Skip to main content

Posts

ತಿಳಿಯೋಣಾ

> ಪ್ರಾಚಿನ ಕಾಲದಿಂದಲೂ ನಮ್ಮ ದೇಶವನ್ನು 'ಭಾರತ' ಎಂಬುದಾಗಿ ಕರೆಯಲಾಗುತ್ತಿತ್ತು > ದೇಶಕ್ಕೆ ಭಾರತ ಎಂಬ ಹೆಸರು ವೃಷಭನಾಥನ ಹಿರಿಯ ಮಗ 'ಭರತ' ನೆಂಬ ಓರ್ವ ರಾಜನಿದ್ದ > ಭರತನು ಆಳಿದ ನಾಡು 'ಭರತ ಖಂಡ', 'ಭರತವರ್ಷ' (ಭಾರತ ದೇಶ) ಎನಿಸಿತು > ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ' ಪರ್ಷಿಯಾ' ದೇಶದ ಜನರು ಸಿಂಧೂ ನದಿ ಬಯಲಿನ ಸಂಪರ್ಕಕ್ಕೆ ಬಂದರು > ಪರ್ಷಿಯನ್ನರು ಸಿಂಧೂನದಿಯನ್ನು 'ಹಿಂದೂ' ಎಂದು ಕರೆದರು > ಮುಂದೆ ಗ್ರೀಕರು ಭಾರತೀಯರೊಂದಿಗೆ ಸಂಪರ್ಕಕ್ಕೆ ಬಂದಾಗ ಅವರ ಬಾಯಲ್ಲಿ 'ಹಿಂದೂ' ಪದವು 'ఇండు' ఆయతు > ಹಾಗೆಯೇ ಸಿಂಧೂ ನದಿಯು ' ಇಂಡಸ್ ' ಆಯಿತು > ಮಹಮ್ಮದೀಯರ ಆಕ್ರಮಣದೊಂದಿಗೆ 'ಹಿಂದೂ' ಪದವು ಮತ್ತೆ ಬಳಕೆಗೆ ಬಂದಿತು > ಸಂಸ್ಕೃತ ಭಾಷೆಯ ನುಡಿಗಟ್ಟು 'ಅದ್ಭುತ' ಎಂದು ನುಡಿದವರು 'ವಿಲಿಯಂ ಜೋನ್ಸ್ ಜೂನಿಯರ್' > ಶನ ಅಥವಾ ಸೊನ್ನೆಯನ್ನು 'ಮೊಟ್ಟ ಮೊದಲ ಬಾರಿಗೆ ಬಳಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ > ಭೂಮಿ ಗುಂಡಾಗಿದೆ, ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ ಎಂದು ಭಾರತೀಯ ವಿಜ್ಞಾನಿ 'ಆರ್ಯಭಟ' ತೊರಿಸಿಕೊಟ್ಟರು > ಆಧುನಿಕ ವಿಜ್ಞಾನದಲ್ಲಿ ಈ ವಾದವನ್ನು ಎತ್ತಿ ಹಿಡಿದ ಕೀರ್ತಿ ಸಲ್ಲುವುದು 'ಕೋಪರ್ನಿಕಸ್' ಗೆ > ಭಾರತೀಯರು ನಾವ...

ಗಾಂಧಿ ಕನ್ನಡಕ ತೆಗೆಯಬಾರದಿತ್ತು By ಆನಂದ ಮಾಲಗಿತ್ತಿಮಠ

ಕಸವನು ಹಸಿ ಒಣವೆಂದು ವಿಂಗಡಿಸಲಾರದವರು ಅದೆಷ್ಟು ಸುಲಭವಾಗಿ ಮನಸ್ಸುಗಳ ವಿಂಗಡಿಸಿಬಿಡುತ್ತಾರೆ ಬಳಸಿ ಡಸ್ಟ ಬಿನ್ ಗೂ ಎಸೆದು ಬಿಡುತ್ತಾರೆ ಕಸಪೊರಕೆಗೂ ಧರ್ಮದ ಅಮಲೇರಿರಬಹುದು ಕೆಲವ ಗುಡಿಸಿ ಕೆಲವ ಪೋಷಿಸಿ ಹೊರಟಿದೆ ಬೀದಿಯಲಿ ಡಸ್ಟಬಿನಗಳೂ ಸದ್ದು ಮಾಡುತಿವೆ ವಿಪರೀತ ಬಹುಶಃ ಚುನಾವಣೆ ಹತ್ತಿರ ಬಂದಿರಬಹುದು  ಹಸಿದ ಮೇಕೆಯೊಂದು ನೇತಾರನ ಕೊರಳ ಮಾಲೆಯ ತಿಂದು ಜೈ ಎನುತಿದೆ  ಉದರ ಹೊರೆದ ಖುಷಿಯಲಿ ನೋಟಿನ ಮೇಲಿರುವ ಗಾಂಧೀ‌ ಕಣ್ಣಲ್ಲಿ  ನೀರು ಜಿನುಗುತ್ತಿದೆ ಬಹುಶಃ ಸುತ್ತಲಿನ ಕಸದ ಕಣವೊಂದು ಬಿದ್ದಿರಬಹುದು ಗಾಂಧಿ ಕನ್ನಡಕ  ತೆಗೆಯಬಾರದಿತ್ತು ಸ್ವಾತಂತ್ರ್ಯದ ಹೆಸರಿನಲ್ಲಿ

ಓಕುಳಿ ಶೃಂಗಾರ ಹನಿಗಳು @ ಆನಂದ ಮಾಲಗಿತ್ತಿಮಠ

ಅವಳು ಕೆನ್ನೆಯ ಪಕಳೆಗಳಿಗೆ ನಾ ಹಚ್ಚಿದ ಬಣ್ಣವನು ತೊಳೆದುಕೊಂಡಳು ಈಗ ತುಟಿಗಳನು ನೋಡಿಕೊಳ್ಳುತ್ತಿದ್ದಾಳೆ ತುಟಿಯಿಂದ ತುಟಿಗೆ ತೀಡಿದ ರಂಗು ಹೋಗುವುದಾರೂ ಹೇಗೆ? *** ಅವಳು ತೊಟ್ಟ ಸೀರೆಯ ಬಣ್ಣಗಳ ಎಣಿಸುತ್ತಾ ಎಳೆಯುವಾಗ ಸಮಯ ಸರಿದಿದ್ದೆ ತಿಳಿಯಲಿಲ್ಲ ಅಷ್ಟರಲ್ಲಿ ಬಣ್ಣದಾಟ ಮುಗಿದು ಕಾಮ ದಹನವಾಗಿತ್ತು *** ನನ್ನ ಬಿಸಿ ಉಸಿರ ಪರಿಮಳ ತೊಟ್ಟು ಅವಳು ಕೆಂಡ ಸಂಪಿಗೆಯಂತಾದಳು ಅವಳ ಕೆಂಬಣ್ಣ ಮುಗಿಲಿಗೆರಚಿ ಬೇಗ ಸಂಜೆಯಾಗಲೆಂದು ಕಾಯುತ್ತಿದ್ದೇನೆ *** ನನ್ನ ನೋಡಿ ಅವಳು ನಾಚಿ ನೀರಾದಳು ಅವಳೊಳಗೆ ಒಲವ ಬಣ್ಣ ಬೆರೆಸಿ ಓಕುಳಿಯಾಡಿದೆ *** ಬಣ್ಣ ಹಚ್ಚಬೇಡ ಬಣ್ಣ ಹಚ್ಚಬೇಡ ಎನುತಲೇ ಮೈಮೇಲೆ ಬಿದ್ದಳು ನಾನು ಬಿಳಿಯ ಬೆಳಕು ಅವಳೊಳಗೆ ತೂರಿ ಹೊರಬಂದೆ ಅವಳ ಮಡಿಲಲ್ಲೀಗ ಪುಟಾಣಿ ಕಾಮನಬಿಲ್ಲು ಆಡುತಿದೆ *** ನನ್ನ ಪ್ರೀತಿಯ ತಿರಸ್ಕರಿಸಿ ನಡೆದ ಅವಳ ಬೆನ್ನ ಮಹಡಿಯಿಂದ ನಾ ಹಚ್ಚಿದ ಕೊನೆಯ ಬಣ್ಣದ ಹನಿಯೊಂದು  ವಿರಹದಿಂದ ನೆಲಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದೆ *** ಕಪ್ಪು ಬಣ್ಣವೆಂದರೆ ಅವಳಿಗೂ ಇಷ್ಟ ಕಣ್ಣಿಗೆ ಕಾಡಿಗೆ ಹಾಕುತ್ತಾಳೆ ನಾನೋ  ಕಪ್ಪು ಹಲಗೆಯ ಮೇಲೆ ಅವಳ ಕಣ್ಣುಗಳನೇ ಬರೆಯುತ್ತೇನೆ ಅವಳ ತಂದೆಗೂ  ಕಪ್ಪೆಂದರೆ ಇಷ್ಟ ನಮ್ಮಿಬ್ಬರ ಒಲವ ಸುಟ್ಟ ಬೂದಿ  ಕಪ್ಪ ಕೇಳುತ್ತಿದ್ದಾನೆ ಹೇಗೆ ಕೊಡಲಿ? *** ಅವಳ ಪ್ರತಿ ಹೆಜ್ಜೆಗಳಿಗೂ ಬಣ್ಣ ತುಂಬುತ್ತಾ ಹೋದೆ ಅವಳದಕೆ ಕನಸುಗಳೆಂದು ಹೆಸರಿಟ್ಟಳು ನನಸಾದ  ಮೇಲೆ ಅವ...