಾಯಿಯ ನೆನೆದು ಧನ್ಯನಾಗು
ಹೂವು ಮುಳ್ಳಿನಾ ಬದುಕಿನಲಿ ತನು-ಮನ-ಧನ ಸಮರ್ಪಿಸು 
ಮರೆಯದಿರು ಮರಳಿ ಬಾರದಿ ಸಮಯ|| ||
                                         
                                           - ಸಂದೀಪ ಕುಲಕರ್ಣಿ

Comments

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...