Skip to main content

ಗಜಲ್@ ಆನಂದ ಮಾಲಗಿತ್ತಿಮಠ

ಸುಮ್ಮನಿರಲಾರದೆ ಬರಿ ಧರ್ಮವೆಂದೇ ಅಷ್ಟೇ ನಾನೇನೂ ಮಾಡಿರಲಿಲ್ಲ
ಕೋಮುವಾದಿ ಎಂಬ ಬಿರುದು ಕೊಟ್ಟರಂದೇ ನಾನೇನೂ ಮಾಡಿರಲಿಲ್ಲ

ತ್ರಾಸಿನಲಿ ಬರಿ ಪ್ರಾಸಗಳ ಜೋಡಿಸಿ, ಅಕ್ಷರಗಳ ಮಾಲೆ ಹೆಣೆದಿದ್ದೆ ಅಷ್ಟೇ
ಕವಿಯೆಂದು ಕರೆದು ಪ್ರಶಸ್ತಿ ನೀಡಿಯೇ ಬಿಟ್ಟರಂದೇ ನಾನೇನೂ ಬರೆದಿರಲಿಲ್ಲ

ಖಾದಿಯ ತೊಟ್ಟು ಓಣಿಯ ನಾಲ್ಕಾರು ಕದನಗಳನು ಬಗೆಹರಿಸಿದ್ದೆ ಅಷ್ಟೇ
ರಾಜಕಾರಣಿಯೆಂದು ಜನ ಜೈಕಾರ ಹಾಕಿದರಂದೇ ನಾನೇನೂ ಮಾಡಿರಲಿಲ್ಲ

ಪರದೆಯ ಮುಂದೆ ನಿಲ್ಲಿಸಿದಾಗ ಬರಿ ಬಾಯಿ ಬಡಿದೆ ಮೂಗನಂತೆ ಅಷ್ಟೇ
ನಟಚಕ್ರವರ್ತಿಯೆಂದು ಪುತ್ಥಳಿಯನೇ ಮಾಡಿಟ್ಟರಂದೇ ನಾನೇನೂ ನಟಿಸಿರಲಿಲ್ಲ

ಎದೆ ಎದೆ ಬಡಿದುಕೊಂಡು 'ಆನಂದ' ವಿರದೆ  ಹಸಿವು ಎಂದು ಕೂಗಿದೆ ಅಷ್ಟೇ
ಅನ್ನದ ಬಟ್ಟಲ ಕಸಿದು  ಸಾಯಿ ಮಗನೇ ಅಂದರಂದೇ ನಾನೇನೂ ಬದುಕಲಿಲ್ಲ

ಈ ಗಜಲ್ ನ್ನೂ ಓದಿ

Comments

  1. ಗಜಲ್ ನಿಮಗೆ ಸಿದ್ಧಿಸಿದೆ ಅಷ್ಟೇ

    ReplyDelete

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...