ಕಿಂಗ್ - ಬಾರೊ ಮಾವ ಏನ ಫುಲ್ ಹವಾ ನಿಂದ
ಸಿಂಗ್ - ನಾ ಏನ ಮಾಡೆನೊ ಮಾರಾಯಾ
ಕಿಂಗ್ - ಮತ್ತೇನಪಾ ಹಣಕಾಸು ಆಯೋಗದ ಅಧ್ಯಕ್ಷ ಆಗಿದಿ
ಸಿಂಗ್ - ಹೊಯ್ಕೋರಿ ಅವನೌನ. ನಾ ಅಲ್ಲಪಾ.ಅವರು ಎನ್ ಕೆ ಸಿಂಗ್
ಕಿಂಗ್ - ಹಂಗ ಮಸ್ಕಿರಿ ಮಾಡಿನಿ ತುಗೊ
ಸಿಂಗ್ - ನಮ್ಮ ಹುಡುಗ ವಿಶ್ವದಾಖಲೆ ಮಾಡ್ಯಾನ ಗೊತ್ತೈತೆನ?
ಕಿಂಗ್ - ಯಾರ?
ಸಿಂಗ್ - ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ ೩೦೦ ವಿಕೆಟಗಳನ್ನು ಗಳಿಸಿದಾರ. ಈ ಸಾಧನೆ ಮೊದಲು ಆಸ್ಟ್ರೇಲಿಯಾದ ಡೆನೀಸ್ ಲಿಲ್ಲಿ ಅವರ ಹೆಸರಿನಲ್ಲಿ ತ್ತು. ಅವರು ೫೬ ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿದ್ದರು. ಆದರೆ ಅಶ್ವೀನ್ ರವರು ೫೪ ಟೆಸ್ಟ ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ಕಿಂಗ್ - ಹೊಡೀರಿ ಟುಮಕಿ ಟುಮ್ ಟುಮ್ ಟುಮಕ್
ಸಿಂಗ್ - ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ಪಂಕಜ್ ಅಡ್ವಾಣಿಯವರು ೧೮ನೇಯ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡರು.ಇವುಗಳಲ್ಲಿ ೧೩ ಬಿಲಿಯರ್ಡ್ಸ್ ಹಾಗೂ ೫ ಸ್ನೂಕರ್ ಪ್ರಶಸ್ತಿ ಸೇರಿವೆ.
ಕಿಂಗ್ - ಇವನೌನ ಸ್ನೂಕರ ಎಂದರೆನಪಾ
ಸಿಂಗ್ - ಮಳ್ಳ ಹಳೆ ಮಳ್ಳ ಸ್ನೂಕರ್ ಅಂದರ ಉದ್ದಂದ ಬಡಗಿಲೆ ಗುಂಡನ ಚೆಂಡ ನೂಕುವುದು.
ಕಿಂಗ್- ತಿಳಿತ ಬಿಡು
ಸಿಂಗ್- ಗುವಹಾಟಿಯಲ್ಲಿ ನಡೆದ ವಿಶ್ವ ಯೂತ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳೆಯರು ೫ ಚಿನ್ನದ ಪದಕಗಳನ್ನು ಪಡೆದಾರ.
ಕಿಂಗ್ - ಮಸ್ತ. ಆತ ನೋಡ
ಸಿಂಗ್ - ಇಷ್ಟ. ಅಲ್ಲ. ಸ್ಪೇನನ ಅಲ್ಮೇರಿಯಾದಲ್ಲಿ ನಡೆದ ಸ್ಪ್ಯಾನಿಷ್ ಓಪನ್ ಟೆಬಲ್ ಟೆನಿಸ್ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಜಿ ಸತಿಯನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಕಿಂಗ್ - ಒಟ್ಟಿನಲ್ಲಿ ಭಾರತದ ವಿಜಯ ಪತಾಕೆ ಹೀಗೆ ಹಾರಾಡುತ್ತಿರಲಿ
ಸಿಂಗ್- ವಾಲ್ಟರಿ ಬೊಟಾಸ್ ಫಾರ್ಮುಲಾ ೧ ಅಬುದಾಬಿ ಗ್ರ್ಯಾನ್ ಫ್ರೀ ರೇಸ್ ೨೦೧೭ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದಾರ.
ಕಿಂಗ್- ಮೊನ್ನೆ ರೇಸನಲ್ಲಿ ಯಾರೊ ಸತ್ತ ಹೋದರಲೊ
ಸಿಂಗ್- ಹಂಗ ಹುಟ್ಟು ಸಾವು ಸಹಜ ಕಣೊ
ಕಿಂಗ್ - ನೆಲ್ಲಿಕಾಯಿ ತಿಂತಿಯೆನ?
ಸಿಂಗ್- ನೆಲ್ಲಿಕಾಯಿ ಅಂದಕೂಡಲೆ ನೆಂಪ ಆತ ನೋಡ. ಡೆಮಿ ಲಿ ನೆಲ್ ಪೀಟರ್ಸ ಎಂಬ ದ. ಆಫ್ರಿಕಾ ಸುಂದರಿ ೨೦೧೭ ರ ಮಿಸ್ ಯೂನಿವರ್ಸ ಆಗಿ ಆಯ್ಕೆಯಾಗಿದಾರ.
ಕಿಂಗ್ - ಈ ಸ್ಪರ್ಧೆ ಎಲ್ಲಿ ನಡಿತ ಏನ ಸುದ್ದಿ
ಸಿಂಗ್ - ಇದು ಶ್ರೀಲಂಕಾದ ಕೊಲಂಬೊದಲ್ಲಿ ನಡೀತ
ಕಿಂಗ್ - ಮಸ್ತ ಸುದ್ದಿ ಹೇಳಿದಿ ನೋಡ
ಡಿಂಗ್ - ಸಿಂಗಣ್ಣಾ ಅಕ್ಕಾ ಕರ್ಯಾತಾಳ
ಕಿಂಗ್ - ಇವ್ಯಾಂವಲಾ ?
ಸಿಂಗ - ಇವ ಊರಿಂದ ಬಂದಾನ
ಕಿಂಗ್- ಏನಪಾ ನಿನ್ನ ಹೆಸರು?
ಡಿಂಗ್ - ನೀರ ಬೇಕೇನ್ರಿ?
ಕಿಂಗ್ - ಏನ್ಲಾ ಇದು ನಾ ಒಂದ ಕೇಳಿರ ಇವೊಂದ ಹೇಳ್ತಾನು
ಸಿಂಗ್ - ಅವನ ಎರಡೂ ಸ್ಪೀಕರ್ ಔಟ್ ಆಗ್ಯಾವು . ನಾವ ಬರ್ತೆವ ನಮ್ಮ ನಮ್ಮ ನಮಸ್ಕಾರ
ಮೌರ್ಯ ಸಾಮ್ರಾಜ್ಯದ ಆಡಳಿತ ಭಾರತದ ಮೆಕೈವರ ಎನಿಸಿದ್ದು - ಕೌಟಿಲ್ಯ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಒಟ್ಟು ಶಾಸನಗಳು - ೧೮ ಮೌರ್ಯರ ಆಡಳಿತದಲ್ಲಿ ನಗರಾಡಳಿತದ ಅಧಿಕಾರಿ - ನಗರ ವ್ಯವಹಾರಿಕ ಭೂಮಿಯ ಅಳತೆ, ಮಾಲೀಕತ್ವ, ಮತ್ತು ಭೂಕಂದಾಯ ಮೇಲ್ವಿಚಾರಣಾಧಿಕಾರಿ - ರಜ್ಜುಕ ಭೂಮಿಯ ಉತ್ಪನ್ನದಲ್ಲಿ ನೀಡಬೇಕಾದ ಭೂಕಂದಾಯ - ಆರನೆಯ ಒಂದು ಭಾಗ ಧರ್ಮ ಮಹಾಮಾತ್ರರ ಪ್ರಮುಖ ಕಾರ್ಯ - ನ್ಯಾಯ ತೀರ್ಮಾನ ಮತ್ತು ಧರ್ಮ ಪ್ರಚಾರ ಸಾರ್ವಜನಿಕ ಹಿತವನ್ನು ಗಮನಿಸುವ ಅಧಿಕಾರಿ - ವಜ್ರಭೂಮಿಕ ವಜ್ರಭೂಮಿಕನ ಮುಖ್ಯ ಕಾರ್ಯಗಳು - ಭಾವಿ,ರಸ್ತೆ,ತೋಪುಗಳ ನಿರ್ಮಾಣ ಮೌರ್ಯರ ಕಾಲದಲ್ಲಿಯ ಪ್ರಾಂತ್ಯಗಳು - ಪ್ರಾಚ್ಯ, ( ತಕ್ಷಶಿಲೆ) ಉತ್ತರಾಪಥ (ಉಜ್ಜಯಿನಿ) ಅವಂತೀ ( ಕೋಸಲ) ದಕ್ಷಿಣಾಪಥ ( ಸುವರ್ಣಗಿರಿ) ಅಶೋಕನ ಕಾಲದಲ್ಲಿ ಸೇರಿಸಲ್ಪಟ್ಟ ೫ ನೇ ಪ್ರಾಂತ್ಯ - ಕಳಿಂಗ್ ಗ್ರಾಮಗಳ ಆಡಳಿತ ನಿರ್ವಹಣಾಧಿಕಾರಿ - ಗ್ರಾಮಿಕ ಹತ್ತು ಗ್ರಾಮಗಳ ಮೇಲ್ವಿಚಾರಕ - ಗೋಪ ಪ್ರಾಂತಗಳ ಕೆಳಗಿನ ಜನಪದಗಳ ಮೇಲ್ವಿಚಾರಕ - ಸಮಹರತೃ ಮೌರ್ಯರ ಆಡಳಿತ ಮೊಘಲರ ಆಡಳಿತಕ್ಕಿಂತ ಮೇಲಾಗಿತ್ತು ಎದಿರುವ ಇತಿಹಾಸಜ್ಞ - ವಿನ್ಸೆಂಟ್ ಸ್ಮಿತ್ ಕೌಟಿಲ್ಯನ ಅರ್ಥಶಾಸ್ತ್ರ ಹಸ್ತಪ್ರತಿಯನ್ನು ಪತ್ತೆ ಹಚ್ಚಿ ಆದುನಿಕ ಜಗತ್ತಿಗೆ ಸಿಗುವಂತೆ ಮುದ್ರಿಸಿ ಪ್ರಕಟಿಸಿದವರು-ಮೈಸೂರಿನ ಶಾಮಾಶಾಸ್ತ್ರಿಗಳು ಮೌರ್ಯರ ಕಾಲದ ಶಿಕ್ಷೆ ಕ್ರಿಮಿನಲ್ ಅಪರಾಧ - ಮರಣದಂಡನೆ ನೀಡಲಾಗುತ್ತಿತ...
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ