Skip to main content

ಸಂಧಿ ಪ್ರಕರಣ



ಪದಕ್ಕೆ ಪದ ಬಂದು ಸೇರುವಾಗ ಅಕ್ಷರಗಳು ಲೋಪವಾಗುವುದು,ಅಕ್ಷರ ಬಂದು ಸೇರುವುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದು ಸೇರುವುದಕ್ಕೆ ಸಂಧಿಕಾರ್ಯ ಎನ್ನುವರು
ಸಂಧಿಯಾಗುವಾಗ ಅಕ್ಷರ ಲೋಪವಾದರೆ ಅದನ್ನು ಲೋಪ ಸಂಧಿ ಎನ್ನುವರು.
ಉದಾ- ಊರು+ ಅಲ್ಲಿ = ಊರಲ್ಲಿ
ಕಾಡು + ಇಗೆ = ಕಾಡಿಗೆ
ದೇವರು + ಇಂದ =>ದೇವರಿಂದ
ಸಂಧಿಯಾಗುವಾಗ ಒಂದು ಅಕ್ಷರ ಹೊಸದಾಗಿ ಬಂದರೆ ಅದನ್ನು ಆಗಮ ಸಂಧಿ ಎನ್ನುವರು
ಉದಾ-ಮೊಟ್ಟೆ+ಇಡು=ಮೊಟ್ಟೆಯಿಡು
ಯಕಾರಾಮ ಸಂಧಿ
ಆ,ಇ,ಈ,ಎ,ಏ,ಐ ಎಂಬ ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ಯ, ಕಾರವು ಆಗಮವಾದರೆ ಅದು ಯ ಕಾರಾಗಮ ಸಂಧಿ
ಉದಾ
ಕಾ+ಅದೆ= ಕಾಯದೆ
ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ
ವಕಾರಾಗಮ ಸಂಧಿ
ಉ ಋ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ವಕಾರವು ಬರುತ್ತದೆ.
ಉದಾ
ಗೋ + ಇನ = ಗೋವಿನ
ಕುಲ+ ಅನ್ನು = ಕುಲವನ್ನು
ಸಂಧಿಯಾಗುವಾಗ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದರೆ ಅದು ಆದೇಶ ಸಂಧಿ
ಉದಾ
ಬೆಟ್ಟ+ತಾವರೆ=ಬೆಟ್ಟದಾವರೆ
ಅಡಿ + ಕಲ್ಲು = ಅಡಿಗಲ್ಲು
ಕೆಳ + ತುಟಿ = ಕೆಳದುಟಿ
ಕಣ್ + ಪನಿ= ಕಂಬನಿ
ಸಂಸ್ಕೃತ ಸಂಧಿಗಳು
ಸಂಸ್ಕೃತ -ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ಅದು ಸಂಸ್ಕೃತ ಸಂಧಿ
ಸಂಸ್ಕೃತ ಸ್ವರ ಸಂಧಿಗಳು
ಸವರ್ಣದೀರ್ಘ ಸಂಧಿ
ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು ಸವರ್ಣಧೀರ್ಘ ಸಂಧಿ ಎನ್ನುವರು
ಉದಾ
ರವಿ+ಇಂದ್ರ = ರವೀಂದ್ರ.   (ಇ+ಇ=ಈ)
ದೇವ+ಆಲಯ= ದೇವಾಲಯ(ಅ+ಆ=ಆ)
ಗುರು+ ಉಪದೇಶ= ಗುರೂಪದೇಶ (ಉ+ಉ=ಊ)
ಮಹಾ+ ಆತ್ಮ = ಮಹಾತ್ಮ (ಆ+ಆ=ಆ)
ಅ,ಆ,ಇ,ಈ,ಉ,ಊ ಇವು ಸವರ್ಣ ಸ್ವರಗಳು
ಗುಣಸಂಧಿ
ಅ ಅಥವಾ ಆ ಎಂಬ ಸ್ವರಗಳಿಗೆ ಇ ಅಥವಾ ಈ ಎಂಬ ಸ್ವರ ಸೇರಿದಾಗ ಏ ಕಾರವೂ , ಉ ಅಥವಾ ಊ ಸ್ವರ ಸೇರಿದಾಗ ಓ ಕಾರವೂ ಋ ಎಂಬ ಸ್ವರ ಸೇರಿದಾಗ ಅರ್ ಕಾರವೂ ಆದೇಶವಾಗಿ ಬರುವುದನ್ನು ಗುಣಸಂಧಿ ಎಂದು ಕರೆಯುತ್ತೇವೆ
ಉದಾ
ದೇವ+ ಇಂದ್ರ=ದೇವೇಂದ್ರ ( ಅ+=ಏ)
ಮಹಾ+ ಈಶ್ವರ = ಮಹೇಶ್ವರ ( ಆ+ಈ= ಏ)
ಚಂದ್ರ+ ಉದಯ = ಚಂದ್ರೋದಯ ( ಅ+ಉ=ಓ)
Samanya Kannada Adhyayana Kaipidi - Useful For PDO, TET, SDA, FDA, KPSC Group C, Morarji Desayi, Abakari Police And All Other Technical And Non Technical Exams ವೃದ್ಧಿ ಸಂಧಿ
ಅ,ಆ,ಕಾರಗಳಿಗೆ ಏ,ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ ,ಒ,ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ.ಇದಕ್ಕೆ ವೃದ್ಧಿ ಸಂಧಿ ಎನ್ನುವರು
ಉದಾ
ವನ+ಔಷಧ=ವನೌಷಧ ( ಅ+ ಔ= ಔ)
ಮಹಾ + ಔನತ್ಯ = ಮಹೌನ್ನತ್ಯ ( ಆ+ಔ =ಔ)
ಯಣ್ ಸಂಧಿ
ಇ,ಈ,ಉ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ ಕಾರಗಳಿಗೆ ಯ ಕಾರವೂ,ಉ ಕಾರಕ್ಕೆ ವ ಕಾರವೂ,ಋ ಕಾರಕ್ಕೆ ರ ಕಾರವೂ ಆದೇಶವಾಗಿ ಬರುತ್ತವೆ.ಇದಕ್ಕೆ ಯಣ್ ಸಂಧಿ ಎನ್ನುವರು
ಉದಾ
ಅತಿ+ಅಂತ= ಅತ್ಯಂತ (ಇ ಕಾರಕ್ಕೆ ಯ ಕಾರ ಆದೇಶ)
ಪ್ರತಿ + ಉತ್ತರ = ಪ್ರತ್ಯುತ್ತರ ( ಇ ಕಾರಕ್ಕೆ ಯ ಕಾರ ಆದೇಶ)
ಅಧಿ + ಆತ್ಮ = ಅಧ್ಯಾತ್ಮ ( ಇ ಕಾರಕ್ಕೆ ಯ ಕಾರ ಆದೇಶ)
ಮನು + ಅಂತರ = ಮನ್ವಂತರ ( ಉ ಕಾರಕ್ಕೆ ವ ಕಾರ ಆದೇಶ)
ಪಿತೃ + ಅರ್ಜಿತ = ಪಿತ್ರಾರ್ಜಿತ( ಋ ಕಾರಕ್ಕೆ ರ ಆದೇಶ)

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...