Skip to main content

ಪ್ರಚಲಿತ ಘಟನೆಗಳು

ಕಿಂಗ್ - ಬಾರೊ ಮಾವ ಏನ ಫುಲ್ ಹವಾ ನಿಂದ
ಸಿಂಗ್ - ನಾ ಏನ ಮಾಡೆನೊ ಮಾರಾಯಾ
ಕಿಂಗ್ - ಮತ್ತೇನಪಾ ಹಣಕಾಸು ಆಯೋಗದ ಅಧ್ಯಕ್ಷ ಆಗಿದಿ
ಸಿಂಗ್ - ಹೊಯ್ಕೋರಿ ಅವನೌನ. ನಾ ಅಲ್ಲಪಾ.ಅವರು ಎನ್ ಕೆ ಸಿಂಗ್
ಕಿಂಗ್ - ಹಂಗ ಮಸ್ಕಿರಿ ಮಾಡಿನಿ ತುಗೊ
ಸಿಂಗ್ - ನಮ್ಮ ಹುಡುಗ ವಿಶ್ವದಾಖಲೆ ಮಾಡ್ಯಾನ ಗೊತ್ತೈತೆನ?
ಕಿಂಗ್ - ಯಾರ?
ಸಿಂಗ್ - ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ ೩೦೦ ವಿಕೆಟಗಳನ್ನು ಗಳಿಸಿದಾರ. ಈ ಸಾಧನೆ ಮೊದಲು ಆಸ್ಟ್ರೇಲಿಯಾದ ಡೆನೀಸ್ ಲಿಲ್ಲಿ ಅವರ ಹೆಸರಿನಲ್ಲಿ ತ್ತು. ಅವರು ೫೬ ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿದ್ದರು. ಆದರೆ ಅಶ್ವೀನ್ ರವರು ೫೪ ಟೆಸ್ಟ  ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ಕಿಂಗ್ - ಹೊಡೀರಿ ಟುಮಕಿ ಟುಮ್ ಟುಮ್ ಟುಮಕ್
ಸಿಂಗ್ - ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ಪಂಕಜ್ ಅಡ್ವಾಣಿಯವರು ೧೮ನೇಯ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡರು.ಇವುಗಳಲ್ಲಿ ೧೩ ಬಿಲಿಯರ್ಡ್ಸ್ ಹಾಗೂ ೫ ಸ್ನೂಕರ್ ಪ್ರಶಸ್ತಿ ಸೇರಿವೆ.
ಕಿಂಗ್ - ಇವನೌನ ಸ್ನೂಕರ ಎಂದರೆನಪಾ
ಸಿಂಗ್ - ಮಳ್ಳ  ಹಳೆ ಮಳ್ಳ  ಸ್ನೂಕರ್ ಅಂದರ ಉದ್ದಂದ ಬಡಗಿಲೆ ಗುಂಡನ ಚೆಂಡ ನೂಕುವುದು.
ಕಿಂಗ್- ತಿಳಿತ ಬಿಡು
ಸಿಂಗ್- ಗುವಹಾಟಿಯಲ್ಲಿ ನಡೆದ ವಿಶ್ವ  ಯೂತ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳೆಯರು ೫ ಚಿನ್ನದ ಪದಕಗಳನ್ನು ಪಡೆದಾರ.
ಕಿಂಗ್ - ಮಸ್ತ. ಆತ ನೋಡ
ಸಿಂಗ್ - ಇಷ್ಟ. ಅಲ್ಲ. ಸ್ಪೇನನ ಅಲ್ಮೇರಿಯಾದಲ್ಲಿ ನಡೆದ ಸ್ಪ್ಯಾನಿಷ್ ಓಪನ್ ಟೆಬಲ್ ಟೆನಿಸ್‌ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಜಿ ಸತಿಯನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಕಿಂಗ್ - ಒಟ್ಟಿನಲ್ಲಿ ಭಾರತದ ವಿಜಯ ಪತಾಕೆ ಹೀಗೆ ಹಾರಾಡುತ್ತಿರಲಿ
ಸಿಂಗ್- ವಾಲ್ಟರಿ ಬೊಟಾಸ್ ಫಾರ್ಮುಲಾ ೧ ಅಬುದಾಬಿ ಗ್ರ್ಯಾನ್ ಫ್ರೀ ರೇಸ್ ೨೦೧೭ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದಾರ.
ಕಿಂಗ್- ಮೊನ್ನೆ  ರೇಸನಲ್ಲಿ ಯಾರೊ ಸತ್ತ ಹೋದರಲೊ
ಸಿಂಗ್- ಹಂಗ ಹುಟ್ಟು ಸಾವು ಸಹಜ ಕಣೊ
ಕಿಂಗ್ - ನೆಲ್ಲಿಕಾಯಿ ತಿಂತಿಯೆನ?
ಸಿಂಗ್- ನೆಲ್ಲಿಕಾಯಿ ಅಂದಕೂಡಲೆ ನೆಂಪ ಆತ ನೋಡ. ಡೆಮಿ ಲಿ ನೆಲ್ ಪೀಟರ್ಸ ಎಂಬ ದ. ಆಫ್ರಿಕಾ ಸುಂದರಿ ೨೦೧೭ ರ ಮಿಸ್ ಯೂನಿವರ್ಸ ಆಗಿ ಆಯ್ಕೆಯಾಗಿದಾರ.
ಕಿಂಗ್ - ಈ ಸ್ಪರ್ಧೆ ಎಲ್ಲಿ ನಡಿತ ಏನ ಸುದ್ದಿ
ಸಿಂಗ್ - ಇದು ಶ್ರೀಲಂಕಾದ ಕೊಲಂಬೊದಲ್ಲಿ ನಡೀತ
ಕಿಂಗ್ - ಮಸ್ತ ಸುದ್ದಿ ಹೇಳಿದಿ ನೋಡ
ಡಿಂಗ್ - ಸಿಂಗಣ್ಣಾ  ಅಕ್ಕಾ  ಕರ್ಯಾತಾಳ
ಕಿಂಗ್ - ಇವ್ಯಾಂವಲಾ ?
ಸಿಂಗ - ಇವ ಊರಿಂದ ಬಂದಾನ
ಕಿಂಗ್- ಏನಪಾ ನಿನ್ನ ಹೆಸರು?
ಡಿಂಗ್ - ನೀರ ಬೇಕೇನ್ರಿ?
ಕಿಂಗ್ - ಏನ್ಲಾ ಇದು ನಾ ಒಂದ ಕೇಳಿರ ಇವೊಂದ ಹೇಳ್ತಾನು
ಸಿಂಗ್ - ಅವನ ಎರಡೂ ಸ್ಪೀಕರ್ ಔಟ್ ಆಗ್ಯಾವು . ನಾವ ಬರ್ತೆವ ನಮ್ಮ ನಮ್ಮ ನಮಸ್ಕಾರ

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ