Skip to main content

ಸಂಧಿ ಪ್ರಕರಣ



ಪದಕ್ಕೆ ಪದ ಬಂದು ಸೇರುವಾಗ ಅಕ್ಷರಗಳು ಲೋಪವಾಗುವುದು,ಅಕ್ಷರ ಬಂದು ಸೇರುವುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದು ಸೇರುವುದಕ್ಕೆ ಸಂಧಿಕಾರ್ಯ ಎನ್ನುವರು
ಸಂಧಿಯಾಗುವಾಗ ಅಕ್ಷರ ಲೋಪವಾದರೆ ಅದನ್ನು ಲೋಪ ಸಂಧಿ ಎನ್ನುವರು.
ಉದಾ- ಊರು+ ಅಲ್ಲಿ = ಊರಲ್ಲಿ
ಕಾಡು + ಇಗೆ = ಕಾಡಿಗೆ
ದೇವರು + ಇಂದ =>ದೇವರಿಂದ
ಸಂಧಿಯಾಗುವಾಗ ಒಂದು ಅಕ್ಷರ ಹೊಸದಾಗಿ ಬಂದರೆ ಅದನ್ನು ಆಗಮ ಸಂಧಿ ಎನ್ನುವರು
ಉದಾ-ಮೊಟ್ಟೆ+ಇಡು=ಮೊಟ್ಟೆಯಿಡು
ಯಕಾರಾಮ ಸಂಧಿ
ಆ,ಇ,ಈ,ಎ,ಏ,ಐ ಎಂಬ ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ಯ, ಕಾರವು ಆಗಮವಾದರೆ ಅದು ಯ ಕಾರಾಗಮ ಸಂಧಿ
ಉದಾ
ಕಾ+ಅದೆ= ಕಾಯದೆ
ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ
ವಕಾರಾಗಮ ಸಂಧಿ
ಉ ಋ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ವಕಾರವು ಬರುತ್ತದೆ.
ಉದಾ
ಗೋ + ಇನ = ಗೋವಿನ
ಕುಲ+ ಅನ್ನು = ಕುಲವನ್ನು
ಸಂಧಿಯಾಗುವಾಗ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದರೆ ಅದು ಆದೇಶ ಸಂಧಿ
ಉದಾ
ಬೆಟ್ಟ+ತಾವರೆ=ಬೆಟ್ಟದಾವರೆ
ಅಡಿ + ಕಲ್ಲು = ಅಡಿಗಲ್ಲು
ಕೆಳ + ತುಟಿ = ಕೆಳದುಟಿ
ಕಣ್ + ಪನಿ= ಕಂಬನಿ
ಸಂಸ್ಕೃತ ಸಂಧಿಗಳು
ಸಂಸ್ಕೃತ -ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ಅದು ಸಂಸ್ಕೃತ ಸಂಧಿ
ಸಂಸ್ಕೃತ ಸ್ವರ ಸಂಧಿಗಳು
ಸವರ್ಣದೀರ್ಘ ಸಂಧಿ
ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು ಸವರ್ಣಧೀರ್ಘ ಸಂಧಿ ಎನ್ನುವರು
ಉದಾ
ರವಿ+ಇಂದ್ರ = ರವೀಂದ್ರ.   (ಇ+ಇ=ಈ)
ದೇವ+ಆಲಯ= ದೇವಾಲಯ(ಅ+ಆ=ಆ)
ಗುರು+ ಉಪದೇಶ= ಗುರೂಪದೇಶ (ಉ+ಉ=ಊ)
ಮಹಾ+ ಆತ್ಮ = ಮಹಾತ್ಮ (ಆ+ಆ=ಆ)
ಅ,ಆ,ಇ,ಈ,ಉ,ಊ ಇವು ಸವರ್ಣ ಸ್ವರಗಳು
ಗುಣಸಂಧಿ
ಅ ಅಥವಾ ಆ ಎಂಬ ಸ್ವರಗಳಿಗೆ ಇ ಅಥವಾ ಈ ಎಂಬ ಸ್ವರ ಸೇರಿದಾಗ ಏ ಕಾರವೂ , ಉ ಅಥವಾ ಊ ಸ್ವರ ಸೇರಿದಾಗ ಓ ಕಾರವೂ ಋ ಎಂಬ ಸ್ವರ ಸೇರಿದಾಗ ಅರ್ ಕಾರವೂ ಆದೇಶವಾಗಿ ಬರುವುದನ್ನು ಗುಣಸಂಧಿ ಎಂದು ಕರೆಯುತ್ತೇವೆ
ಉದಾ
ದೇವ+ ಇಂದ್ರ=ದೇವೇಂದ್ರ ( ಅ+=ಏ)
ಮಹಾ+ ಈಶ್ವರ = ಮಹೇಶ್ವರ ( ಆ+ಈ= ಏ)
ಚಂದ್ರ+ ಉದಯ = ಚಂದ್ರೋದಯ ( ಅ+ಉ=ಓ)
Samanya Kannada Adhyayana Kaipidi - Useful For PDO, TET, SDA, FDA, KPSC Group C, Morarji Desayi, Abakari Police And All Other Technical And Non Technical Exams ವೃದ್ಧಿ ಸಂಧಿ
ಅ,ಆ,ಕಾರಗಳಿಗೆ ಏ,ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ ,ಒ,ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ.ಇದಕ್ಕೆ ವೃದ್ಧಿ ಸಂಧಿ ಎನ್ನುವರು
ಉದಾ
ವನ+ಔಷಧ=ವನೌಷಧ ( ಅ+ ಔ= ಔ)
ಮಹಾ + ಔನತ್ಯ = ಮಹೌನ್ನತ್ಯ ( ಆ+ಔ =ಔ)
ಯಣ್ ಸಂಧಿ
ಇ,ಈ,ಉ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ ಕಾರಗಳಿಗೆ ಯ ಕಾರವೂ,ಉ ಕಾರಕ್ಕೆ ವ ಕಾರವೂ,ಋ ಕಾರಕ್ಕೆ ರ ಕಾರವೂ ಆದೇಶವಾಗಿ ಬರುತ್ತವೆ.ಇದಕ್ಕೆ ಯಣ್ ಸಂಧಿ ಎನ್ನುವರು
ಉದಾ
ಅತಿ+ಅಂತ= ಅತ್ಯಂತ (ಇ ಕಾರಕ್ಕೆ ಯ ಕಾರ ಆದೇಶ)
ಪ್ರತಿ + ಉತ್ತರ = ಪ್ರತ್ಯುತ್ತರ ( ಇ ಕಾರಕ್ಕೆ ಯ ಕಾರ ಆದೇಶ)
ಅಧಿ + ಆತ್ಮ = ಅಧ್ಯಾತ್ಮ ( ಇ ಕಾರಕ್ಕೆ ಯ ಕಾರ ಆದೇಶ)
ಮನು + ಅಂತರ = ಮನ್ವಂತರ ( ಉ ಕಾರಕ್ಕೆ ವ ಕಾರ ಆದೇಶ)
ಪಿತೃ + ಅರ್ಜಿತ = ಪಿತ್ರಾರ್ಜಿತ( ಋ ಕಾರಕ್ಕೆ ರ ಆದೇಶ)

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ