Skip to main content

ಸಮಾಸ ಪ್ರಕರಣ

ತತ್ಪುರುಷ ಸಮಾಸ

ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ ಅದು ತತ್ಪುರುಷ ಸಮಾಸ
ಉದಾ
ಮಳೆಯ +ಕಾಲ -ಮಳೆಗಾಲ
ತಲೆಯಲ್ಲಿ +ನೋವು -ತಲೆನೋವು
ಮಲ್ಲಿಗೆಯ +ಹೂವು -ಮಲ್ಲಿಗೆ ಹೂವು
ಮನೆಯ +ಕೆಲಸ -ಮನೆಗೆಲಸ
ಅರಸನ +ಮನೆ -ಅರಮನೆ
Samanya Kannada Adhyayana Kaipidi - Useful For PDO, TET, SDA, FDA, KPSC Group C, Morarji Desayi, Abakari Police And All Other Technical And Non Technical Exams *************

ಕರ್ಮಧಾರೆಯ ಸಮಾಸ

ಪೂರ್ವೊತ್ತರ ಪದಗಳು ವಿಶೇಷಣ ಮತ್ತು ವಿಶೇಷ್ಯ  ಸಂಬಂಧದಿಂದ ಕೂಡಿ ಆಗುವ ಸಮಾಸವೆ ಕರ್ಮಧಾರೆಯ ಸಮಾಸ
ಉದಾ
ಹಿರಿದು +ಮರ- ಹೆಮ್ಮರ
ಕೆಂಪಾದ+ ತಾವರೆ- ಕೆಂದಾವರೆ
ಮೆಲ್ಲಿತು +ನುಡಿ -ಮೆಲ್ನುಡಿ
***********

ಅಂಶಿ ಸಮಾಸ

ಪೂರ್ವೋತ್ತರ ಪದಗಳು ಅಂಶಿ ಅಂಶ ಭಾವದಿಂದ ಸೇರಿ ಸಮಾಸವಾದರೆ ಅದುವೆ ಅಂಶಿ ಸಮಾಸ
ಉದಾ
ಕೈಯ +ಅಡಿ- ಅಂಗೈ
ತಲೆಯ+ ಮುಂದು -ಮುಂದಲೆ
ಕೆಲಗಿನ +ತುಟಿ -ಕೆಳದುಟಿ
ಕಾಲಿನ +ಮುಂದು -ಮುಂಗಾಲು
*****************

ದ್ವಂದ್ವ ಸಮಾಸ

ಎರಡು ಅಥವಾ ಎರಡಕ್ಕಿಂತಲೂ ಹೆಚ್ಚು  ನಪದಗಳು ಸೇರಿ ಸಮಾಸವಾಗುವಾಗ ಎಲ್ಲ ಪದಗಳ ಅರ್ಥವೂ ಪ್ರಧಾನವಾಗಿದ್ದರೆ ಅದು ದ್ವಂದ್ವ ಸಮಾಸ
ಉದಾ
ರಾಮನು+ ಲಕ್ಷ್ಮಣನು -ರಾಮಲಕ್ಷ್ಮಣರು
ಕೃಷ್ಣನು +ಅರ್ಜುನನು -ಕೃಷ್ಣಾರ್ಜುನರು
ಗಿಡಗಳು +ಮರಗಳು +ಬಳ್ಳಿಗಳು -ಗಿಡಮರಬಳ್ಳಿಗಳು

******************

ಬಹುವ್ರಿಹಿ ಸಮಾಸ

ಸಮಾಸವಾಗುವಾಗ ಪೂರ್ವೋತ್ತರ ಪದಗಳು ಪ್ರಧಾನವಾಗದೆ ಬೇರೊಂದು ಪದ ಪ್ರಧಾನವಾದರೆ ಅಂತಹ ಸಮಾಸಗಳಿಗೆ ಬಹುವ್ರಿಹಿ ಸಮಾಸ ಎಂದು ಕರೆಯುತ್ತಾರೆ
ಉದಾ
ಮೂರು+ ಕಣ್ಣುಳ್ಳವನು -ಮುಕ್ಕಣ್ಣ
ಹಣೆಯಲ್ಲಿ +ಕಣ್ಣುಳ್ಳವನು- ಹಣೆಗಣ್ಣ
ಚಕ್ರವನ್ನು +ಹಿಡಿದಿರುವನು- ಚಕ್ರಪಾಣಿ
ಚಂದ್ರನಂತೆ +ಮುಖವುಳ್ಳವನು- ಚಂದ್ರಮುಖಿ
*********************

ಕ್ರಿಯಾ ಸಮಾಸ

ಸಮಾಸದಲ್ಲಿ ಪೂರ್ವಪದವು ನಾಮಪದವಾಗಿದ್ದು ಉತ್ತರ ಪದವು ಕ್ರಿಯಾಪದವಾಗಿದ್ದರೆ ಅದು ಕ್ರಿಯಾ ಸಮಾಸ
ಉದಾ
ಕೈಯನ್ನು +ತೊಳೆ -ಕೈತೊಳೆ
ಮರವನ್ನು+ ಹತ್ತು- ಮರಹತ್ತು
ಕಳೆಯನ್ನು +ಕೀಳು -ಕಳೆಕೀಳು
ಊಟವನ್ನು +ಮಾಡು- ಊಟಮಾಡು
ತಲೆಯನ್ನು +ಬಾಚು -ತಲೆಬಾಚು
ಕಾಲನ್ನು +ಎಳೆ -ಕಾಲೆಳೆ
*******************

ಗಮಕ ಸಮಾಸ

ಪೂರ್ವ ಪದವು ಸರ್ವನಾಮ ಕೃದಾಂತಗಳಲ್ಲಿ ಒಂದಾಗಿದ್ದು ಉತ್ತರ ಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೆ ಗಮಕ ಸಮಾಸ
ಉದಾ
ಅವನು +ಹುಡುಗ- ಆ ಹುಡುಗ
ಇದು +ಕಲ್ಲು -ಈ ಕಲ್ಲು
ಕಡೆಯುವುದು +ಕೋಲು -ಕಡೆಗೋಲು
ಮಾಡಿದುದು +ಅಡುಗೆ -ಮಾಡಿದಡಿಗೆ

*******************

ದ್ವಿಗು ಸಮಾಸ

ಪೂರ್ವಪದವು  ಸಂಖ್ಯಾವಾಚಕವಾಗಿದ್ದು  ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೆ ದ್ವಿಗು ಸಮಾಸ

ಉದಾ

ಎರಡು ಮಡಿ ಇಮ್ಮಡಿ

ಒಂದು ಮಡಿ ಒಗ್ಗಟ್ಟು

ನಾಲ್ಕು ಮಡಿ ನಾಲ್ವಡಿ



Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ