Skip to main content

ಗಜಲ್ @ ಆನಂದ ಮಾಲಗಿತ್ತಿಮಠ


ಗಜಲ್ 2
*********
ನನ್ನ ಮನೆಯ ಹಿತ್ತಲದ ಹೂವು ತತ್ತರಿಸಿ ಹೋಯಿತು ದೊರೆ
ಕತ್ತಲಲ್ಲಿ ಕರಾಮತ್ತು ನಡೆದು ಕತ್ತೆತ್ತಿ ತಿರುಗದಂತಾಯಿತು ದೊರೆ

ಜೀವ ಬತ್ತಿದಾಗ ಮೇಣದ ಬತ್ತಿ ಹಿಡಿದು ಸಾಂತ್ವನವ ನುಡಿದು
ಮಾರು ದೂರು ನಡೆದ ಸಮಾಜ ನಿದ್ದೆಹೋಯಿತು ದೊರೆ

ಅಳುವವರ ಕಣ್ಣೀರು ಬತ್ತಿದರೂ‌ ಆಳುವವರು ಕಣ್ತೆರೆಯಲಿಲ್ಲ
ಕಾಮದ ಮುಷ್ಠಿಯಲಿ ಕೌಮಾರ್ಯ ಕಮರಿ ಹೋಯಿತು ದೊರೆ


ನಡು ಬಜಾರಿನಲ್ಲಿ ಬಡ ಹೆಣ್ಣು ಮಗಳ ಶೀಲ ಬಿಕರಿಯಾಯಿತಂದು
ರೂಪಾಯಿಗೊಂದರಂತೆ ಅವಳ ಮಾನ ಖಾಲಿಯಾಯಿತು ದೊರೆ

ಭಾವಚಿತ್ರ ಸೇರಿದ ಅವಳೆದುರಿಗೆ ದೀಪ ಇನ್ನೂ ತಣ್ಣಗುರಿಯುತಿದೆ
ಬಡಬಾಗ್ನಿಯಾದರೆ ಈ ಜಗದ 'ಆನಂದ'ವೇ ನಂದಿ ಹೋದಿತು ದೊರೆ

ಇವುಗಳನ್ನೂ ಓದಿ

Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...