Skip to main content

ಓಕುಳಿ ಶೃಂಗಾರ ಹನಿಗಳು @ ಆನಂದ ಮಾಲಗಿತ್ತಿಮಠ


ಅವಳು
ಕೆನ್ನೆಯ ಪಕಳೆಗಳಿಗೆ
ನಾ
ಹಚ್ಚಿದ ಬಣ್ಣವನು
ತೊಳೆದುಕೊಂಡಳು

ಈಗ ತುಟಿಗಳನು
ನೋಡಿಕೊಳ್ಳುತ್ತಿದ್ದಾಳೆ
ತುಟಿಯಿಂದ ತುಟಿಗೆ
ತೀಡಿದ ರಂಗು
ಹೋಗುವುದಾರೂ ಹೇಗೆ?

***
ಅವಳು ತೊಟ್ಟ ಸೀರೆಯ
ಬಣ್ಣಗಳ ಎಣಿಸುತ್ತಾ
ಎಳೆಯುವಾಗ
ಸಮಯ ಸರಿದಿದ್ದೆ ತಿಳಿಯಲಿಲ್ಲ

ಅಷ್ಟರಲ್ಲಿ ಬಣ್ಣದಾಟ
ಮುಗಿದು
ಕಾಮ ದಹನವಾಗಿತ್ತು

***

ನನ್ನ ಬಿಸಿ ಉಸಿರ
ಪರಿಮಳ ತೊಟ್ಟು
ಅವಳು ಕೆಂಡ
ಸಂಪಿಗೆಯಂತಾದಳು

ಅವಳ ಕೆಂಬಣ್ಣ ಮುಗಿಲಿಗೆರಚಿ
ಬೇಗ ಸಂಜೆಯಾಗಲೆಂದು
ಕಾಯುತ್ತಿದ್ದೇನೆ

***

ನನ್ನ ನೋಡಿ
ಅವಳು ನಾಚಿ ನೀರಾದಳು
ಅವಳೊಳಗೆ
ಒಲವ ಬಣ್ಣ ಬೆರೆಸಿ
ಓಕುಳಿಯಾಡಿದೆ

***

ಬಣ್ಣ ಹಚ್ಚಬೇಡ
ಬಣ್ಣ ಹಚ್ಚಬೇಡ
ಎನುತಲೇ
ಮೈಮೇಲೆ ಬಿದ್ದಳು

ನಾನು ಬಿಳಿಯ ಬೆಳಕು
ಅವಳೊಳಗೆ ತೂರಿ
ಹೊರಬಂದೆ

ಅವಳ ಮಡಿಲಲ್ಲೀಗ
ಪುಟಾಣಿ ಕಾಮನಬಿಲ್ಲು
ಆಡುತಿದೆ


***

ನನ್ನ ಪ್ರೀತಿಯ ತಿರಸ್ಕರಿಸಿ
ನಡೆದ ಅವಳ
ಬೆನ್ನ ಮಹಡಿಯಿಂದ

ನಾ ಹಚ್ಚಿದ ಕೊನೆಯ
ಬಣ್ಣದ
ಹನಿಯೊಂದು 
ವಿರಹದಿಂದ ನೆಲಕೆ ಬಿದ್ದು
ಆತ್ಮಹತ್ಯೆ
ಮಾಡಿಕೊಂಡಿದೆ

***

ಕಪ್ಪು ಬಣ್ಣವೆಂದರೆ
ಅವಳಿಗೂ ಇಷ್ಟ
ಕಣ್ಣಿಗೆ ಕಾಡಿಗೆ ಹಾಕುತ್ತಾಳೆ

ನಾನೋ 
ಕಪ್ಪು ಹಲಗೆಯ ಮೇಲೆ
ಅವಳ ಕಣ್ಣುಗಳನೇ
ಬರೆಯುತ್ತೇನೆ

ಅವಳ ತಂದೆಗೂ 
ಕಪ್ಪೆಂದರೆ ಇಷ್ಟ
ನಮ್ಮಿಬ್ಬರ ಒಲವ
ಸುಟ್ಟ ಬೂದಿ 
ಕಪ್ಪ
ಕೇಳುತ್ತಿದ್ದಾನೆ
ಹೇಗೆ ಕೊಡಲಿ?

***
ಅವಳ ಪ್ರತಿ ಹೆಜ್ಜೆಗಳಿಗೂ
ಬಣ್ಣ ತುಂಬುತ್ತಾ ಹೋದೆ
ಅವಳದಕೆ ಕನಸುಗಳೆಂದು
ಹೆಸರಿಟ್ಟಳು

ನನಸಾದ  ಮೇಲೆ
ಅವಳು ಸಿಗದಂತೆ
ದೂರ ಹೋದಳು
ನಡೆಯುತ್ತಾ ಸಾಗರದ ಮೇಲೆ
ಮೀನಿನಂತೆ

ನಾನು ಅವಳ ಹೆಜ್ಜೆಗಳನೆ
ಹುಡುಕುತಿರುವೆ
ಇನ್ನೂ ಬಣ್ಣ ತುಂಬಲು

ಸಾಗರ ಹೋಗಬೇಕೆಂದಿರುವೆ
ಒಮ್ಮೆ
ಮರಳಿ ಬಾರದಂತೆ




Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ