Skip to main content

ವಾಣಿಜ್ಯ ಬೆಳೆಗಳು



ಮೆಕ್ಕೆಜೋಳ

ವೈಜ್ಞಾನಿಕ ಹೆಸರು- ಜೀಯಾ ಮೇಜ್
ಕುಟುಂಬ- ಗ್ರಾಮಿನೆ/ಪೊಯೇಸಿ

ಖಾರೀಫ್ ಬೆಳೆ,ಸಮತಟ್ಟಲ್ಲದ ಪ್ರದೇಶದಲ್ಲಿ ಸಾಮಾನ್ಯ. ಹಾಗೂ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ  ಬೆಳೆಯುತ್ತದೆ.
ಮೆಕ್ಕೆಜೋಳದ ಮೂಲಸ್ಥಾನ ಅಮೇರಿಕಾ
ಕೋಲಂಬಸ್ ನಿಂದ ಯುರೋಪಗೆ  ಪರಿಚಯವಾಯಿತು.
ಬೇಸಿಗೆಯಲ್ಲಿ ೧೫ ರಿಂದ ೨೭ ಡಿಗ್ರಿ ಸೆ ಉಷ್ಣಾಂಶ
ಶರತ್ಕಾಲದಲ್ಲಿ ೮ ರಿಂದ ೧೫ ಡಿಗ್ರಿ ಸೆ ಉಷ್ಣಾಂಶ ಬೇಕು
ವಾರ್ಷಿಕ ೭೫ ರಿಂದ ೧೦೦ ಸೆ.ಮಿ ಮಳೆ ಅಗತ್ಯ
ಪ್ರಪಂಚದಲ್ಲೇ ಅತ್ಯಧಿಕ ಮೆಕ್ಕೆಜೋಳ ಉತ್ಪಾದಿಸುವ ದೇಶ ಅಮೇರಿಕಾ
ಭಾರತದಲ್ಲಿ ಮೆಕ್ಕೆಜೋಳ ಬೆಳೆಯುವ ರಾಜ್ಯಗಳು
ಉತ್ತರ ಪ್ರದೇಶ,ಬಿಹಾರ,ರಾಜಸ್ಥಾನ
ಕರ್ನಾಟಕದಲ್ಲಿ ಮೆಕ್ಕೆಜೋಳ ಬೆಳೆಯುವ ಪ್ರಮುಖ ಜಿಲ್ಲೆಗಳು ದಾವಣಗೆರೆ, ಬೆಳಗಾವಿ,ಹಾವೇರಿ

ಕಬ್ಬು

ವೈಜ್ಞಾನಿಕ ಹೆಸರು - ಸ್ಯಾಕರಮ್ ಅಫಿಸೀಯಾ
ಕುಟುಂಬ- ಗ್ರಾಮಿನೇ

ಕಬ್ಬಿನ ಉತ್ಪಾದನೆಯಲ್ಲಿ ಬ್ರೆಜಿಲ್ ಪ್ರಥಮ ಭಾರತ ದ್ವಿತೀಯ
ಏಷ್ಯಾ ಖಂಡದಲ್ಲೇ ಭಾರತ ಪ್ರಥಮ ಸ್ಥಾನ ಪಡೆದಿದ
ಹೆಚ್ಚು ಉಷ್ಣತೆ ಮತ್ತು ತೇವಾಂಶ ಅಗತ್ ೨೧ ರಿಂದ ೨೭ ಡಿಗ್ರಿ ಸೆ ಉಷ್ಣಾಂಶ,೧೦೦ ರಿಂದ ೧೫೦ ಸೆ.ಮಿ ವಾರ್ಷಿಕ ಮಳೆ ಅಗತ್ ಮೆಕ್ಕಲು ಮಣ್ಣು ಮತ್ತು ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವುದು.
ಭಾರತದಲ್ಲಿ ಅತಿ ಹೆಚ್ವು ಕಬ್ಬು ಉತ್ಪಾದಿಸುವ ರಾಜ್ಯ  - ಉತ್ತರ ಪ್ರದೇಶ
ಕರ್ನಾಟಕದಲ್ಲಿ ಕಬ್ಬಿನ ಉತ್ಪಾದನೆಯಲ್ಲಿ ಬೆಳಗಾವಿ,ಬಾಗಲಕೋಟೆ ಮತ್ತು ಮಂಡ್ಯ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ

ಚಹಾ

ವೈಜ್ಞಾನಿಕ ಹೆಸರು- ಕೆಮಲಿಯ ಸೈನಿನಿಕ್
ಕುಟುಂಬ - ಥಿಯೆಸಿಯೆ

ಇದು ಉಷ್ಣವಲಯ ಹಾಗೂ ಉಪ ಉಷ್ಣವಲಯದ ಬೆಳೆ
ವಿಶ್ವದಲ್ಲಿ ಟೀ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ದೇಶ ಚೀನಾ,ಭಾರತ ದ್ವಿತೀಯ
ಭಾರತದಲ್ಲಿ ಅಸ್ಸಾಂ ಮೊದಲ ಸ್ಥಾನದಲ್ಲಿದ್ದರೆ,ಪಶ್ಚಿಮ ಬಂಗಾಳ ದ್ವಿತೀಯ ಸ್ಥಾನ ಪಡೆದಿದೆ
ಕರ್ನಾಟಕದಲ್ಲಿ ಕೊಡಗು,ಚಿಕ್ಕಮಗಳೂರು,ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಟೀ ಬೆಳೆಯಲಾಗುತ್ತದೆ

ತಂಬಾಕು

ವೈಜ್ಞಾನಿಕ ಹೆಸರು - ನಿಕೊಟಿಯಾನ್ ಟೊಬ್ಯಾಕಂ
ಕುಟುಂಬ - ಸೋಲವೇಸಿ

ಇದರ ಮೂಲ ದಕ್ಷಿಣ ಆಫ್ರಿಕದ ಆಂಡೀಸ್ ಪರ್ವತ.
೧೭ ನೆ ಶತಮಾನದಲ್ಲಿ ಪೋರ್ಚುಗೀಸರಿಂದ ಭಾರತಕ್ಕೆ ಪರಿಚಯವಾಯಿತು
ವರ್ಜಿನಿಯಾದ ತಂಬಾಕು ವಿಶ್ವ ಪ್ರಸಿದ್ಧವಾಗಿದೆ
ವಿಶ್ವದಲ್ಲಿ ಚೀನಾ,ಬ್ರೆಜಿಲ್ ಮತ್ತು ಭಾರತ ಮುಂಚೂಣಿಯಲ್ಲಿವೆ
ಭಾರತದಲ್ಲಿ ಆಂಧ್ರಪ್ರದೇಶ,ಗುಜರಾತ ಮತ್ತು ಕರ್ನಾಟಕ ಹೊಗೆಸೊಪ್ಪಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳು
ಕರ್ನಾಟಕದಲ್ಲಿ ಹೊಗೆಸೊಪ್ಪು ಬೆಳೆಯುವ ಮುಖ್ಯ ಜಿಲ್ಲೆಗಳು ಬೆಳಗಾವಿ ,ಧಾರವಾಡ,ಹಾವೇರಿ,ಗದಗ,ಮೈಸೂರು ಮತ್ತು ಹಾಸನ

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ