Skip to main content

ಪ್ರಚಲಿತ ಘಟನೆಗಳು

ಸಿಂಗ್ -  ಸ್ವೀಟ್ ತುಗೊ ಸ್ವೀಟ್
ಕಿಂಗ್ - ಸ್ವೀಟ ಯಾಕಪಾ?
ಸಿಂಗ್ - ಏಷ್ಯನ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ನಮ್ಮ ದೇಶದ ಪುರುಷ ಮತ್ತು ಮಹಿಳಾ ತಂಡ ಚಾಂಪಿಯನ್ ಆಗೈತಿ
ಕಿಂಗ್ - ಮತ್ತ ನಾವು ಕಬಡ್ಡಿ ಆಡಾಕ ಮುಂದ .ಬರತಿಯೆನ ಒಂದ ಕೈ ನೋಡೆ ಬಿಡುಣು
ಸಿಂಗ್ - ಏ ಮಾವ ಬ್ಯಾಡ ಬಿಡೊಪಾ ನಿನ್ನ ಜೊತೆ ಏನ ಆಡುದು
ಕಿಂಗ್  - ವಿಮಾನ ನೋಡಲ್ಲಿ ಹೆಂಗ ಭೌಂವ ಅಂತ ಹೊಂಟೈತಿ
ಸಿಂಗ್ - ಸುದ್ಧಿ ಕೇಳಿದಿಯಿಲೊ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ೨೨ ತಾಸುಗಳಲ್ಲಿ ಒಂದೇ ರನ್ ವೇ ಬಳಸಿಕೊಂಡು ೯೬೯ ವಿಮಾನಗಳ ಸಚಾರ ನಿರ್ವಹಣೆ ಮಾಡಿ ದಾಖಲೆ ಬರದೈತಿ
ಕಿಂಗ್ - ಭಪ್ಪರೆ ಮಗನ ಮಸ್ತ ಆತ ಬಿಡು.
ಸಿಂಗ್ - ಒಂದ ಮಸ್ತ ಸುದ್ಧಿ ಕೇಳಿಲ್ಲಿ
ಕಿಂಗ್- ಏನಪಾ
ಸಿಂಗ್- ೨೦೧೭ ರ ನೊಬೆಲ್ ಶಾಂತಿ ಪುರಸ್ಕಾರವನ್ನು ಐಕ್ಯಾನ ಸಂಸ್ಥೆ ಗೆ ನೀಡಲಾಗಿದೆ.
ಕಿಂಗ್- ಹಾಲಿನ ಕ್ಯಾನ ಗೊತ್ತ. ಐಕ್ಯಾನ ಇದಾವ ಸಂಸ್ಥೆ?
ಸಿಂಗ್ - ಮಳ್ಳ  ಹಳೆ ಮಳ್ಳ  ಇದು ವಿಶ್ವವನ್ನು ಅಣ್ವಸ್ತ್ರ ಮುಕ್ತ ವಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅಣ್ವಸ್ತ್ರ ವಿರೋಧಿ ಅಂತರಾಷ್ಟ್ರೀಯ ಆಂದೋಲನ ಸಂಘಟನೆ.
ಕಿಂಗ್- ಹಂಗನ ಮತ್ತ ಐಕ್ಯಾನದ ವಿಸ್ತೃತ ರೂಪವೇನು?
ಸಿಂಗ್- international campaign to abolish nuclear weopons.ಈ ಸಂಸ್ಥೆ ಜಿನೆವಾ ಮೂಲದ್ದಾಗಿದೆ.
ಕಿಂಗ್- ಮತ್ತ ಅರ್ಥಶಾಸ್ತ್ರದ ನೊಬೆಲ್ ಯಾರಿಗೆ ಬಂತಪಾ?
ಸಿಂಗ್- ಅದು ಡಾ.ರಿಚರ್ಡ ಎಚ್ ಥಾಲೇರ್ ರವರೆಗೆ ದೊರೆತಿದೆ.ಇವರು ಜಾಗತಿಕವಾಗಿ ಅತಿ ಹೆಚ್ಚು ಮಾರಾಟಗೊಂಡ ದಿ ನ್ಯೂಡ್ಜ್ ಎಂಬ ಪುಸ್ತಕದ ಲೇಖಕರಾಗಿದ್ದಾರೆ.ಇವರ ವರ್ತನಾ ಅರ್ಥಶಾಸ್ತ್ರ  ಸಿದ್ದಾಂತಕ್ಕೆ ಈ ಪ್ರಶಸ್ತಿ ನೀಡಲಾಗಿದೆ.
ಕಿಂಗ್ - ಅದೆ ರೀತಿ ಕಲ್ಯಾಣ ಅರ್ಥಶಾಸ್ತ್ರ ಎಂಬ ಪದವನ್ನು ಎಲ್ಲಿಯೂ ಕೇಳಿದಂಗ ಅನಸಾತೈತಿ
ಸಿಂಗ್-ಸರಿಯಾಗಿ ನೆಂಪ ಮಾಡ್ಕೊಂಡಿ ನೋಡ.ಅದು ಭಾರತದ ಅರ್ಥಶಾಸ್ತ್ರ ಜ್ಞ. ಅಮರ್ತ್ಯಸೇನ ರ ಪರಿಕಲ್ಪನೆ ಯಾಗಿದೆ.ಇದಕ್ಕಾಗಿಯೆ ೧೯೯೮ರಲ್ಲಿ ಇವರಿಗೆ ನೊಬೆಲ್ ಬಂದಿತ್ತು.
ಕಿಂಗ್ - ಮೊದಮೊದಲು ಅರ್ಥಶಾಸ್ತ್ರ ಕ ನೊಬೆಲ್ ಕೊಡ್ತಿರಲಿಲ್ಲ. ಯಾವಾಗಿಂದ ಕೊಡಾಕತಾರ?
ಸಿಂಗ್-ಇದನ್ನ ೧೯೬೯ರಿಂದ ಕೊಡಾಕತಾರು
ಕಿಂಗ್ - ಒಳ್ಳೆಯ ವಿಚಾರ ತಿಳಿಸಿದಿ
ಸಿಂಗ್- ಯಾವರ ಹೊಸಾ ಚಲನಚಿತ್ರ ಬಂದಾವನ?
ಕಿಂಗ್-ಈಗಿನ ಚಲನಚಿತ್ರ ಎಂತಾವ ಬಿಡೊ ಮಾರಾಯಾ.ಜಾಹೀರಾತಿನಂಗ ತುಂಡ ತುಂಡ ಕಥಿ ಇರ್ತಾವು.
ಸಿಂಗ್ - ಅನುಪಮಖೇರ್ ಹೆಸರ ಕೇಳಿದಿಯಿಲೊ?
ಕಿಂಗ್ - ಕೇಳಿದೇನ ಯಾಕ ಏನಾತ?
ಸಿಂಗ್- ಅವರು ಭಾರತದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಅಧ್ಯಕ್ಷ ರಾಗಿದಾರ
ಕಿಂಗ್-ಮಸ್ತ ಆತಲಾ
ಸಿಂಗ್ - ಟೈಮ್ ಎಷ್ಟ ಆತ?
ಕಿಂಗ್ - ವಾಚ ಬಿಟ್ಟ ಬಂದೇನ
ಸಿಂಗ್- ವಾಚ್ ಅಂದಕೂಡಲೆ ನೆಂಪ ಆತ ನೋಡ.ಭಾರತೀಯ ವಾಯುದಳವು ಮೆಡ್ ವಾಚ್ ಎಂಬ ಮೊಬೈಲ್ ಆ್ಯಪ ಗೆ ಚಾಲನೆ ನೀಡಿದೆ.ಇದರಿಂದ ವಾಯುದಳ ದ ಎಲ್ಲ ಸಿಬ್ಬಂದಿ ಗೆ  ಆರೋಗ್ಯದ ಬಗ್ಗೆ ಮಾಹಿತಿ ಸಿಗಲಿದೆ.
ಕಿಂಗ್- ನಮಗು ಅಂತಾದ್ದ ಒಂದ ಆ್ಯಪ ಇದ್ದರ ಚೆನ್ನಾಗಿತ್ತ ನೋಡ
ಸಿಂಗ್ - ಮಾರಾಯಾ ಭಾಳ ಹೊಟ್ಟಿ ಹಸ್ಯಾಕತೈತಿ ಗಿರಮಿಟ್ ತಿನಸ ನಡಿ
ಕಿಂಗ್ - ಜಾಗತೀಕ ಹಸಿವಿನ ಸೂಚ್ಯಂಕ ದಲ್ಲಿ ಭಾರತ ೧೦೦ ನೇ ಸ್ಥಾನ ಪಡಕೊಂಡೈತಿ
ಸಿಂಗ್ - ನಮ್ಮ ರೈತರೆಲ್ಲಾ ಮಳಿಬೆಳಿ ಇಲ್ಲದ ಸಾಲ ಮಾಡಿ ಕಂಗಾಲ ಆಗಿ ಉರಲ ಹಾಕೋತಿದ್ದರ ಇನ್ನೇನಾಕ್ಕೈತಿ
ಕಿಂಗ್- ಬೀಜಮಾತ ಹೇಳಿದಿ ನೋಡ. ನಡಿ ಗಿರಮಿಟ್ ತಿಂದ ಮಿರ್ಚಿ ಭಜ್ಜಿ ಹೊಡೆಯೋಣು.ನಮ್ಮ ನಮ್ಮ ನಮಸ್ಕಾರ್.

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ