Skip to main content

ರಾಜ್ಯಪಾಲರು ಮತ್ತು ಅಧಿಕಾರಗಳು

ರಾಜ್ಯಪಾಲರು ಹೊರಡಿಸುವ ಸುಗ್ರಿವಾಜ್ಞೆಯ ಅತಿ ಹೆಚ್ಚು ಕಾಲಾವಧಿ- ೬ ತಿಂಗಳು
ರಾಜ್ಯದ ರಾಜಪಾಲರು - ರಾಜ್ಯದ ಮುಖ್ಯಸ್ಥರು
ಜಮ್ಮು ಕಾಶ್ಮೀರಕ್ಕೆ ವಿಶೇಷ ಉಪಬಂಧಗಳನ್ನು ಕೊಟ್ಟಿರುವ ಅನುಬಂಧ ೩೭೦ ನ್ನು  ಸಂವಿಧಾನದ ಈ ಭಾಗದಲ್ಲಿ ಸೇರಿಸಲಾಗಿದೆ - xxi
ರಾಜ್ಯಗಳಲ್ಲಿ ರಾಜ್ಯಪಾಲರ ಪದವಿಗಾಗಿ ಉಪಬಂಧ ಮಾಡಿದ ಅನುಚ್ಛೇದ - ೧೫೩
ರಾಜ್ಯದ ಮುಖ್ಯ ಕಾರ್ಯ ನಿರ್ವಾಹಕರು - ರಾಜ್ಯಪಾಲರು
ರಾಜ್ಯಪಾಲರನ್ನು ನೇಮಕ ಮಾಡುವವರು - ರಾಷ್ಟ್ರಪತಿಗಳು
ರಾಜ್ಯಪಾಲರು ರಾಜೀನಾಮೆ ಪತ್ರವನ್ನು ನೀಡುವುದು - ರಾಷ್ಟ್ರಪತಿಗಳಿಗೆ
ರಾಜ್ಯಪಾಲರಾಗಲು ಬೇಕಾದ ವಯೋಮಿತಿ -೩೫ ವರ್ಷ
ರಾಜ್ಯಪಾಲರು ತನ್ನ ಅಧಿಕಾರ ಮತ್ತು ಗೌಪ್ಯತೆ ಯ ಪ್ರಮಾಣ ವಚನವನ್ನು ಇವರ ಮುಂದೆ ಸ್ವೀಕರಿಸುವರು - ಉಚ್ಛನ್ಯಾಯಾಲಯದ ಮುಖ್ಯ  ನ್ಯಾಯಾಧೀಶರು
ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲವನ್ನು ನೇಮಕ ಮಾಡುವವರು - ರಾಜ್ಯಪಾಲರು
ರಾಜ್ಯದ ಅಡ್ವೋಕೇಟ್ ಜನರಲ್ ರನ್ನು  ನೇಮಕ ಮಾಡುವವರು - ರಾಜ್ಯಪಾಲರು
ರಾಜ್ಯ  ಚುನಾವಣಾ ಆಯುಕ್ತರನ್ನು ನೇಮಕ ಮಾಡಿ ಅವರ ಸೇವಾ ಷರತ್ತು ಅವಧಿಗಳನ್ನು ನಿರ್ಧರಿಸುವರು - ರಾಜ್ಯಪಾಲರು
ಅಡ್ವೋಕೇಟ್ ಜನರಲ್ ಆಯ್ಕೆಗೆ ಬೇಕಾದ ಅರ್ಹತೆ - ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಲು ಇರುವ ಅರ್ಹತೆ
ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವವರು - ರಾಜ್ಯಪಾಲರು
ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ವಜಾ ಮಾಡುವವರು - ರಾಷ್ಟ್ರಪತಿಗಳು
ವಿಧಾನಮಂಡಲ ಅಧಿವೇಶನವನ್ನು ಕರೆಯುವ,ಮುಕ್ತಾಯಗೊಳಿಸುವ ಮತ್ತು ರಾಜ್ಯ ವಿಧಾನಸಭೆಯನ್ನು  ವಿಸರ್ಜಿಸುವ ಅಧಿಕಾರವಿರುವುದು - ರಾಜ್ಯಪಾಲರಿಗೆ

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ