Skip to main content

ಗಾಂಧಿ ಕನ್ನಡಕ ತೆಗೆಯಬಾರದಿತ್ತು By ಆನಂದ ಮಾಲಗಿತ್ತಿಮಠ

ಕಸವನು ಹಸಿ ಒಣವೆಂದು
ವಿಂಗಡಿಸಲಾರದವರು
ಅದೆಷ್ಟು ಸುಲಭವಾಗಿ
ಮನಸ್ಸುಗಳ ವಿಂಗಡಿಸಿಬಿಡುತ್ತಾರೆ

ಬಳಸಿ ಡಸ್ಟ ಬಿನ್ ಗೂ
ಎಸೆದು ಬಿಡುತ್ತಾರೆ

ಕಸಪೊರಕೆಗೂ ಧರ್ಮದ
ಅಮಲೇರಿರಬಹುದು
ಕೆಲವ ಗುಡಿಸಿ ಕೆಲವ ಪೋಷಿಸಿ
ಹೊರಟಿದೆ ಬೀದಿಯಲಿ

ಡಸ್ಟಬಿನಗಳೂ ಸದ್ದು
ಮಾಡುತಿವೆ ವಿಪರೀತ
ಬಹುಶಃ ಚುನಾವಣೆ ಹತ್ತಿರ
ಬಂದಿರಬಹುದು 

ಹಸಿದ ಮೇಕೆಯೊಂದು
ನೇತಾರನ ಕೊರಳ
ಮಾಲೆಯ ತಿಂದು
ಜೈ ಎನುತಿದೆ 
ಉದರ ಹೊರೆದ ಖುಷಿಯಲಿ

ನೋಟಿನ ಮೇಲಿರುವ
ಗಾಂಧೀ‌ ಕಣ್ಣಲ್ಲಿ 
ನೀರು ಜಿನುಗುತ್ತಿದೆ
ಬಹುಶಃ ಸುತ್ತಲಿನ ಕಸದ
ಕಣವೊಂದು ಬಿದ್ದಿರಬಹುದು

ಗಾಂಧಿ ಕನ್ನಡಕ 
ತೆಗೆಯಬಾರದಿತ್ತು
ಸ್ವಾತಂತ್ರ್ಯದ ಹೆಸರಿನಲ್ಲಿ

Comments

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...