Skip to main content

ಗಝಲ್ @ ಆನಂದ ಮಾಲಗಿತ್ತಿಮಠ

ಆ ಮತ ಈ ಮತವೆಂಬ ಹಂಗೇತಕೋ ಬರಿ ಮತದಾರನಾಗು ಸಾಕು
ಪಟವಾಗಿ ಬಾನೆತ್ತರ ನಾನೇರುವೆ ನೀನದಕೆ ಬರಿ ದಾರವಾಗು ಸಾಕು

ಚಿಗುರಿ ಹಬ್ಬುತ ನಲಿದು ನನ್ನವರಿಗೆ ನೆರಳಾಗಿ ಅವರೂ ಚಿಗುರಬೇಕು
ಬುಡದಲಿ ಬೆವರು ಸುರಿಸುವ ಬಡ ತೊಗಲಿನ ಕೂಲಿಯಾಗು ಸಾಕು

ನಾನಾಳುವವನು ಅಳುವುದಿಲ್ಲ ಅತ್ತರದು ಬರಿ ಬಹಿರಂಗದ ನಾಟಕ
ಮಹಿಯನೊಡೆಯನಾಗಲು ಮಾಡುವ ಪೂಜೆಗೆ ಬಲಿಯಾಗು ಸಾಕು

ಮೈಯೊಣಗಿ ನಾರಿದರೇನು ಕುಶಲವಾಗಿರಲಿ ಕಡೆತನ ತೋರು ಬೆರಳು 
ತೇರಿನಲಿ ಸಾಗುವವನು ನಾನು  ಭಾರ ಹೊರುವ ಗಾಲಿಯಾಗು ಸಾಕು

ಅರ್ಧರಾತ್ರಿಯಲಿ ಅಥರ್ವನಿಗೆ ಎಚ್ಚರಾಗಿ ಬುದ್ದನಾದರೂ ಚಿಂತೆಯಿಲ್ಲ
ಪ್ರಶ್ನಿಸಿ ಪ್ರಬುದ್ಧನಾಗದೇ ನನಗೇ ನೇತಾಡುವ ಬಾವಲಿಯಾಗು ಸಾಕು

ಇದನ್ನೂ ಓದಿ








 

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...