Skip to main content

ಗಜಲ್ @ ಆನಂದ ಮಾಲಗಿತ್ತಿಮಠ

ಸುಮ್ಮನೇ ಸಿಡುಕಬೇಡ ಮನದ ದಳಗಳು ಇನ್ನೂ ಮಿಡಿಯಾಗಿವೆ
ತಪ್ಪುಗಳ ಎತ್ತಿ ತೋರಬೇಡ ಕೈ ಬೆರಳುಗಳು ಇನ್ನೂ ಮಿಡಿಯಾಗಿವೆ

ಕಲ್ಪನೆಯ ಗುಹೆಯೊಳಗೆ ಕುಳಿತು ಬದುಕು ಬರಿಯ ಕತ್ತಲೆನಬೇಡ
ಒಳಬಣ್ಣಗಳನು ಬೆತ್ತಲೆಗೊಳಿಸಲು ಕಿರಣಗಳು ಇನ್ನೂ ಮಿಡಿಯಾಗಿವೆ

ದುರುಳರ ಕಾಮನೆಗಳ ಹಾಯಿದೋಣಿ ಮರುಳಾಗಿ ತೇಲುತಿರಲು
ಅನ್ಯಾಯವೆನಬೇಡ ಮುಳುಗಿಸುವ ಅಲೆಗಳು ಇನ್ನೂ ಮಿಡಿಯಾಗಿವೆ

ಮದಿರೆಯ ಅಮಲಿಗಿಂತ ಧರ್ಮದ ಅಮಲು ರುಚಿಯಾಗಿಹುದು ಸಾಕಿ
ತಿಳಿಯದೆ ಇರಬೇಡ ನಿನಗೆ ತಿಳಿಸುವ ಜಿಹ್ವೆಗಳು ಇನ್ನೂ ಮಿಡಿಯಾಗಿವೆ.

ಗಾಳಿಯ ಗೊಂಬೆಗಳ ಲೋಕದಲ್ಲಿ  ಚುಚ್ಚುವ ಸೂಜಿಗೇನು ಕಾಯಕ  
ಮುರಿದೆಸೆದುಬಿಡು 'ಆನಂದ' ‌ಎಲ್ಲರ ಬಾಳುಗಳು ಇನ್ನೂ ಮಿಡಿಯಾಗಿವೆ

ಈ ಗಜಲ್ ನ್ನೂ ಓದಿ

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...