Skip to main content

ಗಜಲ್@ ಆನಂದ ಮಾಲಗಿತ್ತಿಮಠ

ಸುಮ್ಮನಿರಲಾರದೆ ಬರಿ ಧರ್ಮವೆಂದೇ ಅಷ್ಟೇ ನಾನೇನೂ ಮಾಡಿರಲಿಲ್ಲ
ಕೋಮುವಾದಿ ಎಂಬ ಬಿರುದು ಕೊಟ್ಟರಂದೇ ನಾನೇನೂ ಮಾಡಿರಲಿಲ್ಲ

ತ್ರಾಸಿನಲಿ ಬರಿ ಪ್ರಾಸಗಳ ಜೋಡಿಸಿ, ಅಕ್ಷರಗಳ ಮಾಲೆ ಹೆಣೆದಿದ್ದೆ ಅಷ್ಟೇ
ಕವಿಯೆಂದು ಕರೆದು ಪ್ರಶಸ್ತಿ ನೀಡಿಯೇ ಬಿಟ್ಟರಂದೇ ನಾನೇನೂ ಬರೆದಿರಲಿಲ್ಲ

ಖಾದಿಯ ತೊಟ್ಟು ಓಣಿಯ ನಾಲ್ಕಾರು ಕದನಗಳನು ಬಗೆಹರಿಸಿದ್ದೆ ಅಷ್ಟೇ
ರಾಜಕಾರಣಿಯೆಂದು ಜನ ಜೈಕಾರ ಹಾಕಿದರಂದೇ ನಾನೇನೂ ಮಾಡಿರಲಿಲ್ಲ

ಪರದೆಯ ಮುಂದೆ ನಿಲ್ಲಿಸಿದಾಗ ಬರಿ ಬಾಯಿ ಬಡಿದೆ ಮೂಗನಂತೆ ಅಷ್ಟೇ
ನಟಚಕ್ರವರ್ತಿಯೆಂದು ಪುತ್ಥಳಿಯನೇ ಮಾಡಿಟ್ಟರಂದೇ ನಾನೇನೂ ನಟಿಸಿರಲಿಲ್ಲ

ಎದೆ ಎದೆ ಬಡಿದುಕೊಂಡು 'ಆನಂದ' ವಿರದೆ  ಹಸಿವು ಎಂದು ಕೂಗಿದೆ ಅಷ್ಟೇ
ಅನ್ನದ ಬಟ್ಟಲ ಕಸಿದು  ಸಾಯಿ ಮಗನೇ ಅಂದರಂದೇ ನಾನೇನೂ ಬದುಕಲಿಲ್ಲ

ಈ ಗಜಲ್ ನ್ನೂ ಓದಿ

Comments

  1. ಗಜಲ್ ನಿಮಗೆ ಸಿದ್ಧಿಸಿದೆ ಅಷ್ಟೇ

    ReplyDelete

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ