Skip to main content

ಓಕುಳಿ ಶೃಂಗಾರ ಹನಿಗಳು @ ಆನಂದ ಮಾಲಗಿತ್ತಿಮಠ


ಅವಳು
ಕೆನ್ನೆಯ ಪಕಳೆಗಳಿಗೆ
ನಾ
ಹಚ್ಚಿದ ಬಣ್ಣವನು
ತೊಳೆದುಕೊಂಡಳು

ಈಗ ತುಟಿಗಳನು
ನೋಡಿಕೊಳ್ಳುತ್ತಿದ್ದಾಳೆ
ತುಟಿಯಿಂದ ತುಟಿಗೆ
ತೀಡಿದ ರಂಗು
ಹೋಗುವುದಾರೂ ಹೇಗೆ?

***
ಅವಳು ತೊಟ್ಟ ಸೀರೆಯ
ಬಣ್ಣಗಳ ಎಣಿಸುತ್ತಾ
ಎಳೆಯುವಾಗ
ಸಮಯ ಸರಿದಿದ್ದೆ ತಿಳಿಯಲಿಲ್ಲ

ಅಷ್ಟರಲ್ಲಿ ಬಣ್ಣದಾಟ
ಮುಗಿದು
ಕಾಮ ದಹನವಾಗಿತ್ತು

***

ನನ್ನ ಬಿಸಿ ಉಸಿರ
ಪರಿಮಳ ತೊಟ್ಟು
ಅವಳು ಕೆಂಡ
ಸಂಪಿಗೆಯಂತಾದಳು

ಅವಳ ಕೆಂಬಣ್ಣ ಮುಗಿಲಿಗೆರಚಿ
ಬೇಗ ಸಂಜೆಯಾಗಲೆಂದು
ಕಾಯುತ್ತಿದ್ದೇನೆ

***

ನನ್ನ ನೋಡಿ
ಅವಳು ನಾಚಿ ನೀರಾದಳು
ಅವಳೊಳಗೆ
ಒಲವ ಬಣ್ಣ ಬೆರೆಸಿ
ಓಕುಳಿಯಾಡಿದೆ

***

ಬಣ್ಣ ಹಚ್ಚಬೇಡ
ಬಣ್ಣ ಹಚ್ಚಬೇಡ
ಎನುತಲೇ
ಮೈಮೇಲೆ ಬಿದ್ದಳು

ನಾನು ಬಿಳಿಯ ಬೆಳಕು
ಅವಳೊಳಗೆ ತೂರಿ
ಹೊರಬಂದೆ

ಅವಳ ಮಡಿಲಲ್ಲೀಗ
ಪುಟಾಣಿ ಕಾಮನಬಿಲ್ಲು
ಆಡುತಿದೆ


***

ನನ್ನ ಪ್ರೀತಿಯ ತಿರಸ್ಕರಿಸಿ
ನಡೆದ ಅವಳ
ಬೆನ್ನ ಮಹಡಿಯಿಂದ

ನಾ ಹಚ್ಚಿದ ಕೊನೆಯ
ಬಣ್ಣದ
ಹನಿಯೊಂದು 
ವಿರಹದಿಂದ ನೆಲಕೆ ಬಿದ್ದು
ಆತ್ಮಹತ್ಯೆ
ಮಾಡಿಕೊಂಡಿದೆ

***

ಕಪ್ಪು ಬಣ್ಣವೆಂದರೆ
ಅವಳಿಗೂ ಇಷ್ಟ
ಕಣ್ಣಿಗೆ ಕಾಡಿಗೆ ಹಾಕುತ್ತಾಳೆ

ನಾನೋ 
ಕಪ್ಪು ಹಲಗೆಯ ಮೇಲೆ
ಅವಳ ಕಣ್ಣುಗಳನೇ
ಬರೆಯುತ್ತೇನೆ

ಅವಳ ತಂದೆಗೂ 
ಕಪ್ಪೆಂದರೆ ಇಷ್ಟ
ನಮ್ಮಿಬ್ಬರ ಒಲವ
ಸುಟ್ಟ ಬೂದಿ 
ಕಪ್ಪ
ಕೇಳುತ್ತಿದ್ದಾನೆ
ಹೇಗೆ ಕೊಡಲಿ?

***
ಅವಳ ಪ್ರತಿ ಹೆಜ್ಜೆಗಳಿಗೂ
ಬಣ್ಣ ತುಂಬುತ್ತಾ ಹೋದೆ
ಅವಳದಕೆ ಕನಸುಗಳೆಂದು
ಹೆಸರಿಟ್ಟಳು

ನನಸಾದ  ಮೇಲೆ
ಅವಳು ಸಿಗದಂತೆ
ದೂರ ಹೋದಳು
ನಡೆಯುತ್ತಾ ಸಾಗರದ ಮೇಲೆ
ಮೀನಿನಂತೆ

ನಾನು ಅವಳ ಹೆಜ್ಜೆಗಳನೆ
ಹುಡುಕುತಿರುವೆ
ಇನ್ನೂ ಬಣ್ಣ ತುಂಬಲು

ಸಾಗರ ಹೋಗಬೇಕೆಂದಿರುವೆ
ಒಮ್ಮೆ
ಮರಳಿ ಬಾರದಂತೆ




Comments

ಇವುಗಳನ್ನೂ ಓದಿ

ಮೌರ್ಯ ಸಾಮ್ರಾಜ್ಯ ,ಆಡಳಿತ

ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ  ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ  ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...