Skip to main content

ರಾಷ್ಟ್ರಪತಿ ಚುನಾವಣೆ ಮತ್ತು ಅಧಿಕಾರಗಳು

ಸಂವಿಧಾನದ ಭಾಗ ೫ ರಲ್ಲಿರುವ ೫೨ ರಿಂದ ೬೨ ರವರೆಗಿನ ವಿಧಿಗಳು ರಾಷ್ಟ್ರಪತಿ ಹುದ್ದೆಯ ಬಗ್ಗೆ ವಿವರಣೆಯನ್ನು ನೀಡುತ್ತವೆ.
ರಾಷ್ಟ್ರಾಧ್ಯಕ್ಷರು ಭಾರತ ದೇಶದ ಪ್ರಥಮ ಪ್ರಜೆ
ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ಚುನಾವಣಾ ಕಾಯ್ದೆಯು ಮಾರ್ಚ ೧೪, ೧೯೫೨ ರಲ್ಲಿ ಜಾರಿಗೆ ಬಂದಿತು
ಪ್ರಥಮ ರಾಷ್ಟ್ರಪತಿ ಚುನಾವಣೆಯು ೧೯೫೨ರ ಮೇ ೨ ರಂದು ನಡೆಯಿತು
ಸಂವಿಧಾನದ ೫೨ನೆ ವಿಧಿಯು ಭಾರತಕ್ಕೊಬ್ಬ ರಾಷ್ಟ್ರಪತಿ ಇರಬೇಕೆಬುವುದನ್ನು ತಿಳಿಸುತ್ತದೆ.
೫೩ನೆ ವಿಧಿಯ ಪ್ರಕಾರ ಭಾರತದಲ್ಲಿನ ಪ್ರತಿಯೊಂದು ಕಾರ್ಯಾಂಗೀಯ ಅಧಿಕಾರಗಳು ರಾಷ್ಟ್ರಪತಿಯ ಅನುಮತಿಯ ಅನುಸಾರವಾಗಿ ನಡೆಯುತ್ತವೆ.
ಸಂಸತ್ತಿನಲ್ಲಿ ಅಂಗೀಕಾರವಾದ ಪ್ರತಿಯೊಂದು ಮಸೂದೆಯು ರಾಷ್ಟ್ರಪತಿಗಳ ಅಂಕಿತದ ನಂತರವೇ ಕಾಯ್ದೆಯಾಗುತ್ತದೆ.
೫೪ ನೆ ವಿಧಿಯು ರಾಷ್ಟ್ರಪತಿಯ ಚುನಾವಣೆ ಬಗೆಗೆ ತಿಳಿಸುತ್ತದೆ.
೫೪ನೆ ವಿಧಿಯ ಪ್ರಕಾರ ರಾಷ್ಟ್ರಪತಿಯವರನ್ನು ನಿರ್ವಾಚನ ಮಂಡಳಿಯ ಮೂಲಕ ಚುನಾಯಿಸಲಾಗುತ್ತದೆ.
ನಿರ್ವಾಚನಾ ಮಂಡಳಿಯು ಸಂಸತ್ತಿನ ಉಭಯ ಸದನಗಳ (ಲೋಕಸಭೆ ಮತ್ತು ವಿಧಾನಸಭೆ) ಚುನಾಯಿತ ಸದಸ್ಯರು,ರಾಜ್ಯಗಳ ವಿಧಾನಸಭೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಚುನಾಯಿತ ವಿಧಾನಸಭೆ ಸದಸ್ಯರನ್ನು ಒಳಗೊಂಡಿರುತ್ತದೆ.
ಸಂವಿಧಾನದ ೫೫ ನೆ ವಿಧಿಯು ರಾಷ್ಟ್ರಾಧ್ಯಕ್ಷರ ಚುನಾವಣೆಗೆ ವಿಧಾನಸಭಾ ಸದಸ್ಯರ ಹಾಗೂ ಸಂಸತ್ ಸದಸ್ಯರ ಮತಗಳ ಮೌಲ್ಯವನ್ನು ನಿರ್ಧರಿಸುವ ಕುರಿತು ತಿಳಿಸುತ್ತದೆ.
ಸಮಾನ ಪ್ರಾತಿನಿಧ್ಯ. ತತ್ವದ ಆಧಾರದ ಮೇಲೆ ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಮತಗಳ ಮೌಲ್ಯವು ಆಯಾ ರಾಜ್ಯದ ವಿಧಾನಸಭೆಗಳ ಸದಸ್ಯರ ಸಂಖ್ಯೆ ಹಾಗೂ ಆಯಾ ರಾಜ್ಯದಲ್ಲಿನ ಜನಸಂಖ್ಯೆಯನ್ನು ಆಧರಿಸಿರುತ್ತದೆ
೫೬ ನೆ ವಿಧಿಯ ಪ್ರಕಾರ ರಾಷ್ಟ್ರಪತಿ ತನ್ನ ಅಧಿಕಾರವನ್ನು ವಹಿಸಿಕೊಂಡ ದಿನಾಂಕದಿಂದ ೫ ವರ್ಷಗಳವರೆಗೆ ಅಧಿಕಾರದಲ್ಲಿರುತ್ತಾರೆ.
ಸುಪ್ರಿಂಕೋರ್ಟನ ಮುಖ್ಯ  ನ್ಯಾಯಾಧೀಶರು ರಾಷ್ಟ್ರಪತಿಗಳಿಗೆ ಪ್ರಮಾಣ ವಚನ ಬೋಧಿಸುತ್ತಾರೆ.
ರಾಷ್ಟ್ರಪತಿಗಳನ್ನು ಪದಚ್ಯುತಗೊಳಿಸುವುದೆ ಮಹಾಭಿಯೋಗ
ಭಾರತದಲ್ಲಿ ಇದುವರೆಗೆ ಮಹಾಭಿಯೋಗ ನಡೆದಿರುವುದಿಲ್ಲ
೬೩ ನೆ ವಿಧಿ ಮಹಾಭಿಯೋಗಕ್ಕೆ  ಅವಕಾಶ ಮಾಡಿಕೊಟ್ಟಿದೆ
ಪ್ರಧಾನ ಮಂತ್ರಿ,ಅಟಾರ್ನಿ ಜನರಲ್,ಕಂಟ್ರೋಲರ್ ಆಂಡ್ ಅಡಿಟರ್ ಜನರಲ್,ಸುಪ್ರೀಂಕೋರ್ಟನ ನ್ಯಾಯಾಧೀಶರು,ಹೈಕೋರ್ಟ ನ್ಯಾಯಾಧೀಶರು,ರಾಜ್ಯಪಾಲರು,ಹಣಕಾಸು ಆಯೋಗದ ಅಧ್ಯಕ್ಷರು,ಸದಸ್ಯರು,ಚುನಾವಣಾ ಆಯುಕ್ತರು,ರಕ್ಷಣಾ ಪಡೆಗಳ ದಂಡನಾಯಕರು ಹಾಗೂ ವಿವಿಧ ರಾಷ್ಟ್ರಗಳಿಗೆ ರಾಷ್ಟ್ರಪತಿಯವರನ್ನು ನೇಮಿಸುವ ಮತ್ತು ಪದಚ್ಯುತಗೊಳಿಸುವ ಅಧಿಕಾರ ರಾಷ್ಟ್ರಪತಿಗಳಿಗಿದೆ.
ಸಂಸತ್ತಿನ ಅಧಿವೇಶನ ಕರೆಯುವುದು,ಮುಂದೂಡುವುದು,ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ಹಾಗೂ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ರಾಷ್ಟ್ರಪತಿಗಳಿಗಿದೆ.
ಸಂಸತ್ತಿನ ಉಭಯ ಸದನಗಳಿಂದ ಅಂಗೀಕರಿಸಲ್ಪಟ್ಟ ಮಸೂದೆಗಳಿಗೆ ಒಪ್ಪಿಗೆ ನೀಡುವ ಪುನರ್ ಪರಿಶೀಲಿಸುವ,ಹಿಂದಿರುಗಿಸುವ ಅಥವಾ ತಡೆಹಿಡಿಯುವ ಅಧಿಕಾರ ಹೊಂದಿದ್ದಾರೆ.
ಲೋಕಸಭೆಗೆ ಇಬ್ಬರು ಆಂಗ್ಲೋ ಇಂಡಿಯನ್ ರನ್ನು  ಮತ್ತು ರಾಜ್ಯಸಭೆಗೆ ೧೨ ಜನರನ್ನು ನಾಮಕರಣ ಮಾಡುತ್ತಾರೆ.ಈ ಎಲ್ಲ ಅಧಿಕಾರಗಳನ್ನು  ಪ್ರಧಾನಿ ಮತ್ತು ಮಂತ್ರಿಮಂಡಲದ ಸಲಹೆಯಂತೆ ನಿರ್ವಹಿಸುತ್ತಾರೆ.
ನ್ಯಾಯಾಲಯವು ಅಪರಾಧಿಗಳಿಗೆ ನೀಡಿದ ಶಿಕ್ಷೆಯನ್ನು ಕಟಿಮೆ ಮಾಡುವ ,ಮರಣ ದಂಡನೆಯನ್ನು ರದ್ದು ಪಡಿಸುವ ಅಧಿಕಾರ ಹೊಂದಿದ್ದಾರೆ.ರಾಷ್ಟ್ರದ ಕಾನೂನುಗಳಿಗೆ ಸಂಬಂಧಿಸಿದ ಮಹತ್ವದ ವಿಷಯಗಳಿಗೆ ಸರ್ವೋಚ್ಛ ನ್ಯಾಯಾಲಯದ ಸಲಹೆ ಕೇಳಬಹುದು.
ರಾಷ್ಟ್ರಪತಿಯವರ ಅನುಮತಿಯಿಲ್ಲದೆ ಹಣಕಾಸಿನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವಂತಿಲ್ಲ
ಹಣಕಾಸು ಆಯೋಗದ ವರದಿ,ಮಹಾಲೇಖಪಾಲರು ಮತ್ತು ಪರಶೋಧಕರು ನೀಡಿದ ವರದಿಯನ್ನು ಸಂಸತ್ತಿನಲ್ಲಿ ಚರ್ಚಿಸುವಂತೆ ರಾಷ್ಟ್ರಪತಿಗಳು ಶಿಫಾರಸ್ಸು ಮಾಡುತ್ತಾರೆ
ಸಂಚಿತ ನಿಧಿಯು ರಾಷ್ಟ್ರಪತಿಗಳ ಹೆಸರಿನಲ್ಲಿರುತ್ತದೆ
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಲೋಕಸೇವಾ ಆಯೋಗದ ಅಧ್ಯಕ್ಷರು,ಸದಸ್ಯರಿಗೆ ಈ ನಿಧಿಯಿಂದ ವೇತನ ಬಿಡುಗಡೆಯಾಗುತ್ತದೆ.
ರಾಷ್ಟ್ರಪತಿಗಳು ಸಮಸ್ತ ಸೇನಾ ಪಡೆಗಳ ಮಹಾದಂಡನಾಯಕರಾಗಿದ್ದು,ಭೂಪಡೆ,ವಾಯುಪಡೆ ಮತ್ತು ನೌಕಾಪಡೆಯ ದಂಡನಾಯಕರನ್ನು ಸಚಿವ ಸಂಪುಟದ ಸಲಹೆ ಮೇರೆಗೆ ಯುದ್ಧ ಮತ್ತು ಶಾಂತಿಯನ್ನು ಘೋಷಿಸುವ ಅಧಿಕಾರ ಇವರಿಗಿದೆ.
Best books for competitive exam preparation

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ