Skip to main content

ಸಮಾಸ ಪ್ರಕರಣ

ತತ್ಪುರುಷ ಸಮಾಸ

ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ ಅದು ತತ್ಪುರುಷ ಸಮಾಸ
ಉದಾ
ಮಳೆಯ +ಕಾಲ -ಮಳೆಗಾಲ
ತಲೆಯಲ್ಲಿ +ನೋವು -ತಲೆನೋವು
ಮಲ್ಲಿಗೆಯ +ಹೂವು -ಮಲ್ಲಿಗೆ ಹೂವು
ಮನೆಯ +ಕೆಲಸ -ಮನೆಗೆಲಸ
ಅರಸನ +ಮನೆ -ಅರಮನೆ
Samanya Kannada Adhyayana Kaipidi - Useful For PDO, TET, SDA, FDA, KPSC Group C, Morarji Desayi, Abakari Police And All Other Technical And Non Technical Exams *************

ಕರ್ಮಧಾರೆಯ ಸಮಾಸ

ಪೂರ್ವೊತ್ತರ ಪದಗಳು ವಿಶೇಷಣ ಮತ್ತು ವಿಶೇಷ್ಯ  ಸಂಬಂಧದಿಂದ ಕೂಡಿ ಆಗುವ ಸಮಾಸವೆ ಕರ್ಮಧಾರೆಯ ಸಮಾಸ
ಉದಾ
ಹಿರಿದು +ಮರ- ಹೆಮ್ಮರ
ಕೆಂಪಾದ+ ತಾವರೆ- ಕೆಂದಾವರೆ
ಮೆಲ್ಲಿತು +ನುಡಿ -ಮೆಲ್ನುಡಿ
***********

ಅಂಶಿ ಸಮಾಸ

ಪೂರ್ವೋತ್ತರ ಪದಗಳು ಅಂಶಿ ಅಂಶ ಭಾವದಿಂದ ಸೇರಿ ಸಮಾಸವಾದರೆ ಅದುವೆ ಅಂಶಿ ಸಮಾಸ
ಉದಾ
ಕೈಯ +ಅಡಿ- ಅಂಗೈ
ತಲೆಯ+ ಮುಂದು -ಮುಂದಲೆ
ಕೆಲಗಿನ +ತುಟಿ -ಕೆಳದುಟಿ
ಕಾಲಿನ +ಮುಂದು -ಮುಂಗಾಲು
*****************

ದ್ವಂದ್ವ ಸಮಾಸ

ಎರಡು ಅಥವಾ ಎರಡಕ್ಕಿಂತಲೂ ಹೆಚ್ಚು  ನಪದಗಳು ಸೇರಿ ಸಮಾಸವಾಗುವಾಗ ಎಲ್ಲ ಪದಗಳ ಅರ್ಥವೂ ಪ್ರಧಾನವಾಗಿದ್ದರೆ ಅದು ದ್ವಂದ್ವ ಸಮಾಸ
ಉದಾ
ರಾಮನು+ ಲಕ್ಷ್ಮಣನು -ರಾಮಲಕ್ಷ್ಮಣರು
ಕೃಷ್ಣನು +ಅರ್ಜುನನು -ಕೃಷ್ಣಾರ್ಜುನರು
ಗಿಡಗಳು +ಮರಗಳು +ಬಳ್ಳಿಗಳು -ಗಿಡಮರಬಳ್ಳಿಗಳು

******************

ಬಹುವ್ರಿಹಿ ಸಮಾಸ

ಸಮಾಸವಾಗುವಾಗ ಪೂರ್ವೋತ್ತರ ಪದಗಳು ಪ್ರಧಾನವಾಗದೆ ಬೇರೊಂದು ಪದ ಪ್ರಧಾನವಾದರೆ ಅಂತಹ ಸಮಾಸಗಳಿಗೆ ಬಹುವ್ರಿಹಿ ಸಮಾಸ ಎಂದು ಕರೆಯುತ್ತಾರೆ
ಉದಾ
ಮೂರು+ ಕಣ್ಣುಳ್ಳವನು -ಮುಕ್ಕಣ್ಣ
ಹಣೆಯಲ್ಲಿ +ಕಣ್ಣುಳ್ಳವನು- ಹಣೆಗಣ್ಣ
ಚಕ್ರವನ್ನು +ಹಿಡಿದಿರುವನು- ಚಕ್ರಪಾಣಿ
ಚಂದ್ರನಂತೆ +ಮುಖವುಳ್ಳವನು- ಚಂದ್ರಮುಖಿ
*********************

ಕ್ರಿಯಾ ಸಮಾಸ

ಸಮಾಸದಲ್ಲಿ ಪೂರ್ವಪದವು ನಾಮಪದವಾಗಿದ್ದು ಉತ್ತರ ಪದವು ಕ್ರಿಯಾಪದವಾಗಿದ್ದರೆ ಅದು ಕ್ರಿಯಾ ಸಮಾಸ
ಉದಾ
ಕೈಯನ್ನು +ತೊಳೆ -ಕೈತೊಳೆ
ಮರವನ್ನು+ ಹತ್ತು- ಮರಹತ್ತು
ಕಳೆಯನ್ನು +ಕೀಳು -ಕಳೆಕೀಳು
ಊಟವನ್ನು +ಮಾಡು- ಊಟಮಾಡು
ತಲೆಯನ್ನು +ಬಾಚು -ತಲೆಬಾಚು
ಕಾಲನ್ನು +ಎಳೆ -ಕಾಲೆಳೆ
*******************

ಗಮಕ ಸಮಾಸ

ಪೂರ್ವ ಪದವು ಸರ್ವನಾಮ ಕೃದಾಂತಗಳಲ್ಲಿ ಒಂದಾಗಿದ್ದು ಉತ್ತರ ಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೆ ಗಮಕ ಸಮಾಸ
ಉದಾ
ಅವನು +ಹುಡುಗ- ಆ ಹುಡುಗ
ಇದು +ಕಲ್ಲು -ಈ ಕಲ್ಲು
ಕಡೆಯುವುದು +ಕೋಲು -ಕಡೆಗೋಲು
ಮಾಡಿದುದು +ಅಡುಗೆ -ಮಾಡಿದಡಿಗೆ

*******************

ದ್ವಿಗು ಸಮಾಸ

ಪೂರ್ವಪದವು  ಸಂಖ್ಯಾವಾಚಕವಾಗಿದ್ದು  ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೆ ದ್ವಿಗು ಸಮಾಸ

ಉದಾ

ಎರಡು ಮಡಿ ಇಮ್ಮಡಿ

ಒಂದು ಮಡಿ ಒಗ್ಗಟ್ಟು

ನಾಲ್ಕು ಮಡಿ ನಾಲ್ವಡಿ



Comments

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...