Skip to main content

ಭೌಗೋಳಿಕ ಅನ್ವೇಷಕರು

ಭೌಗೋಳಿಕ ಅನ್ವೇಷಕರು



ಮಾರ್ಕೊಪೊಲೋ
ಜನನ - ಕ್ರಿ.ಶ.೧೨೫೪
ದೇಶ - ವೆನಿಷಿಯಾ,ಇಟಲಿ
ವೃತ್ತಿ - ಮುತ್ತು ರತ್ನ  ವ್ಯಾಪಾರಿ
ಪ್ರಮುಖ ಕೃತಿ- ಮಾರ್ಕೊಪೊಲೋ ದಿ ವೆನಿಸ್
ಮರಣ - ಕ್ರಿ.ಶ. ೧೩೨೪
ಮಾರ್ಕೊಪೋಲೊ ಮುತ್ತು ರತ್ನಗಳ ವ್ಯಾಪಾರಕ್ಕೆಂದು ಚೀನಾಕೆ ಹೋದನು. ಅಲ್ಲಿನ ದೊರೆ ಕುಬ್ಲಾಯ್ ಖಾನನ ಆಸ್ಥಾನದಲ್ಲಿ ಸೇವೆಗೆ ಸೇರಿಕೊಂಡನು.ನಂತರ ಜಪಾನ ಹಾಗೂ ಭಾರತಕೆ ಭೇಟಿ ನೀಡಿ ಅಪಾರ ಸಂಪತ್ತಿನೊಂದಿಗೆ ತಾಯ್ನಾಡಿಗೆ ತೆರಳಿದ.ತನ್ನ ಅನುಭವಗಳನ್ನು ಮಾರ್ಕೊಪೊಲೊ ದಿ ವೆನಿಸ್ ಎಂಬ ಗ್ರಂಥದಲ್ಲಿ ದಾಖಲಿಸಿದನು.ಈ ಅನುಭವಗಳೆ ಮುಂದಿನ ಸಮುದ್ರಯಾನಿಗಳಿಗೆ ಸ್ಪೂರ್ತಿ ನೀಡಿದವು.
****************************************


ಹೇನ್ರಿ ನ್ಯಾವಿಗೇಟರ್



ಹೇನ್ರಿ ನ್ಯಾವಿಗೇಟರ್
ಜನನ- ಕ್ರಿ.ಶ.೧೩೯೪
ಜನ್ಮಸ್ಥಳ- ಪೋರ್ಚುಗಲ್
ವೃತ್ತಿ- ರಾಜ
ಮರಣ- ಕ್ರಿ.ಶ.೧೪೬೦
ಈತ ನಾವಿಕನಲ್ಲದಿದ್ದರೂ ಲಿಸ್ಟನ್ ನಲ್ಲಿ ನಾವಿಕ ತರಬೇತಿ ಶಾಲೆಯನ್ನು ತೆರೆದನು.ಅಲ್ಲಿಗೆ ನಕ್ಷೆ ತಯಾರಕರು,ಭೌಗೊಳಿಕ ತಜ್ಞರು,ನಾವಿಕರನ್ನು ಆಹ್ವಾನಿಸಿದನು.ಆಫ್ರಿಕ ಬಳಸಿ ಪೂರ್ವಕ್ಕೆ ಹೋದಲ್ಲಿ ಭಾರತ ಮತ್ತು ಚೀನಾ ಗಳಿಗೆ ಭೇಟಿ ನೀಡಬಹುದು ಎಂದು ನಂಬಿದ್ದನು.ಅದಕ್ಕಾಗಿಯೆ ಕ್ಯಾರವಲ್ ಎಂಬ ಬಲಿಷ್ಠ ಹಡಗು ನಿರ್ಮಿಸಿ ಅದರಲ್ಲಿ ವರ್ತಕರು.ಯೋಧರು,ಧರ್ಮಪ್ರಚಾಕರನ್ನು ಕಳುಹಿಸಿದ.ಅವರು ಪಶ್ಚಿಮ ಆಫ್ರಿಕಾದ ಗಿನಿಯಾ ತೀರ,ಮೆಡಿರಾ ಮತ್ತು ಅಜೊರೆಸ್ ದ್ವೀಪಗಳನ್ನು ಶೋಧಿಸಿದರು.ಮತ್ತೊಂದು ಶಿಷ್ಯರ ತಂಡ ಕೇಫ ಆಫ ಗುಡ್ ಹೋಪ್ ಸಂಶೋಧಿಸಿತು.
***************************

ವಾಸ್ಕೋಡಿಗಾಮ

                                                             
ಜನನ- ಕ್ರಿ.ಶ.೧೪೬೯
ಜನ್ಮಸ್ಥಳ- ಲಿಸ್ಟನ್
ವೃತ್ತಿ- ನಾವಿಕ
ಮರಣ- ಕ್ರಿ.ಶ.೧೫೨೫
ಭಾರತವನ್ನು ಸಂಶೋಧಿಸಬೇಕೆಂದು ಹಂಬಲದಿಂದ ನಾಲ್ಕು ಹಡಗುಗಳೊಂದಿಗೆ ಪೊರ್ಚುಗಲ್ ನಿಂದ ಪ್ರಯಾಣ ಬೆಳೆಸಿದನು.ವಾಸ್ಕೊಡಿಗಾಮ ಆಫ್ರಿಕಾದ ಪಶ್ಚಿಮ ಕರಾವಳಿ ಯಲ್ಲಿ ಸಂಚರಿಸಿ ಕೇಫ ಆಫ ಗುಡ್ ಹೋಪ್ ತಲುಪಿದ.ಅಲ್ಲಿಂದ ಮುಂದೆ ಜಾಂಜೀಬಾರ್ ಮೂಲಕ ಹಾಯ್ದು ೧೪೯೮ ನೆ ಮೇ ೧೭ ರಂದು ಭಾರತವನ್ನು ಸಂಶೋಧಿಸಿದನು.
************************

ಕೆಬ್ರಾಲ್


ಕೆಬ್ರಾಲ್
ಜನನ - ಕ್ರಿ.ಶ.೧೪೬೭
ಜನ್ಮಸ್ಥಳ - ಪೋರ್ಚುಗಲ್
ವೃತ್ತಿ - ಸಮುದ್ರಯಾನಿ ಮತ್ತು ಅನ್ವೇಷಕ
ಮರಣ- ಕ್ರಿ.ಶ.೧೫೨೦
ಈತನು ದಕ್ಷಿಣ ಅಮೇರಿಕವನ್ನು ಕ್ರಿ.ಶ.೧೫೦೦ ರಲ್ಲಿ ಶೋಧಿಸಿದನು.ಈತ ಬ್ರೆಜಿಲ್ ನ್ನು ಪೋರ್ಚುಗೀಸರಿಗೆ ಸೇರಿದ ದೇಶವೆಂದು ಘೋಷಿಸಿದನು.ಈತನು ಭೌತಶಾಸ್ತ್ರ, ರೇಖಾಗಣಿತ,ಗಣಿತ,ಕಾರ್ಟೊಗ್ರಾಫಿ ಮತ್ತು ಅಸ್ಟ್ರೋನಾಮಿ ಬಲ್ಲವನಾಗಿದ್ದನು.ಎಪ್ರೀಲ್ ೨೩ ಕ್ರಿ.ಶ.೧೫೦೦ ರಂದು ಬ್ರೆಜಿಲ್ ಕಡಲ ತೀರದಲ್ಲಿ ಬಂದಿಳಿದನು.
*******************

ಕ್ರಿಸ್ಟೋಫರ್ ಕೋಲಂಬಸ್




ಕ್ರಿಸ್ಟೋಫರ್ ಕೋಲಂಬಸ್
ಜನನ- ಕ್ರಿ.ಶ.೧೪೪೬
ಜನ್ಮಸ್ಥಳ - ಜಿನೀವಾ ಇಟಲಿ
ವೃತ್ತಿ - ಅನ್ವೇಷಕ
ಮರಣ- ಕ್ರಿ.ಶ.೧೫೦೬
ಭಾರತಕ್ಕೆ ಹೊಸ ಮಾರ್ಗವನ್ನು ಕಂಡುಹಿಡಿಯಬೇಕೆಂಬ ಹಂಬಲದಿಂದ ತನ್ನ ಸಹಚರರೊಂದಿಗೆ ೧೪೯೨ ನೆ ಅಗಷ್ಟ ೨೩ ರಂದು ಅಟ್ಲಾಂಟಿಕ್ ಸಾಗರದ ಪಶ್ಚಿಮಾಭಿಮುಖವಾಗಿ ಪ್ರಯಾಣ ಬೆಳೆಸಿದ.ಆದರೆ ಈತ ತಲುಪಿದ್ದು ವೆಸ್ಟ ಇಂಡೀಸ್ ದ್ವೀಪಗಳನ್ನು ನಂತರ ಅಮೆರಿಕ, ಕೆರೆಬಿಯನ್ ದ್ವೀಪಗಳು,ವೆನೆಜುವೆಲಾ, ಜಮೈಕಾ,ಟ್ರಿನಿಡಾಡ್, ನಿಕರಾಗುವಾ,ಕೊಸ್ಟರಿಕಾ,ಹೊಂಡುರಾಸ್,ಕ್ಯುಬಾ ಮತ್ತು ಹೈಟಿ ದ್ವೀಪಗಳನ್ನು ಶೋಧಿಸಿದ.
********

ಬಲ್ ಬೋವಾ



ಬಲ್ ಬೋವಾ
ಜನನ- ಕ್ರಿ.ಶ.೧೪೭೫
ಜನ್ಮಸ್ಥಳ- ಬಡಾಜೋಝ ಸ್ಪೇನ್
ವೃತ್ತಿ - ಸಮುದ್ರಯಾನಿ
ಮರಣ- ಕ್ರಿ.ಶ.೧೫೧೯
ಈತ ಒಬ್ಬ ಸೈನಿಕ ಮತ್ತು ನಾವಿಕ.ಈತ ಪನಾಮಾದ ಇಸ್ತಮಸ್ ನ್ನು  ತಲುಪಿ ಮುಂದೆ ಸಾಗಿ ೧೫೧೩ ರಲ್ಲಿ ಪೆಸಿಫಿಕ್ ಸಾಗರವನ್ನು ಶೋಧಿಸಿದನು.ಫೆಸಿಫಿಕ್ ತಲುಪಿದ ಪ್ರಥಮ ಯುರೋಪಿಯನ್ ಎಂಬ ಕೀರ್ತಿ ಪಡೆದನು.ಈತ ಕ್ರಿ.ಶ.೧೫೦೦ ರಲ್ಲಿ ಹೊಸ ವಿಶ್ವದೆಡೆಗೆ ಪಯಣಿಸಿದ.ಸಾಂತಾ ಮರಿಯಾ ಲಾ ಆಂಟಿಗು ವಾ ಡಲ್ ಡೆರಿಯನ್ ವಸಾಹತನ್ನು ೧೫೧೦ ರಲ್ಲಿ ಅನ್ವೇಷಿಸಿದ.ಅಮೆರಿಕದ ನೆಲದಲ್ಲಿ ವಸಾಹತನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ ಎಂಬ ಖ್ಯಾತಿ ಪಡೆದ.
*********

ಅಮೆರಿಗೊ ವೆಸ್ಪುಸಿ



ಅಮೆರಿಗೊ ವೆಸ್ಪುಸಿ
ಜನನ- ಕ್ರಿ.ಶ.೧೪೫೧
ಜನ್ಮಸ್ಥಳ- ಫ್ಲಾರೆನ್ಸ ಇಟಲಿ
ವೃತ್ತಿ  - ಅನ್ವೇಷಕ
ಮರಣ - ಕ್ರಿ.ಶ.೧೫೧೨
ಈತ ಇಟಲಿಯ ಫ್ಲಾರೆನ್ಸ್ ನಗರದವನು.ಈತ ಕೊಲಂಬಸ್ ಕಂಡು ಹಿಡಿದ ಹೊಸ ನಾಡನ್ನು ಅಮೆರಿಕ ಎಂದು ಕರೆದನು.ಈತ ದಕ್ಷಿಣ ಅಮೆರಿಕದ ಪೂರ್ವ ಕರಾವಳಿ, ಓರಿನೋಕೊ ನದಿ,ಪ್ಲೇಟ್ ನದಿ ಮತ್ತು ಮೊರಾಕಿಬೋ ಸರೋವರದವರೆಗಿನ ಪ್ರದೇಶಗಳನ್ನು ಸಂಶೋಧಿಸಿದನು.ಅಮೆರಿಕದ ಭೂಗೋಳವನ್ನು ಪೂರ್ಣವಾಗಿ ಪರಿಚಯಿಸಿದ್ದರಿಂದ ಅದನ್ನು ಇವನ ಹೆಸರಿನ ಮೇಲೆ ಅಮೆರಿಕ ಎಂದು ಕರೆಯಲಾಯಿತು.
**********

ಫರ್ಡಿನೆಂಡ್ ಮೆಗಲನ್





ಫರ್ಡಿನೆಂಡ್ ಮೆಗಲನ್
ಜನನ - ಕ್ರಿ.ಶ.೧೪೮೦
ಜನ್ಮಸ್ಥಳ - ಪೋರ್ಚುಗಲ್
ವೃತ್ತಿ - ಅನ್ವೇಷಣೆ
ಮರಣ - ಕ್ರಿ.ಶ. ೧೫೨೧
ಈತ ಸ್ಪೇನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ.ಅಲ್ಲಿನ ರಾಜವಂಶದ ಚಾರ್ಲ್ಸನ ಸಹಾಯದೊಂದಿಗೆ ಹೊಸ ಅನ್ವೇಷಣೆಯಲ್ಲಿ ತೊಡಗಿದ. ಕ್ಯಾಡಿಜ್ ನಿಂದ ಪ್ರಯಾಣ ಹೊರಟ ಈತ ಅಟ್ಲಾಂಟಿಕ್ ಸಾಗರದ ಮೂಲಕ ದಕ್ಷಿಣ ಅಮೇರಿಕದ ಪೂರ್ವ ಕರಾವಳಿ ದಾಟಿ ಶಾಂತಸಾಗರ ತಲುಪಿದ.ಅಲ್ಲಿಂದ ಫಿಲಿಫೈನ್ಸ  ದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಮೂಲನಿವಾಸಿಗಳಿಂದ ಹತನಾದ.ಬದುಕುಳಿದ ಇತನ ೧೮ ಸಹಚರರು ಈಸ್ಟ ಇಂಡೀಸ್ ,ಇಂಡೋನೇಷ್ಯಾ. ಬೋರ್ನಿಯಾ,ಹಿಂದೂ ಮಹಾಸಾಗರ,ಕೇಫ ಆಫ ಗುಡ್ ಹೋಪ್ ಭೂಶಿರ ದಾಟಿ ಪುನಃ ಸ್ಪೇನ್ ತಲುಪಿದರು.ಕಾರಣ ವಿಶ್ವವನ್ನು ಮೊದಲ ಬಾರಿಗೆ ಪ್ರದಕ್ಷಿಣೆ ಹಾಕಿದ ಕೀರ್ತಿ ಪಡೆಯುವ ಜೊತೆಗೆ ಭೂಮಿ ಗೋಳವಾಗಿದೆ ಎಂಬುವುದನ್ನು ಮನವರಿಕೆ ಮಾಡಿಕೊಟ್ಟರು



ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ