Skip to main content

ಪೈಲ್ವಾನ‌ ಮಾಸ್ತರ್ @ ಸಂದೀಪ ಕುಲಕರ್ಣಿ

ಮಾದಾಪೂರದ ಬೋರೆಗೌಡ್ರು ಊರಿಗೆನೇ ದೊಡ್ಡ ದನಿಗಳು..ತಮ್ಮ ಮಕ್ಕಳನ್ನ ಚೆನ್ನಾಗಿ ಉಗಿತ್ತಿದ್ದರು..ನೋಡರೋ ಆ ಮುದುಕಪ್ಪನ್ನ ಮಕ್ಕಳನ್ನ..ಎಷ್ಟೇ ಬಡತನದಲ್ಲಿದ್ದರೂ ಚೆನ್ನಾಗಿ ತಿಂದು ಕೊಬ್ಬಿದ,ಮಥಿಸಿದ ಗಜಾ ಇದ್ದಂಗ ಇದ್ದರಲ್ಲೋ..ನೀವು ಅದಿರಿ..ಎನ್ ತಿಂದರೂ ಬಡಶುಂಠಿ ಬೇರ ಆಗಿದಿರಲ್ಲೊ..?? ಚಪಾತಿ,ರೊಟ್ಡಿ,ಮುದ್ದೆ,ಗೋದಿ ಪಾಯಸ ಯಾವುದು ನಾಟತಾ ಇಲ್ಲ ನಿಮಗೆ..ನಿಮ್ಮ ಮೊಖಕ್ಕೊಂದು ಉಗಿಯಾ..ಎಂದು ಮಕ್ಕಳನ್ನ ತರಾಟೆಗೆ ತೊಗಿಂಡಿದ್ರು ಊರಗೌಡ್ರು. ಆ ಕಡೆ ಮುದುಕಪ್ಪನ ಮಗ ಮಲ್ಲೇಶ ಒತ್ತಾರೆನೆ ಇದ್ದು ಮೇವು ತಂದಿ ಹೊಳಿ ಕಡೆ ಹೋಗಿ ಒಂದ ಗಂಟೆ ಈಜಾಡಿ ಬಂದು ಗೋದಿ ಪಾಯಸ,ಶೇಂಗಾ ಬೆಲ್ಲ ಎನ ಕೊಟ್ಟಿದ್ದು ಚೆನ್ನಾಗಿ ಚಚ್ಚಿ ಒಳ್ಳೆ ಜವಾರಿ ಎತ್ತಿನ ಮೈಕಟ್ಟನಂಗ ಆಗಿದ್ದ...ಸಾಲಿ ಕಲಿತಿದ್ದು ಟಿ‌ಸಿಎಚ್ ವರೆಗೆ..ಆದರೆ ಕಡಿಮೆ ಅಂಕ ಬಂದಿದ್ದರಿಂದ ನೌಕರಿ ಗಿಟ್ಟಿರಲಿಲ್ಲ..ಹೀಗಾಗಿ ಅಲ್ಲೆ ಇಲ್ಲಿ ನಡಿಯೋ ಕುಸ್ತಿ ಸ್ಪರ್ದೆ ಲಿ ಭಾಗವಹಿಸಿ ಅವರು ಇವರಿಗೆ ಕುಸ್ತಿ ತರಬೇತಿ ಕೊಟ್ಡು ಜೀವನ ಸಾಗಸ್ತಾ ಇದ್ದ..  ಅವನ ಊಟಾ ಮಾಡೋ ಪದ್ದತಿನೂ ಅದ್ಭುತ...ಹಾಲನ್ಯಾಗ ನಾಲ್ಕ ರೊಟ್ಟಿ,ಮೊಸರನ್ಯಾಗ ನಾಲ್ಕ ರೊಟ್ಟಿ,ಮಜ್ಜಗ್ಯಾಗ ನಾಲ್ಕ ರೊಟ್ಡಿ.ಜೊತೆಗೆ ಒಂದ ತಾಟ ಅನ್ನ ಊಟಾ ಮಾಡತಿದ್ದ...ಹಿಂಗ ದೂಸಾ ಕಳದವೂ..ಆದರೂ ನೌಕರಿ ಹತ್ತಲಿಲ್ಲ.. 
     ನೌಕರಿ ನನಗ ಸಿಗೊದಿಲ್ಲ ಅಂತ ಅನ್ನಕೊಂಡು ಬೆಂಗಳೂರಿಗೆ ಬರ್ತಾನೆ ಮಲ್ಲೇಶಪ್ಪ..ಪ್ರಭಾವಿ ರಾಜಕಾರಣಿ ಯೊಬ್ಬರ ಪರಿಚಯವಾಗಿ ಅವರ ಆಫೀಸ್ ಲ್ಲಿ ಗುಮಾಸ್ತ ನಾಗಿ ಕೆಲಸ ಮಾಡಲು ಶುರು ಮಾಡ್ತಾನೆ..ಅಲ್ಲಿ ಅವನ ಅಕ್ಷರ ಬರವಣಿಗೆ,ಅವನ ಶ್ರಧ್ದೆ ನೋಡಿ ಆ ರಾಜಕಾರಣಿ ಇವನಿಗೆ ಅವನೂರಿನಿಂದ ಸುಮಾರು 300 ಕಿ.ಮಿ.ದೂರ ಇರೋ ಕಡೆ ಶಿಕ್ಷಕ ಕೆಲಸ ಕೊಡಿಸುವರು..ಆಗ ಈ ಮಲ್ಕೇಶಪ್ಪನ ಖುಷಿಗೆ ಪಾರವೇ ಇಲ್ಲ..ಕೆಲಸ ಕೊಡಿಸಿದ ದಣಿಗೆ ಸಾಷ್ಟಾಂಗ ನಮಿಸಿ ಶಿಕ್ಷಕ ವೃತ್ತಿಗೆ ಹಾಜರಾಗುವನು.ಇಷ್ರಲ್ಲಾಗಲೇ ಅವನಿಗೆ 37 ವರ್ಷ ಗತಿಸಿರುತ್ತವೆ..ಕೊನೆಗೂ ಅವನೊಪ್ಪುವಂತಹ ಹುಡುಗಿ ಸಿಗತಾಳೆ..
ಅವಳಿಗೂ ಸರ್ಕಾರಿ ಆಸ್ಪತ್ರೆ ಯಲ್ಲಿ ಸ್ಟಾಫ ನರ್ಸ ಕೆಲಸ ಸಿಗುತ್ತದೆ... ಈಗ ಅವರಿಬ್ಬರೂ ದೇವರಿಗೆ ಕೃತಜ್ಞತೆ ಯ ಸುರಿಮಳೆ ಸುರಿಸುವರು.. ಶಿಕ್ಷಕ ಮಲ್ಲೇಶಪ್ಪ ತಾನು ಕಲಿತ ವಿದ್ಯೆಯಾದ ಕುಸ್ತಿ,ಗುಂಡು ಎಸೆತ,ಕಬಡ್ಡಿ,ಮುಂತಾದ ಆಟಗಳನ್ನು ಮಕ್ಕಳಿಗೆ ಹೇಳಿಕೊಡುವನು..ಮಕ್ಕಳಿಗೆ ವ್ಯಾಯಾಮ,ಆಟೋಟಗಳ ಮಹತ್ವ ಸಾರಿ ಸಾರಿ ತಿಳಿಸುವನು..ಅವರಿಗೆ ಓಟ,ಹೈಜಂಪ,ಲಾಂಗಜಂಪ ಜಿಗಿಯುವ ಕೌಶಲ್ಯಗಳನ್ನು ಬೆಳೆಸುವನು..ಹೀಗಾಗಿ ಶಾಲಾ ಮಕ್ಕಳು ಎಲ್ಲವನ್ನು ಚೆನ್ನಾಗಿ ಕಲಿತು ಮುಂದಿನ ತರಗತಿಗಳಲ್ಲಿ ಅದನ್ನ ಅಳವಡಿಸಿಕೊಂಡರು..ಮುಂದೆ ಆ ಊರಾದ ಪಂಚನಹಳ್ಳಿಯಲ್ಲಿ ಸುಮಾರು ಹುಡುಗರು ಮಿಲಿಟರಿ, ಪೋಲೀಸ್, ಆರ್ಮಿ,ಹೀಗೆ ಹತ್ತು ಹಲವಾರು ಹುದ್ದೆಗಳನ್ನು ಗಿಟ್ಟಿಸಿಕೊಂಡರು..ನಮ್ಮ ಪೈಲ್ವಾನ ಮಲ್ಲೇಶಪ್ಪನವರ ಕನಸುಗಳನ್ನು ಅವರ ವಿದ್ಯಾರ್ಥಿಗಳು ನನಸು ಮಾಡಿದರು‌.ಎಲ್ಲೋ ಒಂದ್ಕಡೆ ಅವರಿಗೆ ನಾನು ಮಾಡದ ಸಾಧನೆ ನಮ್ಮ ಶಾಲಾ ಮಕ್ಕಳು ಮಾಡದರು ಎಂದು ಶಾನೆ ಖುಸಿ ಪಟ್ಟರು..ಎಲ್ರೂ ಅವರನ್ನ ಪೈಲ್ವಾನ ಮೇಷ್ಟ್ರು ಅಂತಲೇ ಕರಿತಾ ಇದ್ದರು..ವಯಸ್ಸು ಆದರೂ ಅವರಿನ್ನು  ನಾಲವತ್ತ ವಯಸ್ಸ ತರಾ ಕಾಣತಾ ಇದ್ದರು..ಕೊನೆಗೆ ಅವರು ನಿವೃತ್ತಿ ಯಾದಾಗ ಇಡೀ ಶಿಕ್ಷಣ ಇಲಾಖೆ,ಆ ಗ್ರಾಮದ ಈಡೀ ಗ್ರಾಮಸ್ಥರು ಅವರಿಗೆ ಅತ್ಯಂತ ಭಾವ ತುಂಬಿದ ಬೀಳ್ಕೋಡುಗೆ ಕೊಟ್ಟರು...ಅವರೆಲ್ಲರ ಸ್ಮೃತಿ ಪಟಲದಲ್ಲಿ ಚಿರಸ್ಥಾಯಿಯಾಗಿ ನಿಂತರು ನಮ್ಮ ಕಥಾ ನಾಯಕ ಪೈಲ್ವಾನ ಮಾಸ್ತರ ಮಲ್ಲೇಶಪ್ಪ ನವರು...

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ